Showing posts with label Air Crash. Show all posts
Showing posts with label Air Crash. Show all posts

Saturday, August 8, 2020

ಸಹ ಪೈಲಟ್ ಪತ್ನಿಗೆ ಗೊತ್ತೇ ಇಲ್ಲ.. ಪತಿಯ ಸಾವಿನ ಸುದ್ದಿ..!

 ಸಹ ಪೈಲಟ್ ಪತ್ನಿಗೆ ಗೊತ್ತೇ ಇಲ್ಲ.. ಪತಿಯ ಸಾವಿನ ಸುದ್ದಿ..!

ಆಗ್ರಾ: ಕೇರಳದಲ್ಲಿ  2020 ಆಗಸ್ಟ್  08ರ ಶುಕ್ರವಾರ ಸಂಜೆ ಸಂಭವಿಸಿದ ಎರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ವಿಮಾನದ ಸಹ ಪೈಲಟ್ ೩೨ ವರ್ಷದ ಅಖಿಲೇಶ್ ಶರ್ಮಾ ಅವರ ಸಾವಿನ ಸುದ್ದಿಯಿಂದ ಇಡೀ ಕುಟುಂಬ ಆಘಾತಗೊಂಡಿದೆ. ಆದರೆ ಹದಿನೈದು ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವ ಶರ್ಮಾ ಅವರ ಪತ್ನಿ ಮೇಘಾ (೨೯), ಅವರಿಗೆ ತನ್ನ ಗಂಡನ ಸಾವಿನ ಬಗ್ಗೆ ಇನ್ನೂ ತಿಳಿಸಲಾಗಿಲ್ಲ.

ಕುಟುಂಬವು ಉತ್ತರ ಪ್ರದೇಶದ ಮಥುರಾದ ಗೋವಿಂದ್ ನಗರ ಪ್ರದೇಶದಲ್ಲಿ ವಾಸವಾಗಿದೆ.

"ವಿಮಾನ ಅಪಘಾತದ ನಂತರ ಭೈಯಾ (ಅಖಿಲೇಶ್) ಸ್ಥತಿ ಗಂಭೀರವಾಗಿದ್ದು ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ನಮಗೆ ಸಿಕ್ಕಿತು. ಆದರೆ ಶುಕ್ರವಾರ ರಾತ್ರಿ ಅವರ ಸಾವಿನ ಬಗ್ಗೆ ನಮಗೆ ತಿಳಿಸಲಾಯಿತು. ನನ್ನ ಸಹೋದರ ಭುವನೇಶ್ ಮತ್ತು ಸೋದರ ಮಾವ ಸಂಜೀವ್ ಶರ್ಮಾ ದೆಹಲಿ ಮೂಲಕ ಕೋಯಿಕ್ಕೋಡಿಗೆ  ತೆರಳಿದ್ದಾರೆ ಎಂದು ಮಥುರಾದಲ್ಲಿ ವಾಸಿಸುವ ಲೋಕೇಶ್ ಶರ್ಮಾ  2020 ಆಗಸ್ಟ್ 08ರ ಶನಿವಾರ (೨೪) ಹೇಳಿದ್ದಾರೆ. ಲೋಕೇಶ್ ಕೂಡ ವಾಣಿಜ್ಯ ಪೈಲಟ್ ಆಗಲು ಬಯಸಿದ್ದಾರೆ.

 "ಇಂದಿನಿಂದ ಕೆಲವೇ ದಿನಗಳಲ್ಲಿ ಮಗುವನ್ನು ನಿರೀಕ್ಷಿಸುತ್ತಿರುವುದರಿಂದ ಪತಿ ಸಾವಿನ ಬಗ್ಗೆ ನಾವು ಭಾಭಿಗೆ (ಮೇಘಾ ಶರ್ಮಾ) ಹೇಳಿಲ್ಲ. ವಿಮಾನ ಅಪಘಾತದ ಬಗ್ಗೆ ಆಕೆಗೆ ತಿಳಿದಿz’ ಎಂದು ಲೋಕೇಶ್ ಶನಿವಾರ ಹೇಳಿದರು.

