Showing posts with label Cinema. Show all posts
Showing posts with label Cinema. Show all posts

Tuesday, December 29, 2020

ರಜನಿಕಾಂತ್ ನಿರ್ಧಾರಕ್ಕೆ ಕಮಲಹಾಸನ್ ನಿರಾಶೆ

 ರಜನಿಕಾಂತ್ ನಿರ್ಧಾರಕ್ಕೆ ಕಮಲಹಾಸನ್ ನಿರಾಶೆ

ನವದೆಹಲಿ: ರಾಜಕಾರಣಿಯಾಗಿ ಬದಲಾದ ನಟ ಕಮಲ ಹಾಸನ್ ಅವರು 2020 ಡಿಸೆಂಬರ್ 2020ರ ಮಂಗಳವಾರ ಸಹನಟ ರಜನಿಕಾಂತ್ ಅವರು ಆರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಇಳಿಯುವುದಿಲ್ಲ ಎಂಬುದಾಗಿ ಮಾಡಿರುವ ಘೋಷಣೆಯಿಂದನಿರಾಶೆಗೊಂಡಿರುವುದಾಗಿ ಹೇಳಿದರು.

ಅಧಿಕ ರಕ್ತದೊತ್ತಡಕ್ಕಾಗಿ ಚಿಕಿತ್ಸೆ ಪಡೆದ ಹೈದರಾಬಾದ್ ಆಸ್ಪತ್ರೆಯಿಂದ ಹೊರಬಂದ ಒಂದು ದಿನದ ನಂತರ ರಜನಿಕಾಂತ್ ಅವರ ನಿರ್ಧಾರವು ಬಂದಿದೆ.

ನನ್ನ ಚುನಾವಣಾ ಪ್ರಚಾರದ ನಂತರ ನಾನು ಮತ್ತೆ ರಜನಿಕಾಂತ್ ಅವರನ್ನು ಭೇಟಿಯಾಗುತ್ತೇನೆ. ಅವರ ಅಭಿಮಾನಿಗಳಂತೆ ನಾನು ಕೂಡ ನಿರಾಶೆಗೊಂಡಿದ್ದೇನೆ ಆದರೆ ಅವರ ಆರೋಗ್ಯ ನನಗೆ ಮುಖ್ಯವಾಗಿದೆ ಎಂದುಮಕ್ಕಲ್ ನೀಧಿ ಮಾಯಂ ಮುಖ್ಯಸ್ಥ ಕಮಲ ಹಾಸನ್ ಹೇಳಿದ್ದನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥಿ ವರದಿ ತಿಳಿಸಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ದುರ್ಬಲ ಆರೋಗ್ಯವನ್ನು ಉಲ್ಲೇಖಿಸಿ ರಾಜಕೀಯಕ್ಕೆ ಧುಮುಕುವುದಿಲ್ಲ ಮತ್ತು ಮೊದಲೇ ಘೋಷಿಸಿದಂತೆ ಪಕ್ಷವನ್ನು ಪ್ರಾರಂಭಿಸುವುದಿಲ್ಲ ಎಂದು ಇದಕ್ಕೆ ಮುನ್ನ ಪ್ರಕಟಿಸಿದ್ದರು.

ಆದ್ದರಿಂದ, ರಾಜಕೀಯ ಪಕ್ಷವನ್ನು ಆರಂಭಿಸುವ ಮೂಲಕ ರಾಜಕೀಯಕ್ಕೆ ಬರಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ನಾನು ಬಹಳ ವಿಷಾದದಿಂದ ತಿಳಿಸುತ್ತಿದ್ದೇನೆ. ಘೋಷಣೆ ಮಾಡುವುದರ ಹಿಂದಿನ ನೋವು ನನಗೆ ಮಾತ್ರ ತಿಳಿದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು. ಆದಾಗ್ಯೂ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೆ ಜನರಿಗೆ ಯಾವುದೇ ರೀತಿಯಲ್ಲಿ ಸೇವೆ ಸಲ್ಲಿಸುವೆ ಎಂದು ಅವರು ಹೇಳಿದ್ದರು.

