Showing posts with label Arogya/ Health/ Yoga china Coronavirus Flash News India Nation News ರಾಷ್ಟ್ರೀಯ ಸುದ್ದಿ. Show all posts
Showing posts with label Arogya/ Health/ Yoga china Coronavirus Flash News India Nation News ರಾಷ್ಟ್ರೀಯ ಸುದ್ದಿ. Show all posts

Thursday, May 28, 2020

ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ನೀರು, ಆಹಾರ: ಸುಪ್ರೀಂ ಆದೇಶ

ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣ, ನೀರು, ಆಹಾರ: ಸುಪ್ರೀಂ ಆದೇಶ

ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರಿಂದ ರೈಲು ಅಥವಾ ಬಸ್ಸು ಟಿಕೆಟ್ ದರ ವಸೂಲಿ ಮಾಡಬಾರದು ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ 2020 ಮೇ 28ರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

ಸ್ವ ಇಚ್ಛೆಯಿಂದ ದಾಖಲಿಸಿದ ಪ್ರಕರಣದಲ್ಲಿ, ಮಧ್ಯಂತರ ನಿರ್ದೇಶನ ನೀಡಿದ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು, ಸಿಕ್ಕಿಹಾಕಿಕೊಂಡಿರುವ ಎಲ್ಲ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಕಟಿತ ಮತ್ತು ಘೋಷಿತ ಸ್ಥಳಗಳಲ್ಲಿ ಅವರಿಗೆ ರೈಲು ಅಥವಾ ಬಸ್ಸು ಏರಲು ಸಾಧ್ಯವಾಗುವವರೆಗೂ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿತು.

ಪಯಣ ಆರಂಭವಾಗುವ ರಾಜ್ಯವು ನಿಲ್ದಾಣಗಳಲ್ಲಿಯೇ ಊಟ ಮತ್ತು ನೀರನ್ನು ಒದಗಿಸಬೇಕು, ಭಾರತೀಯ ರೈಲ್ವೇಯು ಪಯಣದ ವೇಳೆಯಲ್ಲಿ ಅವರಿಗೆ ಆಹಾರ ನೀರನ್ನು ಒದಗಿಸಬೇಕು. ಬಸ್ಸು ಪಯಣದಲ್ಲೂ ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಪೀಠ ಸೂಚಿಸಿತು.

ವಲಸೆ ಕಾರ್ಮಿಕರಿಗೆ ಆದಷ್ಟೂ ಬೇಗನೆ ರೈಲು ಅಥವಾ ಬಸ್ಸು ಪಯಣ ಮಾಡಲು ಸಾಧ್ಯವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ರಾಜ್ಯಗಳು ಮಾಡಬೇಕು. ನಿಟ್ಟಿನ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಆರ್ ಶಾ ಅವರನ್ನೂ ಒಳಗೊಂಡ ಪೀಠ ನಿರ್ದೇಶನ ನೀಡಿತು.

ತಮ್ಮ ಮನೆಗಳಿಗೆ ವಾಪಸಾಗಲು ಯತ್ನಿಸುತ್ತಿರುವ ವಲಸೆ ಕಾರ್ಮಿಕರು ತೊಂದರೆಗಳು ಕಳವಳದಾಯಕ. ಸಂಬಂಧಪಟ್ಟ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ನೋಂದಣಿ, ಸಾಗಣೆ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಮತ್ತು ನೀರು ಒದಗಿಸುವ ಪ್ರಕ್ರಿಯೆಯಲ್ಲಿ ಹಲವಾರು ನ್ಯೂನತೆಗಳು ಕಂಡು ಬಂದಿವೆ ಎಂದು ಕೋರ್ಟ್ ಹೇಳಿತು.