ಅಖಿಲೇಶ್ ಶರ್ಮಾ  ಅವರು ಭುವನೇಶ್ ಶರ್ಮಾ (೨೮) ಮತ್ತು ಲೋಕೇಶ್ ಶರ್ಮಾ (೨೪) ಅವರ ಹಿರಿಯ ಸಹೋದರರಾಗಿದ್ದರು ಮತ್ತು ಅವರಿಗೆ ಒಬ್ಬ ಅಕ್ಕ ಕೂಡ ಇದ್ದು ಅವರ ಮದುವೆಯಾಗಿದೆ. ಅವರ ತಂದೆ ತುಳಸಿ ರಾಮ್ ಶರ್ಮಾ ಮಥುರಾದಲ್ಲಿ ವ್ಯವಹಾರಸ್ಥರಾಗಿದ್ದು, ಅವರು ಮಥುರಾ ಜಿಲ್ಲೆಯ ತಮ್ಮ ಪಿತೃ ಗ್ರಾಮದಿಂದ ಮಥುರಾ ನಗರದ ಗೋವಿಂದ್ ನಗರಕ್ಕೆ ಬಂದಿದ್ದರು.

"ಅಖಿಲೇಶ್ ಮಥುರಾದ ಅಮರನಾಥ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು ಮತ್ತು ಪೈಲಟ್ ಆಗಿ ತರಬೇತಿ ಪಡೆಯಲು ಗೊಂಡಿಯಾದ (ಮಹಾರಾಷ್ಟ್ರ) ಸಿಎಇ ಆಕ್ಸ್‌ಫರ್ಡ್ ಏವಿಯೇಷನ್ ಅಕಾಡೆಮಿಗೆ ಸೇರಿದರು. ಅವರು ೨೦೧೭ ರಲ್ಲಿ ಏರ್ ಇಂಡಿಯಾಕ್ಕೆ ಸೇರಿದರು. ಅವರು ೨೦೧೮ ರಲ್ಲಿ ಮೇಘಾ ಅವರನ್ನು ವಿವಾಹವಾದರು ಮತ್ತು ದಂಪತಿ ಮಗುವನ್ನು ಪಡೆಯಲಿದ್ದಾರೆ ಆದರೆ ವಿಧಿಯು ಅವರನ್ನು ನಮ್ಮಿಂದ ಕಸಿದುಕೊಂಡಿತು ಎಂದು ಲೋಕೇಶ್ ಹೇಳಿದರು.

ಕೋಯಿಕ್ಕೋಡಿಗೆ ಹೋಗಿರುವ ಭುವನೇಶ್ ಗುರುಗ್ರಾಮದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಖಿಲೇಶ್ ಅವರ ಪಾರ್ಥಿವ ಅವಶೇಷಗಳು ಮಥುರಾವನ್ನು ತಲುಪಲು ಕುಟುಂಬವು ಈಗ ಕಾಯುತ್ತಿದೆ, ಅಲ್ಲಿ ಅಂತ್ಯಕ್ರಿಯೆ ಶೀಘ್ರದಲ್ಲೇ ನಡೆಯಲಿದೆ.

 

ಕೋಯಿಕ್ಕೋಡ್ ವಿಮಾನ ನಿಲ್ದಾಣ: ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿದ್ದ ಡಿಜಿಸಿಎ

 ಕೋಯಿಕ್ಕೋಡ್ ವಿಮಾನ ನಿಲ್ದಾಣ: ತಜ್ಞರ ಎಚ್ಚರಿಕೆ ನಿರ್ಲಕ್ಷಿಸಿದ್ದ ಡಿಜಿಸಿಎ

ನವದೆಹಲಿ:  ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಗಾಳಿ ಮಳೆ ಪರಿಸ್ಥಿತಿಯಲ್ಲಿ ರನ್‌ವೇ ೧೦ ರಲ್ಲಿ ಇಳಿಯುವ ವಿಮಾನಗಳು ವಿಮಾನಗಳಲ್ಲಿರುವ ಜನರ ಜೀವಕ್ಕೆ ಅಪಾಯವನ್ನುಂಟುಮಾಡಬಲ್ಲವು ಎಂಬುದಾಗಿ ನಾಗರಿಕ ವಿಮಾನಯಾನ ತಜ್ಞರು ೨೦೧೧ ರಲ್ಲಿ ಎಚ್ಚರಿಸಿದ್ದರು. ಆದರೆ ಅದು ಡಿಜಿಸಿಎಯ ಕಿವುಡು ಕಿವಿಗಳಿಗೆ ಬಿದ್ದಿರಲಿಲ್ಲ ಎಂದು ಸುದ್ದಿ ಮೂಲಗಳು  2020 ಆಗಸ್ಟ್ 08ರ ಶನಿವಾರ ತಿಳಿಸಿದವು.

ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಜೂನ್ ೨೦೧೧ ರಲ್ಲಿ ಅಂದಿನ ನಾಗರಿಕ ವಿಮಾನಯಾನ ಕಾರ್ಯದರ್ಶಿ ನಾಸಿಮ್ ಜೈದಿ ಅವರಿಗೆ ನೀಡಿದ ಸಂವಹನದಲ್ಲಿ ರನ್ ವೇ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ರಂಗನಾಥನ್ ಆಗ ನಾಗರಿಕ ವಿಮಾನಯಾನ ಸುರಕ್ಷತಾ ಸಲಹಾ ಸಮಿತಿಯ (ಸಿಎಎಸ್‌ಎಸಿ) ಕಾರ್ಯಾಚರಣೆಯ ಗುಂಪಿನ ಸದಸ್ಯರಾಗಿದ್ದರು.

ಗಾಳಿಮಳೆಯ ಪರಿಸ್ಥಿತಿಯಲ್ಲಿ ವಿಮಾನವನ್ನು ಕೋಯಿಕ್ಕೋಡಿನಿಂದ ಕೊಯಮತ್ತೂರಿಗೆ ತಿರುಗಿಸಬೇಕಾಗಿತ್ತು. ವಿಮಾನ ನಿಲ್ದಾಣ ದೊಡ್ಡ ವಿಮಾನಗಳು ಬೋಯಿಂಗ್ ೭೩೭ ಹೊರತಾಗಿ ದೊಡ್ಡ ಗಾತ್ರದ ವಿಮಾನಗಳನ್ನು ಇಂತಹ ಸಂದರ್ಭಗಳಲ್ಲಿ ಇಳಿಸಲು ಸೂಕ್ತವಾದದ್ದೇ ಅಲ್ಲ ಎಂದು ರಂಗನಾಥನ್ ಹೇಳಿದರು.

ತಾವು ಇದ್ದಾಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ೨೦೧೧ರಲ್ಲಿ ತಾವು ನೀಡಿದ್ದ ಎಚ್ಚರಿಕೆ ಸಂದರ್ಭಕ್ಕೂ ಪ್ರಸ್ತುತವೇ ಎಂದು ನುಡಿದ ಅವರು ಟೇಬಲ್ ಟಾಪ್ ರನ್ ವೇಗಳು ಇರುವ ಎಲ್ಲ ವಿಮಾನ ನಿಲ್ದಾಣಗಳೂ ಮಾದರಿಯ ಅಪಾಯದಿಂದ ಹೊರತಾಗಿರುವುದಿಲ್ಲ ಎಂದು ಹೇಳಿದರು.

೨೪೦ ಮೀಟರ್  ರೇಸಾವನ್ನು ತಕ್ಷಣ ಪರಿಚಯಿಸಬೇಕು ಮತ್ತು ವಿಮಾನ ಕಾರ್ಯಾಚರಣೆಯನ್ನು ಸುರಕ್ಷಿತವಾಗಿಸಲು ರನ್ ವೇ ಉದ್ದವನ್ನು ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದ್ದರು.

"ವಾಯುಯಾನ ಅನಾಹುತಗಳನ್ನು ತಪ್ಪಿಸಲು ಎರಡೂ ಬದಿಯಲ್ಲಿ ೧೫೦ ಮೀ ಇರಬೇಕು" ಎಂದು ಕ್ಯಾಪ್ಟನ್ ರಂಗನಾಥನ್ ಸೂಚಿಸಿದ್ದರು. “ಆದರೆ ಅಲ್ಲಿ ಸಾಕಷ್ಟು ಪ್ರದೇಶವಿಲ್ಲ. ಇದು ಯಾವಾಗಲೂ ಅಪಾಯಕಾರಿ ಎಂದು ಅವರು ಹೇಳಿದ್ದರು.

ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಇಬ್ಬರು ಪೈಲಟ್‌ಗಳು ಸೇರಿದಂತೆ ಕನಿಷ್ಠ ೧೮ ಜನರು ಸಾವನ್ನಪ್ಪಿದ್ದಾರೆ. ದುಬೈಯಿಂದ  ಬರುತ್ತಿದ್ದ ಬೋಯಿಂಗ್ ೭೩೭-೮೦೦ ವಿಮಾನವು ಭಾರಿ ಮಳೆಯಲ್ಲಿ ಇಳಿಯುವಾಗ ರನ್‌ವೇಯಿಂದ ಜಾರಿ ಕಣಿವೆಗೆ ಉರುಳಿ ಇಬ್ಬಾಗಗೊಂಡಿತ್ತು.

