Showing posts with label BBMP. Show all posts
Showing posts with label BBMP. Show all posts

Thursday, November 14, 2024

ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

 ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

“‘ಪ್ನಾ ಘರ್ ಹೋ, ಅಪ್ನಾ ಅಂಗನ್ ಹೋ, ಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈ; ಇನ್ಸಾನ್ ಕೆ ದಿಲ್ ಕಿ ಯೇ ಚಾಹತ್ ಹೈ ಕಿ ಏಕ್ ಘರ್ ಕಾ ಸಪ್ನಾ ಕಭಿ ನಾ ಚೂಟೇ' (ಸ್ವಂತ ಮನೆ ಇರಲಿ, ಸ್ವಂತ ಅಂಗಳ ಇರಲಿ ಎಂಬ ಕನಸು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲೂ ವಾಸವಾಗಿರುತ್ತದೆ. ಎಂದಿಗೂ ಕಳೆದುಹೋಗದ ಮನೆಯ ಕನಸು- ಇದು ಎಂದಿಗೂ ಮರೆಯಾಗದ ಹಂಬಲ).

“‘Apna ghar ho, apna aangan ho, is khawab mein har koi jeeta hai; Insaan ke dil ki ye chahat hai ki ek ghar ka sapna kabhi naa choote’ (To have one’s own home, one’s own courtyard – this dream lives in every heart. It’s a longing that never fades, to never lose the dream of a home)."

೨೦೨೪ ನವೆಂಬರ್‌ ೧೩ರ ಬುಧವಾರ ಬುಲ್‌ ಡೋಜರ್‌ ಓಡಿಸಿ ಮನೆ ಕೆಡವಿ ಹಾಕುವ ಸರ್ಕಾರಿ ಸಿಬ್ಬಂದಿಯ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್‌ ತೀರ್ಪಿನ ಪೀಠಿಕೆ ಭಾಗದಲ್ಲಿ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು ಉಲ್ಲೇಖಿಸಿರುವ ಹಿಂದಿ ಕವಿ ಪ್ರದೀಪ್‌ ಅವರ ಕವನದ ಸಾಲುಗಳಿವು.

ಆದರೆ, ಸ್ವಂತ ಸೂರು, ಸ್ವಂತ ಮನೆ, ಸ್ವಂತ ಆಸ್ತಿ ಹೊಂದುವ ಅದಕ್ಕಾಗಿ ಅವುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುವ ಸಹಸ್ರಾರು ಮಂದಿಯ ಕನಸು ಕರ್ನಾಟಕದಲ್ಲಿ ಮುರುಟಿಹೋಗುತ್ತಿದೆಯೇ? ಎಂಬ ಪ್ರಶ್ನೆ ರಾಜ್ಯದ ಹಲವರ ಮನಸ್ಸಿನಲ್ಲಿ ಮೂಡಿದ್ದರೆ ವಿಶೇಷವೇನೂ ಅಲ್ಲ. ಏಕೆಂದರೆ ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಮನೆ, ಆಸ್ತಿ ಖರೀದಿಸಬಯಸಿದವರ ಕನಸುಗಳು ಈಡೇರುತ್ತಿಲ್ಲ, ಅವರ ಕ್ರಯಪತ್ರಗಳು ನೋಂದಣಿ ಆಗುತ್ತಿಲ್ಲ.

ಪತ್ರಿಕಾ ವರದಿಗಳ ಪ್ರಕಾರ ಇದಕ್ಕೆ ಕಾರಣ ಸರ್ಕಾರ ಜಾರಿಗೊಳಿಸಿರುವ ನೀತಿ. ಯಾವುದೇ ಆಸ್ತಿ ಖರೀದಿ, ಮಾರಾಟಕ್ಕೆ ಇ-ಖಾತೆ ಕಡ್ಡಾಯ ಎಂಬ ನಿಯಮ. ಮಾರಾಟ- ಖರೀದಿ ಕ್ರಯಪತ್ರ ನೋಂದಣಿ ದಿನಾಂಕದವರೆಗಿನ ಇ-ಖಾತೆ ಇರಲೇಬೇಕು ಎಂಬ ಆದೇಶ.

ಆದರೆ ಬೆಂಗಳೂರಿನ ಬಿಬಿಎಂಪಿಯಿಂದ ಹಿಡಿದು, ಹಳ್ಳಿಗಳ ಗ್ರಾಮ ಪಂಚಾಯಿತಿ, ಪುಟ್ಟ ಪಟ್ಟಣ, ನಗರಗಳ ನಗರಸಭೆಯವರೆಗೂ ಇ-ಖಾತೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಿಬ್ಬಂದಿಯ ಅಳಲು. ಅದಕ್ಕೆ ಅವರು ನೀಡುತ್ತಿರುವ ಕಾರಣ – ಹಿಂದೆ ಭೂಮಿ ತಂತ್ರಾಂಶ ಇತ್ತು. ಆಗ ಎಲ್ಲವೂ ಸರಳವಾಗಿತ್ತು. ಸರ್ಕಾರ ಈಗ ಹೊಸದಾಗಿ ಕಾವೇರಿ ತಂತ್ರಾಂಶವನ್ನು ಅಳವಡಿಸಿದೆ. ಈ ತಂತ್ರಾಂಶದ ಜೊತೆಗೆ ನಮ್ಮ ಕಂಪ್ಯೂಟರ್‌ ವ್ಯವಸ್ಥೆ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂಬುದು ಅವರ ಅಳಲು.