ಇದಕ್ಕೆ ಮುನ್ನ ವಲಸೆ ಕಾರ್ಮಿಕರ ಸಮಸ್ಯೆಯು ಅಭೂತಪೂರ್ವ ಬಿಕ್ಕಟ್ಟಾಗಿದ್ದು, ಅಭೂತಪೂರ್ವ ಬಿಕ್ಕಟ್ಟನ್ನು ಬಗೆ ಹರಿಸಲು ಸರ್ಕಾರ ಅಭೂತಪೂರ್ವ ಕ್ರಮಗಳನ್ನು ಕೈಗೊಂಡಿದೆ. ಮೇ ೧ರಿಂದ ಇಲ್ಲಿಯವರೆಗೆ ೯೭ ಲಕ್ಷ ವಲಸೆ  ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಕಳುಹಿಸಿಕೊಟ್ಟಿದೆ ಎಂದು ಕೇಂದ್ರ ಸರ್ಕಾರವು ಗುರುವಾರ ಬೆಳಗ್ಗೆ ಸುಪ್ರೀಂಕೋರ್ಟಿಗೆ ವಿವರಿಸಿತ್ತು.

ಇದೊಂದು ಅಭೂತಪೂರ್ವ ಬಿಕ್ಕಟ್ಟು ಮತ್ತು ನಾವು ಅಭೂತಪೂರ್ವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಕೋವಿಡ್-೧೯ ದಿಗ್ಬಂಧನ (ಲಾಕ್ ಡೌನ್) ವೇಳೆಯಲ್ಲಿನ ವಲಸೆ ಕಾರ್ಮಿಕರ ಪರಿಸ್ಥಿತಿ ಕುರಿತು ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿದರು.

ಸಿಕ್ಕಿಹಾಕಿಕೊಂಡು ತಮ್ಮ ಹುಟ್ಟೂರುಗಳಿಗೆ ವಾಪಸಾಗಬಯಸುವ ವಲಸೆ ಕಾರ್ಮಿಕರನ್ನು ತಡೆಯಬಾರದುಎಂದು ಪೀಠವು ಹೇಳಿತು.

ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ತೆರಳಬಯಸಿದರೆ, ಯಾವ ರಾಜ್ಯವೂ ನಾವು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವುದಿಲ್ಲ ಎಂದು ಹೇಳಬಾರದುಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು ಹೇಳಿತು. ಸುಪ್ರೀಂಕೋರ್ಟ್ ಪೀಠವು ಸ್ವ ಇಚ್ಛೆಯಿಂದ ವಲಸೆ ಕಾರ್ಮಿಕರ ಸ್ಥಿತಿಗತಿ ಕುರಿತ ಪ್ರಕರಣವನ್ನು ವಿಚಾರಣೆಗಾಗಿ ಎತ್ತಿಕೊಂಡಿತ್ತು.

ತಮ್ಮ ರಾಜ್ಯಗಳಿಗೆ ವಾಪಸಾಗಬಯಸುವ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಕಾಲಮಿತಿಯೊಂದನ್ನು ಸರ್ಕಾರವು ಹಾಕಿಕೊಳ್ಳಬೇಕು. ಮಧ್ಯಂತರದ ಅವಧಿಯಲ್ಲಿ ಅವರಿಗೆ ಆಹಾರ ಮತ್ತು ಇತರ  ಸವಲತ್ತುಗಳನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ನುಡಿದರು.

ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನ್ಯಾಯಾಲಯಕ್ಕೆ ನೀಡಿದ ಸರ್ಕಾರ ೫೦ ಲಕ್ಷ ವಲಸೆ ಕಾರ್ಮಿಕರನ್ನು ಮೇ ೧ರಿಂದ ೨೭ರ ನಡುವಣ ಅವಧಿಯಲ್ಲಿ ಶ್ರಮಿಕ ವಿಶೇಷ ರೈಲುಗಳ ಮೂಲಕ ಅವರವರ ಹುಟ್ಟೂರುಗಳಿಗೆ ಕಳುಹಿಸಲಾಗಿದೆ. ೪೧ ಲಕ್ಷ ಮಂದಿಯನ್ನು ರಸ್ತೆ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿತು.

ಮೇ ೧ರಿಂದ ಇಲ್ಲಿಯವರೆಗೆ ೯೭ ಲಕ್ಷ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲಾಗಿದೆಎಂದು ತುಷಾರ ಮೆಹ್ತ ನುಡಿದರು.