೭೦ ಹರೆಯದ ರಜನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಪ್ರಾರಂಭಿಸುವುದಾಗಿ ಮತ್ತು  ಡಿಸೆಂಬರ್ ೩೧ ರೊಳಗೆ ವಿವರಗಳನ್ನು ಪ್ರಕಟಿಸುವುದಾಗಿ ತಿಂಗಳ ಆರಂಭದಲ್ಲಿ ಘೋಷಿಸಿದ್ದರು. ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಾವು ನಿಜವಾಗಿಯೂ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಮತ್ತು ೨೦೨೧ರ ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಎಲ್ಲ ೨೩೪ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಇಳಿಸುವುದಾಗಿ ೨೦೧೭ ರಲ್ಲಿ ಅವರು ಘೋಷಿಸಿದ್ದರು.

ರಜನಿಕಾಂತ್ ಅವರಿಗಿಂತ ಭಿನ್ನವಾಗಿ, ಕಮಲ ಹಾಸನ್ ೨೦೧೮ ರಲ್ಲಿ ಮಧುರೈನಲ್ಲಿ ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ಪಕ್ಷವನ್ನು ಪ್ರಾರಂಭಿಸಿದ್ದರು. ಮತ್ತು ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಹೋರಾಡಿ ಶೇ . ರಷ್ಟು ಮತ ಪಡೆದಿದ್ದರು. ಜನವರಿಯಲ್ಲಿ ಚಿತ್ರದ ಚಿತ್ರೀಕರಣಕ್ಕೆ ತೆರಳುವ ಮುನ್ನ ಕಮಲ್ ಹಾಸನ್ ತಮ್ಮ ಅಭಿಯಾನದ ಎರಡನೇ ಹಂತದ ಪ್ರಚಾರ ನಡೆಸಿದ್ದರು.

ಕಮಲ ಹಾಸನ್ ಅವರು ಡಿಎಂಕೆ, ಎಐಎಡಿಎಂಕೆ ಮತ್ತು ಅವುಗಳ ರಾಷ್ಟ್ರೀಯ ಪಾಲುದಾರರಾದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಸ್ಪರ್ಧಿಸಲಿದ್ದಾರೆ. ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಮತ್ತು ಡಿಎಂಕೆ ನಾಯಕ ಎಂ ಕರುಣಾನಿಧಿ ಅವರ ಮರಣದ ನಂತರ ಇದು ಮೊದಲ ರಾಜ್ಯ ಚುನಾವಣೆಯಾಗಿದೆ.

ರಾಜಕೀಯ ಯೋಜನೆಗೆ ರಜನೀಕಾಂತ್ ತೆರೆ

 ರಾಜಕೀಯ ಯೋಜನೆಗೆ ರಜನೀಕಾಂತ್ ತೆರೆ

ಚೆನ್ನೈ: ಸಂಪೂರ್ಣ ಯು-ಟರ್ನಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರುರಾಜಕೀಯಕ್ಕೆ ಧುಮುಕುವುದಿಲ್ಲ ಮತ್ತು ಮೊದಲೇ ಘೋಷಿಸಿದಂತೆ ಪಕ್ಷವನ್ನು ಪ್ರಾರಂಭಿಸುವುದಿಲ ಎಂದು 2020 ಡಿಸೆಂಬರ್ 2020ರ ಮಂಗಳವಾರ ಘೋಷಿಸಿದರು. ರಾಜಕಾರಣಿಯಾಗಿ ಬದಲಾದ ನಟ ಡಿಸೆಂಬರ್ ೩೧ ರಂದು ಪಕ್ಷದ ಹೆಸರಿನ ವಿವರಗಳನ್ನು ನೀಡುವುದಾಗಿ ಹೇಳಿದ್ದರು. ಆದರೆ ಅದಕ್ಕೂ ಮುನ್ನ ಅವರನ್ನು ಅಧಿಕ ರಕ್ತದೊತ್ತಡದಿಂದ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್ -೧೯ ಭಯವನ್ನು ಮೂರು ಪುಟಗಳ ಪತ್ರದಲ್ಲಿ ಉಲ್ಲೇಖಿಸಿದ ರಜನಿಕಾಂತ್, ತಮ್ಮ ರಾಜಕೀಯ ಪ್ರಯಾಣದಲ್ಲಿ ತಮ್ಮೊಂದಿಗೆ ಬಂದಿರುವವರ ಬಗ್ಗೆ ಆತಂಕ ವ್ಯಕ್ತಪಡಿಸಿದರು.

