Showing posts with label ಏರ್‌ ಶೋ. Show all posts
Showing posts with label ಏರ್‌ ಶೋ. Show all posts

Tuesday, February 11, 2025

ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

 ಇದು ಹಕ್ಕಿಯಲ್ಲ.. ಶತಕೋಟಿ ಅವಕಾಶಗಳ ರನ್‌ ವೇ…!

ಇದು ಸುವರ್ಣ ನೋಟ

ಬೆಂಗಳೂರಿನಲ್ಲಿ ಏರೋ ಇಂಡಿಯಾದ 15 ನೇ ಆವೃತ್ತಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರಿಂದ 2025ರ ಫೆಬ್ರುವರಿ 10ರಂದು ಬೆಂಗಳೂರಿನ ಯಲಹಂಕ ಏರ್‌ ಫೋರ್ಸ್‌ ಸ್ಟೇಷನ್ನಿನಲ್ ಉದ್ಘಾಟನೆಗೊಂಡಿದೆ. ಇದರೊಂದಿಗೆ ಏಷ್ಯಾದ ಅತಿದೊಡ್ಡ ಏರೋಸ್ಪೇಸ್‌ ಮತ್ತು ರಕ್ಷಣಾ ಪ್ರದರ್ಶನ ಅನಾವರಣಗೊಂಡಿವೆ.

ʼದಿ ರನ್‌ ವೇ ಟು ಎ ಬಿಲಿಯನ್‌ ಅಪರ್ಚುನಿಟೀಸ್‌ʼ ಎಂಬ ವಿಶಾಲ ಥೀಮಿನೊಂದಿಗೆ ಆರಂಭವಾಗಿರುವ ಈ ʼಲೋಹದ ಹಕ್ಕಿಗಳʼ ಐದು ದಿನಗಳ ಮೇಳದಲ್ಲಿ ಭಾರತ ಸೇರಿದಂತೆ 90 ದೇಶಗಳ 900 ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಅಂದಾಜು 30 ರಕ್ಷಣಾ ಮಂತ್ರಿಗಳು ಮತ್ತು 100 ಕ್ಕೂ ಹೆಚ್ಚು OEM ಗಳು (ಮೂಲ ಸಲಕರಣೆ ತಯಾರಕರು) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜಾಗತಿಕ ಏರೋಸ್ಪೇಸ್‌ ಕಂಪೆನಿಗಳ ಅತ್ಯಾಧುನಿಕ ವಿಮಾನಗಳು, ಹೆಲಿಕಾಪ್ಟರ್‌ ಇತ್ಯಾದಿ ಉತ್ಪನ್ನಗಳ ಜೊತೆಗೆ ಅತ್ಯಾಧುನಿಕ ಆವಿಷ್ಕಾರಗಳಿಗೆ ಸಂಬಂಧಿಸಿದಂತೆ, ದೇಶೀ ಉತ್ಪನ್ನಗಳ ಉತ್ಪಾದನೆಯಲ್ಲಿ ಅಂತಾರಾಷ್ಟ್ಟೀಯ ಸಹಯೋಗ ಸಾಧನೆಯ ವೇದಿಕೆ ರೂಪಿಸಲು ಈ ಮೇಳ ಅನುವು ಮಾಡಿಕೊಡಲಿದೆ. ತನ್ಮೂಲಕ ʼಆತ್ಮ ನಿರ್ಭರ ಭಾರತʼ ಮತ್ತು ʼಮೇಕ್‌ ಇನ್‌ ಇಂಡಿಯಾ, ಮೇಕ್‌ ಫಾರ್‌ ದಿ ವರ್ಲ್ಡ್‌ʼ ದೃಷ್ಟಿಗೆ ಅನುಗುಣವಾಗಿ 2047 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಅನುಗಣವಾದ ʼವಿಕಸಿತ ಭಾರತʼದ ಗುರಿ ಸಾಧನೆಗೆ ಒತ್ತು ಸಿಗಲಿದೆ.

ಗಡಚಿಕ್ಕುವ ಸದ್ದಿನೊಂದಿಗೆ ಬಾನಿನಲ್ಲಿ ಮೋಡಿ ಮಾಡುವ ವೈವಿಧ್ಯಮಯ ವಿಮಾನ, ಹೆಲಿಕಾಪ್ಟರುಗಳ ʼಬಾನಿನಾಟʼ ನೋಡಲು ತೆರಳಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಅವರ ಕ್ಯಾಮರಾದಲ್ಲಿ ಈ ʼವೈಮಾನಿಕ ಮೇಳʼ ಮೂಡಿ ಬಂದ ಬಗೆ ಇಲ್ಲಿದೆ.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.

-ನೆತ್ರಕೆರೆ ಉದಯಶಂಕರ

















ಕೆಳಗಿನವುಗಳನ್ನೂ ಓದಿರಿ: 

ನಾಗರ ʼಹೊಳೆʼಯಲ್ಲಿ ಹಿಮ-ಚಳಿ ಮೇಳ!

ಪಕ್ಷಿ ಕಂಡರೆ ಸಾಕು… ʼಶೂಟ್‌ʼ…! ಇದು ʼಸುವರ್ಣ ನೋಟʼ

೨೦೨೪ರ ಕೊನೆಯ ಸೂರ್ಯಾಸ್ತಮಾನ... ʼಸುವರ್ಣʼ ನೋಟ..!

ಹಿಂಗಾರು ಮಳೆಗೆ ತೊಯ್ದ ವಿಧಾನಸೌಧ.. ಸುವರ್ಣ ನೋಟ

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

ಗಗನಗಾಮಿ ಕೃಷ್ಣಮೃಗ..! (ಇದು ಸುವರ್ಣ ನೋಟ)

ಇನ್ನೂ ಓದಿಲ್ಲವೇ?

ಬೆಂಗಳೂರಿನ ಭೂ ಮಾಫಿಯಾ- ಭ್ರಷ್ಟಾಚಾರದ ಚಕ್ರವ್ಯೂಹ

(ಮೇಲಿನ ಚಿತ್ರ ಕ್ಲಿಕ್‌ ಮಾಡಿ ನೋಡಿ. ಯುಪಿಐ ಮೂಲಕ ಕೇವಲ ಶೇಕಡಾ 50 ರಷ್ಟು ಪಾವತಿಸಿ ಈ👆 ಡಿಜಿಟಲ್‌ ಪುಸ್ತಕ ಪಡೆಯಿರಿ. ಸಂಪರ್ಕಿಸಿ: 9480215706/ 9845049970)

Advertisement