ರಾಜ್ಯಗಳು ಪೂರ್ತಿ ಮಾಹಿತಿ ನೀಡಿದ ಬಳಿಕ ಮಾತ್ರವೇ ಸಿಕ್ಕಿ ಹಾಕಿಕೊಂಡ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಲು ಸಾಧ್ಯ. ಹುಟ್ಟೂರುಗಳಿಗೆ ಕಳುಹಿಸಲಾದ ವಲಸೆ ಕಾರ್ಮಿಕರ ಪೈಕಿ ಶೇಕಡಾ ೮೦ರಷ್ಟು ಮಂದಿ ಬಿಹಾರ ಮತ್ತು ಉತ್ತರ ಪ್ರದೇಶದವರು ಎಂದು ಸಾಲಿಸಿಟರ್ ಜನರಲ್ ನುಡಿದರು.

ರಾಜ್ಯಗಳು ಉತ್ತರಿಸಲಿ, ಆಗ ನಿಮಗೆ ಸಮಗ್ರ ಚಿತ್ರ ಲಭಿಸುತ್ತದೆ. ಬಿಡಿ ಘಟನೆಗಳು ವಿಚಾರಣೆಯ ಮೇಲೆ ಪ್ರಭಾವ ಬೀರದಿರಲಿಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಕಾಂಗ್ರೆಸ್ ಪಕ್ಷದಮಾತನಾಡಿ (ಸ್ಪೀಕ್ ಅಪ್) ಪ್ರಚಾರ ಅಭಿಯಾನದಲ್ಲಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರುಕೋವಿಡ್-೧೯ ದಿಗ್ಬಂಧನ ಪರಿಣಾಮವಾಗಿ ವಲಸೆ ಕಾರ್ಮಿಕರು ಮನೆ ತಲುಪಲು ಹೆದ್ದಾರಿಗಳಲ್ಲಿ ಬರಿಗಾಲುಗಳಲ್ಲಿ ಕಾಲ್ನಡಿಗೆ ಮಾಡುತ್ತಿರುವಾಗ  ಇಡೀ ರಾಷ್ಟವೇ ಹೇಗೆ ನೋವು ಅನುಭವಿಸಿತುಎಂದು ವಿವರಿಸಿದ್ದರು. ಬಡ ಜನರ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದೆಎಂದು ಸೋನಿಯಾ ಗಾಂಧಿ ಆಪಾದಿಸಿದ್ದರು.

ಸುಪ್ರೀಂಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಂಗಳವಾರ ನೋಟಿಸ್ ಜಾರಿ ಮಾಡಿತ್ತು. ವಲಸೆ ಕಾರ್ಮಿಕರ ಸಮಸ್ಯೆಯನ್ನು ನಿಭಾಯಿಸುವಲ್ಲಿ ಅಸಮಂಜಸತೆ ಮತ್ತು ಕೆಲವು ಲೋಪದೋಷಗಳಿದ್ದವು ಎಂದು ಪೀಠ ಹೇಳಿತ್ತು.

ಮಾಧ್ಯಮ ವರದಿಗಳು ನಿರಂತರವಾಗಿ ಸುದೀರ್ಘ ದೂರವನ್ನು ನಡೆಯುತ್ತಾ ಇಲ್ಲವೇ ಸೈಕಲ್‌ಗಳ ಮೂಲಕ ಕ್ರಮಿಸುವ ವಲಸೆ ಕಾರ್ಮಿಕರ ದುರದೃಷ್ಟಕರ ಮತ್ತು ದಾರುಣ ಪರಿಸ್ಥಿತಿಯನ್ನು ತೋರಿಸುತ್ತಿವೆಎಂದು ನ್ಯಾಯಾಲಯ ಹೇಳಿತ್ತು.

Monday, February 3, 2020

ಕೊರೊನಾವೈರಸ್: ಭಾರತದಿಂದ ಚೀನಾದ ನಾಗರಿಕರ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ

ಕೊರೊನಾವೈರಸ್: ಭಾರತದಿಂದ ಚೀನಾದ ನಾಗರಿಕರ -ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ
ಬೀಜಿಂಗ್:  ಚೀನಾದಲ್ಲಿ ಮಾರಕ ಕೊರೋನಾವೈರಸ್ ೩೦೦ ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡು, ಇತರ ೧೪,೫೬೨ ಮಂದಿಯನ್ನು ವ್ಯಾಧಿಗ್ರಸ್ತರನ್ನಾಗಿ ಮಾಡಿರುವ ಹಿನ್ನೆಲೆಯಲ್ಲಿ ಚೀನೀ  ಪ್ರಯಾಣಿಕರು ಮತ್ತು ಚೀನಾದಲ್ಲಿ ವಾಸವಾಗಿರುವ ವಿದೇಶಿಯರಿಗೆ -ವೀಸಾ ಸೌಲಭ್ಯವನ್ನು ಭಾರತ  2020 ಫೆಬ್ರುವರಿ 02ರ ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