"... ಸಿಬ್ಬಂದಿ ಆರ್ದ್ರ ಮತ್ತು ಗಾಳಿಮಳೆ ಪರಿಸ್ಥಿತಿಗಳಲ್ಲಿ ಇಳಿಯುವುದನ್ನು ಒಪ್ಪಿಕೊಂಡರೆ, ಅವರ ಎಎಲ್ ಎಆರ್ (ಅಪ್ರೋಚ್ ಅಂಡ್ ಲ್ಯಾಂಡಿಂಗ್ ಆಕ್ಸಿಡೆಂಟ್ ರಿಡಕ್ಷನ್) ಪರಿಕಲ್ಪನೆಯು ತುಂಬಾ ಕಳಪೆಯಾಗಿದೆ ಎಂದರ್ಥ" ಎಂದು ಅವರು ಸಂವಹನದಲ್ಲಿ ತಿಳಿಸಿದ್ದರು.

೨೦೧೦ ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಸಂವಹನವನ್ನು ಅವರು ನೀಡಿದ್ದರು. ಮಂಗಳೂರು ವಿಮಾನ ಅಪಘಾತದಲ್ಲಿ ೧೫೮ ಜನರು ಸಾವನ್ನಪ್ಪಿದ್ದರು.

ಬಾಲದತ್ತ ಗಾಳಿಮಳೆ ಬೀಸುವ ಪರಿಸ್ಥಿತಿಗಳಲ್ಲಿ ರನ್‌ವೇ ೧೦ ರಲ್ಲಿ ಇಳಿಯುವ ಎಲ್ಲಾ ವಿಮಾನಗಳು ವಿಮಾನದಲ್ಲಿರುವ ಎಲ್ಲರ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ರಂಗನಾಥನ್ ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ, ಇಳಿಯುವ ಸಮಯದಲ್ಲಿ ವಿಮಾನದ ಇಳಿಯುವಿಕೆ ಮೇಲೆ ಪರಿಣಾಮವಾಗಬಹುದು. ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣವು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಡಿಯಲ್ಲಿ ಬರುತ್ತದೆ. ವಿಮಾನ ನಿಲ್ದಾಣವು ಮಂಗಳೂರಿನಂತೆಯೇ ಟೇಬಲ್ ಟಾಪ್ ರನ್ ವೇ ಹೊಂದಿದೆ.

ಸಂವಹನದ ನಂತರ ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ವಿವರಗಳು ಪತ್ತೆಯಾಗಿಲ್ಲ.

ದುರಂತದಲ್ಲಿ ೧೮ ಜನರು ಮೃತರಾಗಿದ್ದು, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ೧೪೯ ಜರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಜಿಲ್ಲೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಹೇಳಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹ ಸಭೆಯಲ್ಲಿ ಭಾಗವಹಿಸಿದ್ದರು.

"ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ರಾಜ್ಯ ಸರ್ಕಾರ ೧೦ ಲಕ್ಷ ರೂ.ಗಳ ಪರಿಹಾರವನ್ನು ನೀಡಲಿದೆ. ಚಿಕಿತ್ಸೆಯಲ್ಲಿರುವವರ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಲಿದೆ" ಎಂದು ವಿಜಯನ್ ಹೇಳಿದರು. ಸಾವನ್ನಪ್ಪಿದ ೧೮ ಜನರಲ್ಲಿ ೧೪ ವಯಸ್ಕರು ಮತ್ತು ನಾಲ್ವರು ಮಕ್ಕಳು ಎಂದು ಅವರು ಹೇಳಿದರು.

"೧೪ ವಯಸ್ಕರಲ್ಲಿ, ಏಳು ಪುರುಷರು ಮತ್ತು ಇತರರು ಸ್ತ್ರೀಯರು. ಪ್ರಸ್ತುತ, ೧೪೯ ಜನರು ಮಲಪ್ಪುರಂ ಮತ್ತು ಕೋಯಿಕ್ಕೋಡಿನ ವಿವಿಧ ಆಸ್ಪತ್ರೆಗಳಲ್ಲಿದ್ದಾರೆ, ಅವರಲ್ಲಿ ೨೩ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮೊದಲು ೨೩ ಮಂದಿಯನ್ನು ಆರಂಭಿಕ ವೈದ್ಯಕೀಯ ನೆರವು ನೀಡಿದ ನಂತರ ಬಿಡುಗಡೆ ಮಾಡಲಾಗಿದೆ" ಎಂದು ಅವರು ಹೇಳಿದರು.

ಎಲ್ಲ ಪ್ರಯಾಣಿಕರನ್ನು ಕ್ವಾರಂಟೈನಿಗೆ  ಒಳಪಡಿಸಲಾಗುವುದು. ಸಾಮಾನ್ಯ ಜೀವನಕ್ಕೆ ಮರಳಲು ಅವರಿಗೆ ಅಗತ್ಯ ಬೆಂಬಲ ನೀಡುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ನುಡಿದರು.

 

Advertisement