ಹೀಗೇಕೆ? ಎಂಬ ಪ್ರಶ್ನೆಗೆ ಲಭಿಸುವ ಉತ್ತರ – ಹಿಂದೆ ಖಾತೆಗಳನ್ನು ಕೈಗಳಲ್ಲೇ ಬರೆದು ಸಹಿ, ಮೊಹರು ಹಾಕಿ ಕೊಟ್ಟರೆ ಸಾಕಿತ್ತು. ಆದರೆ ಈಗ ಖಾತೆಗಳನ್ನು ಇ-ಸ್ವತ್ತು ಇಲ್ಲವೇ ಇ-ಆಸ್ತಿ ತಂತ್ರಾಂಶದ ಮೂಲಕವೇ ಪಡೆಯಬೇಕು. ಆದರೆ ಇ-ಸ್ವತ್ತು ಇಲ್ಲವೇ ಇ-ಆಸ್ತಿ ಮೂಲಕ ಖಾತೆ ಪಡೆಯಲು ಅದಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ನೀಡಲಾಗುವ ಋಣಭಾರ ಪತ್ರ ಲಗತ್ತಿಸಲ್ಪಡಬೇಕು. ಆದರೆ ಅದು ಕಾವೇರಿ ತಂತ್ರಾಂಶ ಮೂಲಕ ತಾನೇ ತಾನಾಗಿ ಇ-ಸ್ವತ್ತು ಇಲ್ಲವೇ ಇ-ಆಸ್ತಿ ದಾಖಲೆಗಳ ಜೊತೆಗೆ ಸಂಯೋಜನೆಯಾಗಬೇಕು. ಆದರೆ, ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕಾವೇರಿ ತಂತ್ರಾಂಶದ ಜೊತೆಗೆ ನಮ್ಮ ತಂತ್ರಾಂಶಗಳನ್ನು ಜೋಡಿಸಲು ನೀಡಬೇಕಾದ ಕೋಡ್‌ ಈವರೆಗೂ ಸರಿಯಾಗಿ ಎಲ್ಲ ಪಂಚಾಯತ್‌, ನಗರಸಭೆಗಳಿಗೆ ಸಿಕ್ಕಿಲ್ಲ ಎಂಬುದು ಉಡುಪಿಯ ನಗರಸಭೆಯ ಸಿಬ್ಬಂದಿಯೊಬ್ಬರ ಹೇಳಿಕೆ.

ಕಳೆದೆರಡು ತಿಂಗಳುಗಳಲ್ಲಿ ಈ ಸಂಯೋಜನೆಯ ಅಭಾವದ ಪರಿಣಾಮವಾಗಿ ಸಹಸ್ರಾರು ಕ್ರಯಪತ್ರಗಳು ನೋಂದಣಿಯಾಗದೆ ಸರ್ಕಾರಕ್ಕೆ ಕೋಟಿಗಟ್ಟಲೆ ರೂಪಾಯಿ ನಷ್ಟವಾಗಿರುವ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಗಳು ಬಂದಿವೆ.

ಕಾವೇರಿ ತಂತ್ರಾಂಶವು ಕೇಂದ್ರ ಸರ್ಕಾರದ ಎನ್‌ ಐಸಿ ರೂಪಿಸಿದ ತಂತ್ರಾಂಶಗಳ ಜೊತೆಗೂ ಹೊಂದಾಣಿಕೆಯಾಗದ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ ಅನುದಾನ ಕೂಡಾ ಕೂಡಾ ರಾಜ್ಯಕ್ಕೆ ಬಂದಿಲ್ಲ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಕೆಲ ಸಮಯದ ಹಿಂದೆ ಹೇಳಿದ್ದರು.

ಅಂದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಂತ್ರಾಂಶಗಳು ರಾಜ್ಯದಲ್ಲೇ ಬಿಬಿಎಂಪಿ, ನಗರಸಭೆ, ಪಂಚಾಯತಿಗಳ ಜೊತೆಷ್ಟೇ ಅಲ್ಲ, ಕೇಂದ್ರ ಸರ್ಕಾರದ ತಂತ್ರಾಂಶಗಳ ಜೊತೆಗೂ ಸಮರ್ಪಕವಾಗಿ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂದಾಯಿತು. ಇದರಿಂದಾಗಿಯೇ ಇ-ಖಾತೆ ನೀಡಲು ಸಮಸ್ಯೆಯಾಗುತ್ತಿದೆ, ಪರಿಣಾಮವಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಆಸ್ತಿ ವಿಕ್ರಯ, ಖರೀದಿ ಕ್ರಯಪತ್ರಗಳ ನೋಂದಣಿ ಆಗುತ್ತಿಲ್ಲ ಎಂದಾಯಿತು.

ಆದರೆ ಇದೇ ವೇಳೆಯಲ್ಲಿ ಇನ್ನೊಂದು ವಿದ್ಯಮಾನವೂ ಇದರ ಜೊತೆಗೆ ತಳಕು ಹಾಕಿಕೊಂಡಂತೆ ಕಾಣುತ್ತಿದೆ. ವರ್ಷದ ಹಿಂದೆ ನಕಲಿ ದಾಖಲೆಗಳ ನೋಂದಣಿಗೆ ತಡೆ ಹಾಕಲು ರಾಜ್ಯ ಸರ್ಕಾರವು ನೋಂದಣಿ ಕಾಯ್ದೆಗೆ ಮಹತ್ವದ ತಿದ್ದುಪಡಿಯೊಂದನ್ನು ಮಾಡಿ ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಯವರು ಇತ್ತೀಚೆಗೆ ತಮ್ಮ ಅನುಮೋದನೆ ನೀಡಿದ್ದರು. ಈ ಅನುಮೋದನೆ ಬಳಿಕ ಅದನ್ನು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದ್ದು ಅದೀಗ ಕಾನೂನಾಗಿ ಜಾರಿಗೊಂಡಿದೆ.

ಈ ಕಾನೂನನ್ನು ವಿರೋಧಿಸಿ ಸಬ್‌ ರಿಜಿಸ್ಟ್ರಾರ್‌ ಗಳು ರಾಜ್ಯವಾಪಿ ಮುಷ್ಕರ ಆರಂಭಿಸಿದ್ದರು. ಈ ಮುಷ್ಕರದ ಸ್ಥಿತಿ ಏನಾಗಿದೆ ಎಂಬುದು ಆ ನಂತರ ಪತ್ರಿಕೆಗಳಲ್ಲಿ ವರದಿ ಬಂದಿಲ್ಲ. ಈ ಮುಷ್ಕರ ಕೂಡಾ ಕ್ರಯಪತ್ರಗಳ ನೋಂದಣಿ ಸ್ಥಗಿತದ ಹಿಂದೆ ಕೆಲಸ ಮಾಡಿರಬಹುದೇ ಎಂಬ ಅನುಮಾನವೂ ಇದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಎಂಬ ಗಾದೆಯಂತೆ, ಕಾರಣ ಏನೇ ಇದ್ದರೂ ಸ್ವಂತ ಮನೆ, ಸ್ವಂತ ನಿವೇಶನ, ಸ್ವಂತ ಆಸ್ತಿ ಹೊಂದುವ ಹಲವರ ಕನಸಿಗೆ ಮಾತ್ರ ನಿತ್ಯ ತಣ್ಣೀರು ಅಭಿಷೇಕವಾಗುತ್ತಿದೆ.

ಸರ್ಕಾರ ಈ ಸಮಸ್ಯೆ ಬಗೆ ಹರಿಸಲು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ʼಜಂಟಿ ಕಾರ್ಯಪಡೆʼ ರಚಿಸುವ ನಿರ್ಧಾರವನ್ನು ಬುಧವಾರ (೧೩.೧೧.೨೦೨೪) ಕೈಗೊಂಡಿದೆ. ವರದಿ ಕೊಡಲು ಕಾರ್ಯಪಡೆಗೆ ಎರಡು ತಿಂಗಳ ಗಡುವು ನೀಡಲಾಗಿವೆ ಎನ್ನುತ್ತಿವೆ ವರದಿಗಳು.