ಭಾರತ, ಅಮೆರಿಕ ಹಾಗೂ ಇಂಗ್ಲೆಂಡ್ ಸೇರಿದಂತೆ ೨೫ ದೇಶಗಳಿಗೂ ಸೋಂಕು ಹರಡಿರುವುದನ್ನು ಅನುಸರಿಸಿ  -ವೀಸಾಗ ಮೂಲಕ ಭಾರತಕ್ಕೆ ಪ್ರಯಾಣ ಮಾಡುವುದನ್ನು ತಾತ್ಕಾಲಿಕವಾಗಿ vತ್ ಕ್ಷಣದಿಂದ ಜಾರಿಯಾಗುವಂತೆ ಸ್ಥಗಿತಗೊಳಿಸಲಾಗಿದೆಎಂದು ಭಾರತೀಯ ರಾಯಭಾರ ಕಚೇರಿ ಇಲ್ಲಿ ಪ್ರಕಟಿಸಿತು.

ಇದು ಚೀನಾದ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗೆ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದಲ್ಲಿ ವಾಸಿಸುವ ಇತರ ರಾಷ್ಟ್ರೀಯತೆಗಳ ಅರ್ಜಿದಾರರಿಗೆ ಅನ್ವಯಿಸುತ್ತದೆ. ಈಗಾಗಲೇ ನೀಡಲಾದ -ವೀಸಾಗಳನ್ನು ಹೊಂದಿರುವವರು ಇವುಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂಬುದನ್ನು ಮೂಲಕ ಗಮನಿಸಬೇಕುಎಂದು ಪ್ರಕಟಣೆ ತಿಳಿಸಿತು.

"ಭಾರತಕ್ಕೆ ಭೇಟಿ ನೀಡಲು ಬಲವಾದ ಕಾರಣವಿರುವ ವ್ಯಕ್ತಿಗಳು ಬೀಜಿಂಗ್ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಅಥವಾ ಶಾಂಘೈ ಇಲ್ಲವೇ ಗುವಾಂಗ್ಜೊವುನಲ್ಲಿರುವ ಭಾರತೀಯ ದೂತಾವಾಸಗಳನ್ನು ಮತ್ತು ನಗರಗಳಲ್ಲಿನ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು ಸಂಪರ್ಕಿಸಬಹುದು" ಎಂದು ಪ್ರಕಟಣೆ ಹೇಳಿತು.

ಚೀನಾದ ಕೊರೋನವೈರಸ್ ಪೀಡಿತ ವುಹಾನ್ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದ ೩೨೩ ಭಾರತೀಯರು ಮತ್ತು  ಏಳು ಮಂದಿ ಮಾಲ್ದೀವ್ ನಾಗರಿಕರನ್ನು ಭಾರತವು ವಿಮಾನದ ಮೂಲಕ ಸ್ಥಳಾಂತರಿಸಿತು. ಇದರೊಂದಿಗೆ  ಒಟ್ಟು ೬೫೪ ಜನರನ್ನು ತೆರವುಗೊಳಿಸಿದಂತಾಗಿದೆ.

ಏರ್ ಇಂಡಿಯಾದ ಜಂಬೊ ಬಿ ೭೪೭ ಕೊರೋನಾವೈರಸ್ ಕೇಂದ್ರವಾಗಿರುವ ವುಹಾನ್ ನಗರಕ್ಕೆ ಎರಡು ವಿಮಾನಗಳನ್ನು ಕಳುಹಿಸಿದ್ದು ಶನಿವಾರದ ಮೊದಲ ಹಾರಾಟದಲ್ಲಿ ೩೨೪ ಭಾರತೀಯರನ್ನು ಸ್ಥಳಾಂತರಿಸಲಾಯಿತು ಮತ್ತು ಭಾನುವಾರ ೩೨೩ ಭಾರತೀಯರು ಮತ್ತು ಏಳು ಮಾಲ್ದೀವ್ಸ್ ನಾಗರಿಕರನ್ನು ವುಹಾನ್ ನಿಂದ ತೆರವುಗೊಳಿಸಲಾಯಿತು.

ಕೇರಳದಲ್ಲಿ ೨ನೇ ಪ್ರಕರಣ: ಚೀನಾದಲ್ಲಿ ಕೊರೊನಾವೈರಸ್ ಸಾವಿನ ಸಂಖ್ಯೆ ೩೦೪ ಕ್ಕೆ ಏರಿಕೆಯಾಗುವುದರ ಜೊತೆಗೆ ೧೪,೦೦೦ ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲುತ್ತಿದ್ದಂತೆಯೇ , ಭಾರತದ ಕೇರಳದಲ್ಲಿ ಭಾನುವಾರ ಎರಡನೇ ಕೊರೋನಾವೈರಸ್ ದೃಢ ಪಟ್ಟಿತು. 
ಕೇರಳದ ಎರಡನೇ ರೋಗಿಯು ಚೀನಾ ಪ್ರಯಾಣದ ಇತಿಹಾಸವನ್ನು ಹೊಂದಿದ್ದು, ಅವರನ್ನು ಏಕಾಂಗಿವಾಸಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕೇರಳ ಸರ್ಕಾರದ ಮೂಲಗಳು ತಿಳಿಸಿದವು.

ಜೈಪುರದಲ್ಲಿ ಜನರಿಗೆ ಸೋಂಕು ಶಂಕೆ: ಏತನ್ಮಧ್ಯೆ, ಕೊರೋನವೈರಸ್ ರೋಗಲಕ್ಷಣಗಳಿವೆ ಎಂದು ಶಂಕಿಸಲಾಗಿರುವ ಮೂವರನ್ನು ಜೈಪುರದ ಎಸ್ಎಂಎಸ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಭಾನುವಾರ ಸಂಜೆ ವೇಳೆಗೆ ವರದಿ ಬರುವ ನಿರೀಕ್ಷೆಯಿದೆ ಎಂದು ಎಸ್ಎಂಎಸ್ ಆಸ್ಪತ್ರೆಯ ಅಧೀಕ್ಷಕರಾದ ಡಾ.ಡಿ.ಎಸ್. ಮೀನಾ ತಿಳಿಸಿದರು.

ಭಾನುವಾರ ಬಿಡುಗಡೆಯಾಗಿರುವ  ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಅಂಕಿಅಂಶಗಳು ಸಾವಿನ ಸಂಖ್ಯೆಗೆ ಇನ್ನೂ ೪೫ ಮಂದಿ ಸೇರ್ಪಡೆಯಾಗಿರುವುದು ಮತ್ತು ,೫೯೦ ಹೊಸಬರಿಗೆ ಸೋಂಕು ತಗಲುವುದರೊಂದಿಗೆ ಒಟ್ಟು ಸೋಂಕು ತಗುಲಿದವರ ಸಂಖ್ಯೆ ಒಟ್ಟು ೧೪,೩೮೦ಕ್ಕೆ ಏರಿದೆ.

ಅಂಕಿಸಂಖ್ಯೆಗಳು ೨೦೦೨-೦೩ರಲ್ಲಿ ಏಕಾಏಕಿ ತೀವ್ರ ಉಸಿರಾಟದ ತೊಂದರೆಯನ್ನು ಉಂಟು ಮಾಡಿದ್ದ ಸಾರ್ಸ್  ಸೋಂಕಿಗೆ ಒಳಗಾದವರ ಸಂಖ್ಯೆಯನ್ನು ಮೀರಿಸಿದೆ.ಗಿಂತ ಹೆಚ್ಚಾಗಿದೆ. ಸಾರ್ಸ್ ಕೂಡಾ  ವಿಶ್ವಾದ್ಯಂತ ಹರಡುವ ಮೊದಲು ದಕಿಣ ಚೀನಾದಲ್ಲೇ ಭುಗಿಲೆದ್ದಿತ್ತು.