ಆದರೆ ಜ್ವಲಂತ ಪ್ರಶ್ನೆ ಇದಲ್ಲ. ಈಗಾಲೇ ಕ್ರಯಪತ್ರಗಳನ್ನು ಸಿದ್ಧ ಪಡಿಸಿಕೊಂಡು, ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿಸಿಕೊಂಡು ಕ್ರಯಪತ್ರಗಳ ನೋಂದಣಿಗಾಗಿ ಕಾದುಕುಳಿತಿರುವ ಸಹಸ್ರಾರು ಮಂದಿ ಈಗ ಏನು ಮಾಡಬೇಕು? ಕಾರ್ಯಪಡೆಯ ವರದಿ ಬರುವವರೆಗೆ, ಅದನ್ನು ಸರ್ಕಾರ ಪರಿಶೀಲಿಸುವವರೆಗೆ, ಅದನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುವವರೆಗೆ ʼಚಾತಕ ಪಕ್ಷಿಗಳಂತೆʼ ಕಾಯುತ್ತಾ ಕೂರಬೇಕೇ?

ಅಥವಾ ತುರ್ತಾಗಿ ಅಂತಹ ಮಂದಿಗೆ ನಗರಸಭೆ/ ಪುರಸಭೆಗಳಿಂದ ʼತಾತ್ಕಲಿಕ ಖಾತೆʼ ನೀಡಿ ನಂತರ ಅದಕ್ಕೆ ಇ-ಖಾತೆ ಸೇರ್ಪಡೆ ಮಾಡಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಈ ಸಮಸ್ಯೆ ಬಗೆಹರಿಸುತ್ತದೆಯೇ?

ಈ ಪ್ರಶ್ನೆ/ ಸಮಸ್ಯೆಯನ್ನು ಬಗೆ ಹರಿಸಬೇಕಾದದ್ದು ಈಗಿನ ತುರ್ತು ಅಗತ್ಯ.

(ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.  ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.)

-ನೆತ್ರಕೆರೆ ಉದಯಶಂಕರ

Sunday, August 18, 2024

ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!

 ಬಡಾವಣೆ ಮಧ್ಯದ ನಿರುಪದ್ರವಿ ಮರದ ಕಗ್ಗೊಲೆ..!

ಬೆಂಗಳೂರು: ಮರಕ್ಕೆ ಕೊಡಲಿ, ಕಾಡುನಾಶಗಳಿಂದ ಆಗುತ್ತಿರುವ ಅನಾಹುತಗಳು, ಭೂ ಕುಸಿತಗಳು, ಗುಡ್ಡ ಕುಸಿತಗಳು ಮಳೆ, ಬಿಸಿಲಿನ ಏರುಪೇರು ಸೇರಿದಂತೆ ಹವಾಮಾನ ವೈಪರೀತ್ಯಗಳ ವರದಿಯನ್ನು ನಿತ್ಯವೂ ಪತ್ರಿಕೆಗಳಲ್ಲಿ ನೋಡುತ್ತಲೇ ಇದ್ದೇವೆ. ಮರ ಕಡಿಯಬಾರದು ಎಂಬುದಾಗಿ ಎಲ್ಲೆಡೆಯಲ್ಲಿ ಜೋರಾದ ಕೂಗು ಕೇಳಿ ಬರುತ್ತಿದೆ.

ಆದರೆ ಯಾವುದೇ ಸಾರ್ವಜನಿಕ ಹಿತದ ಯೋಜನೆಗಾಗಿ ಅಲ್ಲ, ವಾಹನ ಸಂಚಾರ, ಜನ ನಿಬಿಡ ರಸ್ತೆಯಲ್ಲಿ ಸಂಚಾರ ಅಡ್ಡವಾಗುತ್ತಿದೆ ಎಂದು ಅಲ್ಲ, ಯಾವುದೇ ಮನೆ ಕಟ್ಟಡದ ಮೇಲೆ ಬಿದ್ದು ಮನೆಗೆ ಹಾನಿ ಜೀವಹಾನಿ ಆದೀತು ಎಂಬ ಭೀತಿಗಾಗಿಯೂ ಅಲ್ಲ, ಸುಖಾ ಸುಮ್ಮನೆ ಮರ ಗುತ್ತಿಗೆದಾರರ ಖಯಾಲಿಗಾಗಿ ಜನವಸತಿ ಇರುವ ಬಡಾವಣೆಯ ರಸ್ತೆಯೊಂದರಲ್ಲಿನ ಬೃಹತ್‌ ʼಮಳೆ ಮರʼವನ್ನು 2024 ಆಗಸ್ಟ್‌ 17ರ ಶನಿವಾರ ನಿವಾಸಿಗಳ ಪ್ರತಿಭಟನೆಯ ನಡುವೆಯೇ ʼಕಗ್ಗೊಲೆʼ ಮಾಡಲಾಗಿದೆ.

ಈ ಕಗ್ಗೊಲೆಗೆ ಮರ ಗುತ್ತಿಗೆದಾರರ ಜೊತೆಗೆ ಬಿಬಿಎಂಪಿಯೂ ಕೈಜೋಡಿಸಿದೆ ಎಂಬ ಆಪಾದನೆಗಳು ಕೇಳಿ ಬಂದಿವೆ.

ಈ ದೊಡ್ಡ ಮಳೆ ಮರವು 40 ವರ್ಷಗಳಿಂದ ರಾಜರಾಜೇಶ್ವರಿನಗರದ ಸಚ್ಚಿದಾನಂದ ನಗರ ಬಡಾವಣೆಯ ಜನರಿಗೆ ಅಮೂಲ್ಯವಾದ ಪರಿಸರ ಸೇವೆಯನ್ನು ನೀಡಿತ್ತು.

ಮರ ಆರೋಗ್ಯಕರವಾಗಿತ್ತು. ಹುಳಬಾಧೆ ಸೇರಿದಂತೆ ಯಾವುದೇ ರೋಗಬಾಧೆಯೂ ಇದಕ್ಕೆ ಇರಲಿಲ್ಲ. ಈ ಮರದಿಂದ ಯಾರಿಗೂ ಯಾವುದೇ ಬೆದರಿಕೆಯೂರಲಿಲ್ಲ.

ಆದರೆ ಅದನ್ನು ನಿರ್ದಯಿ ಮರಗುತ್ತಿಗೆದಾರರು ಗುತ್ತಿಗೆದಾರರು ಆಗಸ್ಟ್ 17 ರಂದು ಒಂದೆರಡು ಮರಕತ್ತರಿಸುವ ಯಂತ್ರವನ್ನು ಬಳಸಿ ಕೆಲವೇ ಗಂಟೆಗಳಲ್ಲಿ ತುಂಡುಗಳಾಗಿ ಕತ್ತರಿಸಿದರು.

ಬಿ ಎನ್ ಪ್ರಸನ್ನ ಕುಮಾರ್ ಎಂಬವರು ಕೃತ್ಯದ ರೂವಾರಿಯಾಗಿದ್ದು, ಮರ ಕಡಿಯಲು ಅವರಿಗೆ ಅನುಮತಿ ನೀಡುವ ಮೂಲಕ ಬಿಬಿಎಂಪಿ ಅರಣ್ಯಕೋಶ ಅವರೊಂದಿಗೆ ಶಾಮೀಲಾಗಿರುವುದು ದಾಖಲೆಗಳಲ್ಲಿ ಕಂಡುಬಂದಿದೆ.

ಈ ಹಿತಚಿಂತಕ ಮರ ಇರುವ ಸ್ಥಳವನ್ನು ಟ್ರೀ ಆಫೀಸರ್‌ ಪರಿಶೀಲಿಸದೆಯೇ ಮರಕ್ಕೆ ಕೊಡಲಿ ಏಟು ನೀಡಲು ಆಗಸ್ಟ್‌ 12ರಂದು ಬಿಬಿಎಂಪಿ ಅರಣ್ಯ ಕೋಶವು ಆದೇಶ ನೀಡಿದೆ

ಟ್ರೀ ಆಫೀಸರ್ ಮರವನ್ನು ಪರೀಕ್ಷಿಸಿ ತನ್ನ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ...ಹಾಗೆ ಮಾಡದೆಯೇ ಗುತ್ತಿಗೆದಾರ ಒತ್ತಾಯದ ಮೇರೆಗೆ ಬಿಬಿಎಂಪಿಯ ವೃಕ್ಷಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹಿಯಡಿಯಲ್ಲಿ ಮರ ಕಡಿಯುವ ಆದೇಶ ಹೊರಡಿಸಲಾಗಿತ್ತು ಎಂದು ತಿಳಿದುಬಂದಿದೆ. ವಿವಾದಾತ್ಮಕ ರಾಜಕೀಯ ನಾಯಕರೊಂದಿಗಿನ ನಿಕಟ ಸಂಬಂಧದಿಂದಾಗಿ ಗುತ್ತಿಗೆದಾರರು  ಬಿಬಿಎಂಪಿ ಅರಣ್ಯ ಕೋಶದ ಅಧಿಕಾರಿಗಳ ಮೇಲೆ ಪ್ರಾಬಲ್ಯ ಹೊಂದಿದ್ದಾರೆ ಎನ್ನಲಾಗಿದೆ.

74 ವರ್ಷದ ಶಂಕರ್ ನಾರಾಯಣ್ ಅವರು ಮರವನ್ನು ಉಳಿಸಲು ಶತ ಪ್ರಯತ್ನ ಮಾಡಿದರು. ಆದರೆ ಆಸ್ತಿ ಮಾಲೀಕರು ಮತ್ತು ಬಿಬಿಎಂಪಿ ಗುತ್ತಿಗೆದಾರರು ಅವರ ಮನವಿಗೆ ಕಿವಿಗೊಡಲಿಲ್ಲ. ಅಕ್ಕ ಪಕ್ಕದ ನಿವಾಸಿಗಳ ಪ್ರತಿಭಟನೆ ಕೂಡಾ ಫಲ ನೀಡಲಿಲ್ಲ.

ಅರಣ್ಯ ಉಪ ಸಂರಕ್ಷಣಾಧಿಕಾರಿ, ಬಿಬಿಎಂಪಿ, ಅರಣ್ಯ ಕೋಶದ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ನಮ್ಮ ಪರಿಸರ ವ್ಯವಸ್ಥೆಯನ್ನು ಉಳಿಸುವುದು ಸಂವಿಧಾನದ  51-ಎ (ಜಿ) ವಿಧಿಯ ಅಡಿಯಲ್ಲಿ ನಮ್ಮ ಸಾಂವಿಧಾನಿಕ ಕರ್ತವ್ಯವಾಗಿದೆ.

ನಾಗರಿಕರ ಮೂಲಭೂತ ಕರ್ತವ್ಯಗಳ ಬಗ್ಗೆ ವ್ಯವಹರಿಸುವ ವಿಧಿ 51-A (g) ಹೀಗೆ ಹೇಳುತ್ತದೆ: “ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ."

ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಸಂಶಯಾಸ್ಪದ ಮರ ಕಡಿಯುವ ಆದೇಶಗಳು ಹೊರಬೀಳದಂತೆ ನೋಡಿಕೊಳ್ಳಲು ಶಂಕರ ನಾರಾಯಣ ಅವರಂತಹ ವೃಕ್ಷಪ್ರೇಮಿಗಳ ಜೊತೆಗೆ ಇತರರು ಜೊತೆಗೂಡತೊಡಗಿದ್ದಾರೆ.

ಕಲುಷಿತ ಬೆಂಗಳೂರಿನಲ್ಲಿ ಉಸಿರಾಡಲು ಶುದ್ಧ ಗಾಳಿಯ ಅವಶ್ಯಕತೆ ಇದ್ದಾಗ ಬಿಬಿಎಂಪಿಯು ಇಂತಹ ಬೃಹತ್ ಮರಕ್ಕೆ ಕೊಡಲಿ ಪೆಟ್ಟು ಕೊಡುವ ಮೂಲಕ ನಮಗೆ ಘೋರ ಅನ್ಯಾಯ ಮಾಡಿದೆ ಎಂದು ಆಸುಪಾಸಿನ ನಿವಾಸಿಗಳೂ ದೂರುತ್ತಿದ್ದಾರೆ.

ಪರಿಸರದ ಬಗ್ಗೆ ನಿಮಗೆ ಕಾಳಜಿ ಇರುವವರು ತಮ್ಮ ಪ್ರತಿಭಟನೆಯನ್ನು ಬರೆದು ಬಿಬಿಎಂಪಿ ಡಿಸಿಎಫ್‌, ಬಿಬಿಎಂಪಿ ಕಮೀಷನರ್‌, ಕರ್ನಾಟಕದ ಮುಖ್ಯಮಂತ್ರಿ ಮತ್ತು ಪಿಸಿಸಿಎಫ್‌ ಅವರ ಮಿಂಚಂಚೆಗಳಿಗೆ ಕಳುಹಿಸುವಂತೆ ಅವರು ಕೋರಿದ್ದಾರೆ.