ನಡುವೆ ಹುಬೈ ಪ್ರಾಂತ್ಯದ ವುಹಾನ್ ನಗರಕ್ಕೆ ಸಮೀಪವಿರುವ ಹುವಾಂಗ್ಗ್ಯಾಂಗ್ ನಗರದ ಆರು ಅಧಿಕಾರಿಗಳನ್ನು ಕಳಪೆ ನಿರ್ವಹಣೆಗಾಗಿ  ವಜಾ ಮಾಡಲಾಗಿದೆ ಎಂದು ಚೀನೀ ಸುದ್ದಿ ಸಂಸ್ಥೆ ವರದಿ ಮಾಡಿತು.

ರೋಗಿಗಳಿಗೆ ಚಿಕಿತ್ಸೆ ನೀಡುವ ನಗರದ ಸಾಮರ್ಥ್ಯ ಕಳಪೆಯಾಗಿದೆ. ರಕ್ಷಣಾತ್ಮಕ ಉಡುಪುಗಳು ಮತ್ತು ವೈದ್ಯಕೀಯ ಮುಖವಾಡಗಳಂತಹ ವೈದ್ಯಕೀಯ ಅಗತ್ಯಗಳ ಸರಬರಾಜಿನಲ್ಲಿ ತೀವ್ರ ಕೊರತೆಯಿದೆ ಎಂದು ಮೇಯರ್ ಅವರನ್ನು ಉಲ್ಲೇಖಿಸಿದ ವರದಿ ತಿಳಿಸಿತು.

ತಾನು ಸ್ವತಃ ದೇಶದಲ್ಲಿ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿದ್ದರೂ, ಕಳೆದ ಎರಡು ವಾರಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಇತರರಿಗೆ ಪ್ರವೇಶ ನಿಷೇಧಿಸುವ ವಾಷಿಂಗ್ಟನ್ ಆದೇಶ ಸೇರಿದಂತೆ ಇತರ ದೇಶಗಳ ಇದೇ ಮಾದರಿಯ ಕ್ರಮಗಳನ್ನು ಚೀನಾ ಟೀಕಿಸಿದೆ.

ಜಪಾನ್ ಮತ್ತು ಸಿಂಗಾಪುರವನ್ನು ಅನುಸರಿಸಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ಇದೇ ರೀತಿಯ ಪ್ರಯಾಣಿಕರ ನಿರ್ಬಂಧದ ಕ್ರಮಗಳನ್ನು ಪ್ರಕಟಿಸಿವೆ.

ದಕ್ಷಿಣ ಕೊರಿಯಾ ಮತ್ತು ಭಾರತ ತಮ್ಮ ನೂರಾರು ನಾಗರಿಕರನ್ನು ವುಹಾನ್ನಿಂದ ಹೊರಕ್ಕೆ ಸ್ಥಳಾಂತರಿಸಿವೆ. ವ್ಯಾಧಿಯ ಕೇಂದ್ರವಾಗಿರುವ ವುಹಾನ್ ನಗರದ ಸುಮಾರು ೫೦ ದಶಲಕ್ಷ ಜನರನ್ನು ವೈರಸ್ ಇತರ ಕಡೆಗಳಿಗೆ ಹರಡದಂತೆ ತಡೆಯುವ ಸಲುವಾಗಿ ಹೊರಕ್ಕೆ ಪಯಣಿಸದಂತೆ ನಿಷೇಧಿಸಲಾಗಿದೆ
ಇಂಡೋನೇಷ್ಯಾ ಕೂಡ ತನ್ನ ನಾಗರಿಕರ ಸ್ಥಳಾಂತರ ಸಲುವಾಗಿ ವಿಶೇಷ ವಿಮಾನವನ್ನು ಕಳುಹಿಸಿದೆ.
ಎರಡು ತಿಂಗಳಲ್ಲಿ ವೈರಸ್ ಶೀಘವಾಗಿ ಹರಡಿದ್ದರ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗುರುವಾರ  ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಘೋಷಿಸಲು ಗುರುವಾರ ಪ್ರೇರೇಪಿಸಿತ್ತು.