ಮಿಂಚಂಚೆಗಳು ಹೀಗಿವೆ:

dcfbbmp12@gmail.com

comm@bbmp.gov.in

cm.kar@nic.in

pccfkar@gmail.com

ಸುದ್ದಿ ನೋಡಿ- ಇತರ ಮಾಧ್ಯಮಗಳಲ್ಲಿ: ಕೆಳಗೆ ಕ್ಲಿಕ್‌ ಮಾಡಿರಿ.

ಪ್ರಜಾವಾಣಿ: 


https://www.prajavani.net/district/bengaluru-city/a-tree-that-has-been-providing-shade-for-four-decades-cut-accused-2932495

ಸ್ಪೀಡ್‌ ನ್ಯೂಸ್‌ ಕನ್ನಡ: https://www.youtube.com/watch?v=piGXwT1u55s

ಡೆಕ್ಕನ್‌ ಹೆರಾಲ್ಡ್‌ :

 https://www.deccanherald.com/india/karnataka/bengaluru/bbmp-axes-mature-rain-tree-in-rr-nagar-3155232 

Monday, September 2, 2019

Moon walk in Bengaluru.!

Moon walk in Bengaluru.!
Bengaluru: The Indian Space Research Organisation (ISRO) may be some years away from its first manned mission to the moon, but in Bengaluru, its civic agency – the Bruhat Bengaluru Mahanagar Palike (BBMP) has already raced ahead, readying a prototype lunar surface. Well, all thanks to crater-sized potholes on Bengaluru’s roads. 
The pothole-riddled Tunganagar Main Road in Bengaluru has served as inspiration for city-based street artist Baadal Nanjundaswamy. In his latest creation, Baadal has an actor suited up as an astronaut moonwalking on Tunganagar Main Road’s craters.  The video of this ‘moonwalk’ in Bengaluru has gone viral on social media.
Baadal has in the past used his art to highlight Bengaluru’s perennial pothole problem and the apathy of the civic administration and the political class. His previous works include introducing mermaids and crocodiles to Bengaluru’s streets.
This latest installation comes at a time when BBMP claims that it is taking action and filling potholes on a priority basis. This after the High Court pulled up the civic body. In an interim order in August, the High Court stated that BBMP officials would be held responsible for accidents due to potholes. This meant BBMP would be liable to pay compensation to victims or their families. “The scope of Article 21 has been expanded by the Supreme Court. Every citizen has a right to meaningful and dignified life and good roads are absolutely necessary. Ensuring pothole-free roads is a legal and constitutional obligation of the BBMP,” Chief Justice AS Oka observed.
The BBMP had last week announced that Rs 2000 fine will be imposed on engineers for failing to fill the potholes.
According to the latest data as of mid-July, the BBMP claims there are only 2,840 potholes in the city. But in actuality, the number is likely to be higher across the 198 wards. While potholes are majorly an inconvenience that the city has grown accustomed to, it has proved fatal in multiple occasions as well.
View the video by clicking the image below: 

Monday, August 5, 2013

MLA Muniratna promises to remove all BBMP hurdles in Sachidananda Nagara Lay Out, without bribery

MLA Muniratna promises to remove all BBMP hurdles in Sachidananda Nagara Lay Out, without bribery


Banglare: Rajarajeshwari Nagar MLA, Mr. Muniratna met with more than 400 site owners and home owners of the Sachidananda Nagara Lay Out in Rajarajeshwari Nagara , on Sunday (4th August 2013) morning. The meeting was arranged by Sachidnanada Nagara Nyayapara Andolana, (SNNA) , a registered Society, that is fighting for Khatas, Building plans and all lay out facilities without paying a single paisa of bribe to any of the public officials.

SNNA movement was started almost three years ago by a group determined site owners who opposed paying bribes, and got the Khatas and all other statutory papers from BBMP thru Lokayukta, RTI and Gandhigiri.  However, this successful movement was hindered by inappropriate interference by the former MLA from Rajarajeshwari Nagar and former Mayor of Bangalore and few BBMP Officials.

Dr. Shankara Prasad, one of the members of the SNNA movement explained, to Mr. Muniratna,  how BBMP officials avoided implementing Supreme Court order and Lokayukta order; and how BBMP officials even stopped electricity supply from BESCOM and threatened to stop BWSSB water supply. Dr. Prasad also appraised, how the local Welfare Association was acting like a conduit for collecting bribe money to pay politicians and bureaucrats.

Nethrakere Udaya Shankara Bhat, one of the key forces behind the SNNA movement gave a five point program for implementation by the new MLA, Mr. Muniratna. He requested that immediate action is required in the following areas.

BBMP to Issue khatas and building plans to all site owners of layout who have not yet got them.
Provide for reliable BWSSB water supply
Make sure BESCOM does not threaten any lay out residents.
Stop all land mafia activities in the lay out.
Provide police protection for safe living in the lay out.

MLA Muniratna, spoke to the large audience and assured that he will speak and write to BBMP Joint Commissioner, BESCOM Chief Engineer, BWSSB authorities and the police and resolve most of the issues in the next few weeks.

Muniratna also commented on the apathy of citizens in not removing non-performing elected officials, and gave the example of how Rajarajeshwari Nagar, ward 160 had voted for BJP candidate in large numbers in spite of poor performance. MLA spoke about his humble beginnings as an idli seller in Malleswaram, and his “corruption free” approach in public life.  Muniratna explained that his main motive for being in politics is to do “seva” to people.

And he also appreciated the way SNNA is forthcoming in publicly discussing the issue of corruption, as well as taking remedial measures.

SNNA members appreciated the hopeful message of MLA, and are eagerly waiting to see the outcome of his promises.

ಸವಲತ್ತಿಗೆ ಅಡಚಣೆ ಭ್ರಷ್ಟಾಚಾರ ರಹಿತವಾಗಿಯೇ ನಿವಾರಣೆ: ಮುನಿರತ್ನ ಭರವಸೆ

ಸವಲತ್ತಿಗೆ ಅಡಚಣೆ ಭ್ರಷ್ಟಾಚಾರ ರಹಿತವಾಗಿಯೇ ನಿವಾರಣೆ: ಮುನಿರತ್ನ ಭರವಸೆ


ಬೆಂಗಳೂರು: ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರ ಬಡಾವಣೆಯ ಜನತೆಗೆ ನ್ಯಾಯೋಚಿತ ಸವಲತ್ತು ಪಡೆಯುವಲ್ಲಿ ಬಿಬಿಎಂಪಿ ಮತ್ತು ಇತರ ಅಡಳಿತಶಾಹಿಯಿಂದ ಆಗುತ್ತಿರುವ ಎಲ್ಲ ಅಡಚಣೆಗಳನ್ನು ಭ್ರಷ್ಟಾಚಾರ ರಹಿತವಾಗಿಯೇ ನಿವಾರಿಸಿಕೊಡುವುದಾಗಿ ಶಾಸಕ ಮುನಿರತ್ನ ಭಾನುವಾರ (04-08-2013) ಇಲ್ಲಿ ಭರವಸೆ ನೀಡಿದರು.