ವೈರಸ್ ಹರಡುವ ಸಾಧ್ಯತೆಯನ್ನು ತಡೆಗಟ್ಟಲು ಮುಂಜಾಗರೂಕತೆಯ ಪರಸ್ವರ ಸಮನ್ವಯದ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ ಎಂದು ಬೀಜಿಂಗ್ನಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಗೌಡೆನ್ ಗಲಿಯಾ ಹೇಳಿದರು. ಇಲ್ಲಿಯವರೆಗೆ ವರದಿಯಾದ ಹೆಚ್ಚಿನ ಪ್ರಕರಣಗಳು ಚೀನಾಕ್ಕೆ ಭೇಟಿ ನೀಡಿದ ಜನರು ಅಥವಾ ಅವರ ಕುಟುಂಬ ಸದಸ್ಯರಲ್ಲಿ ಕಂಡು ಬಂದವುಗಳು ಎಂದು ಅವರು ನುಡಿದರು.

ವ್ಯಾಧಿಯನ್ನು ಎದುರಿಸಲು ಸಜ್ಜಾಗಿರವ ಬಡ ದೇಶಗಳ ಬಗ್ಗೆ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ ಎಂದು ಗಲಿಯಾ ಹೇಳಿದರು.

ವಿದೇಶದಲ್ಲಿ ಕೆಲವು ಪ್ರಕರಣಗಳಲ್ಲಿ ವ್ಯಾಧಿಯು ಮನುಷ್ಯನಿಂದ ಮನುಷ್ಯನಿಗೆ ಹರಡಿದ ಪ್ರಕರನಗಳೂ ಸೇರಿವೆ ಎಂದು ವಿಶ್ವ ಆರೋಗ್ಯ  ಸಂಸ್ಥೆ  ತಿಳಿಸಿದೆ.

ಅಮೆರಿಕದಲ್ಲಿ ಆರೋಗ್ಯ ತುರ್ತು ಸ್ಥಿತಿ: ಮಧ್ಯೆ, ಅಮೆರಿಕವು ಶುಕ್ರವಾರ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ೧೪ ದಿನಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ವಿದೇಶಿ ಪ್ರಜೆಗಳಿಗೆ ಪ್ರವೇಶವನ್ನು ನಿಷೇಧಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ.
ಆಸ್ಟ್ರೇಲಿಯಾ, ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಮತ್ತು ವಿಯೆಟ್ನಾಂ ದೇಶಗಳು ಶನಿವಾರ ಹೊಸ ಪ್ರಕರಣಗಳನ್ನು ವರದಿ ಮಾಡಿವೆ. ಸ್ಪೇನ್ ತನ್ನ ಮೊದಲ ಪ್ರಕರಣವನ್ನು ದೃಢ ಪಡಿಸಿತು. ಜರ್ಮನಿಯ ವ್ಯಕ್ತಿಯೊಬ್ಬರು ಜರ್ಮನಿಯಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಮತ್ತು ನಂತರ ಸ್ನೇಹಿತರೊಂದಿಗೆ ಕ್ಯಾನರಿ ದ್ವೀಪಗಳಿಗೆ ಪ್ರಯಾಣಿಸಿದರು. ಅವರೊಂದಿಗೆ ಆಸ್ಪತ್ರೆಗೆ ದಾಖಲಾದ ನಾಲ್ಕು ಸ್ನೇಹಿತರು ರೋಗಲಕ್ಷಣಗಳನ್ನು ತೋರಿಸಿಲ್ಲ ಎಂದು ಸ್ಪೇನ್ ತಿಳಿಸಿತು.

ಹೊಸ ವೈರಸ್ ಮತ್ತು ಎಸ್ಎಆರ್ಎಸ್ ಎರಡೂ ಕೊರೋನವೈರಸ್ ಕುಟುಂಬದಿಂದ ಬಂzವುಗಳಾಗಿದ್ದು, ಎಲ್ಲವುಗಳಲ್ಲೂ ನೆಗಡಿ ಸಾಮಾನ್ಯವಾಗಿದೆ.

ಚೀನಾದಲ್ಲಿ ಸಾವಿನ ಪ್ರಮಾಣ ಕುಸಿಯುತ್ತಿದೆ, ಆದರೆ ರೋಗ ಸೋಂಕು ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಏಕೆಂದರೆ ಶಂಕಿತ ಪ್ರಕರಣಗಳ ಸಹಸ್ರಾರು ಮಂದಿಯ ಮಾದರಿಗಳನ್ನು ಇನ್ನೂ ಪರೀಕ್ಷಿಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಗಲಿಯಾ ಹೇಳಿದರು.

Advertisement