ಸಚ್ಚಿದಾನಂದ ನಗರ ಬಡಾವಣೆಯಲ್ಲಿ ಭ್ರಷ್ಟಾಚಾರ ಮುಕ್ತವಾಗಿ ಖಾತೆ, ಕಟ್ಟಡ ನಕ್ಷೆ ಹಾಗೂ ಇತರ ಸವಲತ್ತುಗಳಿಗಾಗಿ ಹೋರಾಟ ನಡೆಸುತ್ತಿರುವ ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ (ನೋಂದಾಯಿತ) `ಎಸ್ ಎನ್ ಎನ್ ಎ' ಸಂಘಟಿಸಿದ್ದ ಕಾರ‌್ಯಕ್ರಮದಲ್ಲಿ ಬಡಾವಣೆಯ ಸುಮಾರು 400ಕ್ಕೂ ಹೆಚ್ಚು ನಿವೇಶನದಾರರು ಹಾಗೂ ನಿವಾಸಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬಿಬಿಎಂಪಿ ಅಡಿಷನಲ್ ಕಮೀಷನರ್, ಬೆಸ್ಕಾಂ ಮುಖ್ಯ ಎಂಜಿನಿಯರ್, ಜಲಮಂಡಳಿ ಅಧಿಕಾರಿಗಳು ಮತ್ತು ಪೊಲೀಸರ ಜೊತೆ ಮಾತನಾಡುವುದರ ಜೊತೆಗೆ ಅಗತ್ಯ ಪತ್ರ ಬರೆಯುವ ಮೂಲಕ ಸಮಸ್ಯೆಗಳನ್ನು ಬಗೆ ಹರಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.


ಕೆಲಸ ಮಾಡದ ಜನಪ್ರತಿನಿಧಿಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ನಾಗರಿಕರು ತೋರುತ್ತಿರುವ ಅಸಡ್ಡೆ ಬಗ್ಗೆ ಖೇದ ವ್ಯಕ್ತ ಪಡಿಸಿದ ಅವರು, ರಾಜರಾಜೇಶ್ವರಿ ನಗರ- 160ನೇ ವಾರ್ಡಿನಲ್ಲಿ ಮತದಾರರು ಹೇಗೆ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದರು ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಮಲ್ಲೇಶ್ವರದಲ್ಲಿ ತಾವು ಇಡ್ಲಿ ಮಾರುವ ಹುಡುಗನಾಗಿ ಹೇಗೆ ಅತ್ಯಂತ ಬಡತನದ ಜೀವನ ಆರಂಭಿಸಿದೆ ಎಂಬುದನ್ನು ವಿವರಿಸಿದ ಅವರು ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ಮುಕ್ತ ವ್ಯವಹಾರ ಇಟ್ಟುಕೊಂಡಿರುವುದಾಗಿ ಹೇಳಿದರು. ರಾಜಕಾರಣಕ್ಕೆ ಬಂದ ತಮ್ಮ ಮುಖ್ಯ ಉದ್ದೇಶ ಜನಸೇವೆ ಎಂದು ಹೇಳಿದ ಅವರು ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಹೋರಾಟಕ್ಕೆ ಇಳಿದ ಆಂದೋಲನವನ್ನು ಶ್ಲಾಘಿಸಿದರು.


ಎಸ್ ಎನ್ ಎನ್ ಎ ಚಳವಳಿಯ ಸಕ್ರಿಯ ಸದಸ್ಯರಲ್ಲಿ ಒಬ್ಬರಾದ ಡಾ.ಶಂಕರ ಪ್ರಸಾದ್ ಅವರು ಸುಪ್ರೀಂಕೋರ್ಟ್ ಆದೇಶ ಮತ್ತು ಲೋಕಾಯುಕ್ತ ನಿರ್ದೇಶನಕ್ಕೆ ವಿರುದ್ಧವಾಗಿ ಬಿಬಿಎಂಪಿ ಅಧಿಕಾರಿಗಳು ವರ್ತಿಸುತ್ತಿರುವ ವಿಧಾನವನ್ನು ವಿವರಿಸಿದರು.

ಮೂಲಭೂತ ಅಗತ್ಯಗಳಾದ ನೀರು ಮತ್ತು ವಿದ್ಯುತ್ ಸರಬರಾಜಿಗೆ ಧಕ್ಕೆ ಉಂಟು ಮಾಡುವ ಬೆದರಿಕೆ ಹಾಕಿದ್ದನ್ನೂ ಅವರು ದಾಖಲೆ ಸಹಿತ ವಿವರಿಸಿದರು. ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘವು ಭ್ರಷ್ಟಾಚಾರದ ಚಟುವಟಕೆಗಳಿಗೆ ಮಧ್ಯವರ್ತಿಯಾಗಿ ವ್ಯವಹರಿಸಿದ ಬಗೆಯನ್ನೂ ಅವರು ಬಿಚ್ಚಿಟ್ಟರು.

 ಮತ್ತೊಬ್ಬ ಸಕ್ರಿಯ ಸದಸ್ಯ ನೆತ್ರಕೆರೆ ಉದಯಶಂಕರ ಭಟ್ ಅವರು ಬಡಾವಣೆಯಲ್ಲಿ ಜಾರಿಯಾಗಬೇಕಾದ ಅಗತ್ಯ ಸವಲತ್ತು ಗಳಿಗೆ ಸಂಬಂಧಿಸಿದಂತೆ ಐದಂಶದ ಕಾರ‌್ಯಕ್ರಮವನ್ನು ಮುಂದಿಟ್ಟರು.

ಬಿಬಿಎಂಪಿ ಖಾತೆ, ಕಟ್ಟಡ ನಕ್ಷೆ ವಿತರಣೆಯ ಪುನರಾರಂಭ, ಜಲಮಂಡಳಿ ಮೂಲಕ ಸಮರ್ಪಕ ನೀರು ಪೂರೈಕೆ, ಬೆಸ್ಕಾಂ ಮೂಲಕ ವಿದ್ಯುತ್ ಸರಬರಾಜು, ಬಡಾವಣೆಯಲ್ಲಿ ಎಲ್ಲ ರೀತಿಯ ಭೂ ಮಾಫಿಯಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು, ನಿವೇಶನದಾರರು, ನಿವಾಸಿಗಳಿಗೆ ಪೊಲೀಸ್ ರಕ್ಷಣೆ ಒದಗಿಸುವುದು ಇವು ಅಗತ್ಯವಾಗಿ ಆಗಬೇಕಾದ ತುರ್ತು ಕಾರ‌್ಯಕ್ರಮಗಳು ಎಂದು ಅವರು ಹೇಳಿದರು.

ಎಸ್ ಎನ್ ಎನ್ ಎ ಚಳವಳಿಯು ಸುಮಾರು ಮೂರು ವರ್ಷಗಳಿಂದ ಬಿಬಿಎಂಪಿ ಖಾತೆ, ಕಟ್ಟಡ ನಕ್ಷೆ ಮತ್ತು ಇತರ ನಾಗರಿಕ ಸವಲತ್ತುಗಳನ್ನು ಲಂಚಮುಕ್ತವಾಗಿ ಪಡೆದುಕೊಳ್ಳುವ ಸಲುವಾಗಿ ಆರಂಭವಾಗಿದ್ದು, ಲೋಕಾಯುಕ್ತ, ಆರ್ ಟಿ ಐ ಮತ್ತು ಗಾಂಧಿಗಿರಿ ಮಾರ್ಗಗಳ ಮೂಲಕವಾಗಿ ತನ್ನ ಹೋರಾಟ ನಡೆಸುತ್ತಾ ಬಂದಿದೆ.  ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಹಾಗೂ ಬಿಬಿಎಂಪಿಯ ಮಾಜಿ ಮೇಯರ್ ಮತ್ತು ಕೆಲವು ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ಈ ಸವಲತ್ತು ಗಳಿಕೆಗೆ  ಅಡ್ಡಿಯುಂಟಾಗಿತ್ತು.

Thursday, January 5, 2012

ಊಟ ಆಯಿತಾ?: ಮುಂಡಾಸು 30 ಮೊಳ..! (Mundasu 30 mola..!)

ಊಟ ಆಯಿತಾ?: ಮುಂಡಾಸು 30 ಮೊಳ..!
 (Mundasu 30 mola..!)


ಊಟ ಆಯಿತಾ ಅಂತ ಕೇಳಿದರೆ ಮುಂಡಾಸು ಮೂವತ್ತು ಮೊಳ ಎಂದೊಬ್ಬ ಉತ್ತರಿಸಿದನಂತೆ. ಬೃಹತ್ ಬೆಂಗಳೂರು  ಮಹಾನಗರ ಪಾಲಿಕೆಯ ಸಿಬ್ಬಂದಿ ಇದೇ ವರ್ಗಕ್ಕೆ ಸೇರಿದವರು. ಏನಾದರೂ ಮಾಹಿತಿ  ಬೇಕು ಎಂದು ನೀವೇನಾದರೂ ಬಿಬಿಎಂಪಿಗೆ ಹೋದಿರೋ ಮುಗಿಯಿತು ಕಥೆ. ಕನಿಷ್ಠ ಹತ್ತಿಪ್ಪತ್ತು ಮೇಜುಗಳಿಗೆ ಸುತ್ತು ಹೊಡೆಯಬೇಕು. ಅಷ್ಟಾದರೂ ನಿಮಗೆ ಬೇಕಾದ ಮಾಹಿತಿ ಸಿಕ್ಕೀತು ಎನ್ನಲಾಗದು.

ಈ ಕಷ್ಟ ಯಾಕೆ ಅಂತ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದಿರೋ- ಅಲ್ಲೂ ನಿಮಗೆ ಬೇಕಾದ ಉತ್ತರವೇನೂ ಸಿಕ್ಕುವುದಿಲ್ಲ. ಕಟ್ಟ ಕಡೆಗೆ ನಿಮ್ಮ ತಲೆಯಲ್ಲಿ ಉಳಿಯುವುದು ಮೇಲೆ ತಿಳಿಸಿದಂತೆ 'ಮುಂಡಾಸು ಮೂವತ್ತು ಮೊಳ' ಮಾತ್ರ..!

ಬಿಬಿಎಂಪಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬರುವ ಸಚ್ಚಿದಾನಂದ ನಗರದ ನಿವೇಶನದಾರರ ಗೋಳಿಗೆ ಈಗ ಎರಡು ದಶಕ.  ಕಾರಣವೇ ಇಲ್ಲದೆ ಈ ನಿವೇಶನದಾರರನ್ನು  ಗೋಳಾಡಿಸುತ್ತಿರುವ ಬಿಬಿಎಂಪಿ ಸಿಬ್ಬಂದಿ, ಅವರಿಗೆ ಕುಮ್ಮಕ್ಕು  ನೀಡುತ್ತಿರುವ ಜನ ಪ್ರತಿನಿಧಿಗಳು.  ಇವರೆಲ್ಲರ ತಕರಾರುಗಳಿಗೆ ಸಿವಿಲ್ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ ವರೆಗೂ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳು  ಸ್ಪಷ್ಟ ಉತ್ತರ. ಈ ನಿವೇಶನದಾರರರಿಂದ ತೆರಿಗೆ ಪಡೆಯಿರಿ, ಖಾತೆ ಕೊಡಿ, ಕಟ್ಟಡ ನಕ್ಷೆ ಮಂಜೂರು  ಮಾಡಿ. ವಸತಿದಾರರಿಗೆ ಸಹ್ಯ ಜೀವನ ನಡೆಸುವುದಕ್ಕೆ ಬೇಕಾದ ಸವಲತ್ತು ಕೊಡಿ ಎಂಬುದಾಗಿ ಸಿವಿಲ್ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್, ಸುಪ್ರೀಂಕೋರ್ಟುಗಳು ಎತ್ತಿ ಹಿಡಿದಿವೆ. ಈ ಬಡಾವಣೆ ಶಾಸನಬದ್ಧ ಹಾಗೂ ಅದರ ಭೂ ಮಾಲೀಕತ್ವದ ವಿವಾದ ಅಂತಿಮಗೊಂಡಿದೆ ಎಂಬುದಾಗಿ ಇಡೀ ಪ್ರಕರಣದ ಪರಿಶೀಲನೆ ನಡೆಸಿರುವ ಕರ್ನಾಟಕ ಲೋಕಾಯುಕ್ತರೂ ಸ್ಪಷ್ಟ ಪಡಿಸಿದ್ದಾರೆ. ಸಿವಿಲ್ ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿ ಎಂಬುದಾಗಿ ರಾಜ್ಯ ಸರ್ಕಾರವೂ ಆದೇಶ ನೀಡಿದೆ. ಆದರೆ ಬಿಬಿಎಂಪಿ ಮತ್ತು  ರೆವೆನ್ಯೂ  ಇಲಾಖೆಯ ಅಧಿಕಾರಿಗಳಿಗೆ ಇದನ್ನು ಪಾಲಿಸುವ ಮನಸ್ಸಿಲ್ಲ.


ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ಏನು ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪ್ರಶ್ನಿಸಿದರೆ ಆ ಅರ್ಜಿ ನಗರಾಭಿವೃದ್ಧಿ ಮುಖ್ಯಕಾರ್ಯದರ್ಶಿಗಳಿಗೆ ಹೋಗಿ ಅಲ್ಲಿಂದ ಬಿಬಿಎಂಪಿ ಕಮೀಷನರ್ ಕಚೇರಿ ಸೇರಿ ಮುಂದೆ ಬಿಬಿಎಂಪಿ ರಾಜರಾಜೇಶ್ವರಿ ವಲಯ ಕಚೇರಿಯ ಅಡಿಷನಲ್ ಕಮೀಷನರ್ ಕಚೇರಿಗೆ ಬಿಜಯಂಗೈದು, ಅಸಿಸ್ಟೆಂಟ್ ರೆವೆನ್ಯೂ ಆಫೀಸರ್  (ಎಆರ್ಓ)  ಮೇಜಿಗೆ ತಲುಪಿತು.  ಈ ಎಆ್ಓ ,,ಮಹಾಶಯರು ತೀರ್ಪಿನ ಅನುಷ್ಠಾನ ಕುರಿತ ಮಾಹಿತಿ ಕೊಡುವ ಬದಲು 2002ರಷ್ಟು ಹಳೆಯದಾದ ಜಿಲ್ಲಾಧಿಕಾರಿಗಳ ಪತ್ರ, ಅಸಿಸ್ಟೆಂಟ್ ಕಮೀಷನರ್ ಆದೇಶವನ್ನು ಕಳುಹಿಸಿ ಅದರ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳನ್ನೂ ಕಳುಹಿಸುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ..

ಈ ಪತ್ರದ ಜೊತೆಗೆ ಮೇಲೆ ತಿಳಿಸಿದ ತೀರ್ಪುಗಳು ಇರಲಿಲ್ಲ ಎಂಬುದನ್ನು ಬಿಟ್ಟು  ಬಿಡೋಣ,  ಆದರೆ ಈ ತೀರ್ಪಿನ ಪ್ರತಿಗಳನ್ನು ಅವರ ಬಳಿ ಕೇಳಿದವರು  ಯಾರು?  ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮೀಷನರ್  ಪತ್ರಗಳನ್ನು ಕೇಳಿದವರು ಯಾರು? ಸುಪ್ರೀಂಕೋರ್ಟ್ ತೀರ್ಪು ಪಾಲನೆಗೆ ಈ  ಜಿಲ್ಲಾಧಿಕಾರಿಯ ಪತ್ರ, ಅಸಿಸ್ಟೆಂಟ್ ಕಮೀಷನರ್ ಅವರ ಪತ್ರಗಳು  'ತಡೆಯಾಜ್ಞೆ' ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ಪಾಲಿಸಿಲ್ಲ ಎಂಬುದು ಅವರ ಈ  ವರ್ತನೆಯ ಅರ್ಥವೇ?


ಈ ಬಗ್ಗೆ ಬಿಬಿಎಂಪಿ ಕಮೀಷನರ್,  ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಗಮನ ಸೆಳೆಯೋಣ ಎಂದು ಸರ್ಕಾರದ 'ಇ-ಆಡಳಿತ' ದ ವ್ಯವಸ್ಥೆಯ ಮೊರೆ ಹೊಕ್ಕರೆ ...!  ಒಂದೂ ಪತ್ರಗಳು ಅವರಿಗೆ ತಲುಪಲೇ ಇಲ್ಲ. -ಇ-ಮೇಲ್ ಮೂಲಕ ಕಳುಹಿಸಿದ ಪತ್ರಗಳೆಲ್ಲ, 'ಡೆಲಿವರಿ ಫೈಲ್ಡ್' ಎಂಬ ಷರಾದೊಂದಿಗೆ ನನ್ನ ಮೆಯಿಲ್ ಬಾಕ್ಸಿಗೆ ಮರಳಿ ಬಂದಿವೆ.

ಇದಕ್ಕೆ ಏನು ಹೇಳೋಣ?  

ಅಧಿಕಾರಿಗಳಿಗೆ ಜೈ ಎನ್ನೋಣವೇ?  ಪ್ರಶ್ನೆ ಅರ್ಥ ಮಾಡಿಕೊಳ್ಳಲಾಗದ ಇಲ್ಲವೇ ಅರ್ಥವಾಗದಂತೆ ನಟಿಸುತ್ತಿರುವ ಬಿಬಿಎಂಪಿ ಎ ಆರ್ ಓ ಅವರ  ಜಾಣ ನಿಲುವಿಗೆ ಜೈ ಎನ್ನೋಣವೇ?  ಇ-ಆಡಳಿತ ಮೂಲಕ ಜನರ ಸಮಸ್ಯೆಗಳನ್ನು ಕ್ಷಿಪ್ರವಾಗಿ ನಿವಾರಿಸಬಹುದೆಂಬ ಹವಣಿಕೆಯಲ್ಲಿ ಇರುವ ಬಿಬಿಎಂಪಿ, ಸರ್ಕಾರ, ಮುಖ್ಯಮಂತ್ರಿಗಳ ಹುಮ್ಮಸ್ಸಿಗೆ ಅಡಚಣೆ ಒಡ್ಡುತ್ತಿರುವ '-ಇ-ಆಡಳಿತ ವ್ಯವಸ್ಥೆ'ಗೆ ಜೈ ಎನ್ನೋಣವೇ?

  ಇಷ್ಟೆಲ್ಲ ಕಷ್ಟ ಯಾಕೆ ಸ್ವಾಮೀ?  ಒಂದಷ್ಟು ಕಾಸು  ಬಿಸಾಕಿ ಕೆಲಸ ಮಾಡಿಸಿಕೊಳ್ಳಿ ಎಂದು ಹೇಳೋಣವೇ?

ವಿವರಗಳಿಗಾಗಿ ಚಿತ್ರಗಳನ್ನು ಕ್ಲಿಕ್ಕಿಸಿ 

-ನೆತ್ರಕೆರೆ ಉದಯಶಂಕರ .

Advertisement