"ಕೋವಿಡ್ -೧೯ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಜನರನ್ನು ಭೇಟಿ ಮಾಡಲು ಸಾಧ್ಯವಾಗದ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸದಿರಲು ನಿರ್ಧರಿಸಿದೆ. ’ಅನಾಥೆ ಶೂಟಿಂಗ್ ಸಮಯದಲ್ಲಿ, ಸುಮಾರು ೧೨೦ ಜನರನ್ನು ಪ್ರತಿದಿನ ಪರೀಕ್ಷಿಸಲಾಯಿತು ಮತ್ತು ಪೈಕಿ ನಾಲ್ವರಲ್ಲಿ ಸೋಂಕು ಕಂಡು ಬಂದಿತು. ಚಲನಚಿತ್ರ ನಿರ್ಮಾಪಕ ಕಲಾನಿಧಿ ಮಾರನ್ ಶೂಟಿಂಗ್ ಮುಂದೂಡಲು ನಿರ್ಧರಿಸಿದ್ದಾರೆ ಎಂದು ರಜನಿಕಾಂತ್  ಬರೆದಿದ್ದಾರೆ.

ಜನರು ಮುಖಗವಸುಗಳನ್ನು ಧರಿಸಿ ಸಾಮಾಜಿಕ ಅಂತರ ಪಾಲಿಸಿದ್ದಾಗೂ ಪ್ರಕರಣಗಳು ಬೆಳಕಿಗೆ ಬಂದವು, ಹಾಗಿರುವಾಗ ಪ್ರಚಾರ ಅಭಿಯಾನದಲ್ಲಿ ಲಕ್ಷಾಂತರ ಜನರನ್ನು ಭೇಟಿ ಮಾಡಿದರೆ ಏನಾಗಬಹುದು?’ ಎಂದು ಅವರು ಅಚ್ಚರಿ ವ್ಯಕ್ತ ಪಡಿಸಿದರು.

"ರಾಜಕೀಯಕ್ಕೆ ಪ್ರವೇಶ ಮಾಡದೇ ಇರುವ ನನ್ನ ನಿರ್ಧಾರವನ್ನು ಕೆಲವರು ಟೀಕಿಸಬಹುದಾದರೂ, ಯಾವುದೇ  ಅಪಾಯವನ್ನು ಎದುರು ಹಾಕಿಕೊಳ್ಳಲು ನಾನು ಸಿದ್ಧನಿಲ್ಲ. ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದಾಗ ಎಷ್ಟೊಂದು ಕೆಟ್ಟದೆನ್ನಿಸುತು ಎಂಬುದು ನನಗೆ ಗೊತ್ತಿದೆ ಎಂದು ರಜನಿಕಾಂತ್ ಹೇಳಿದರು.

ಪ್ರಸ್ತುತರಜಿನಿ ಮಕ್ಕಲ್ ಮಂದಿರಂ ಜನರೊಂದಿಗೆ ಕೆಲಸ ಮಾಡುವುದನ್ನು ಮುಂದುವರೆಸುವುದಾಗಿ ಅವರು ಹೇಳಿದರು. ಮಂದಿರದ ಸದಸ್ಯರು, ಸಾರ್ವಜನಿಕರು ಮತ್ತು ತಮ್ಮ ಅಭಿಮಾನಿಗಳಿಂದ ಅವರು ಕ್ಷಮೆಯನ್ನು ಕೋರಿದರು.

"ಕಳೆದ ಮೂರು ವರ್ಷಗಳಿಂದ, ರಜಿನಿ ಮಕ್ಕಲ್ ಮಂದಿರ ಪದಾಧಿಕಾರಿಗಳು ಜನರೊಂದಿಗೆ ಶಿಸ್ತಿನಿಂದ ಕೆಲಸ ಮಾಡುತ್ತಿದ್ದರು. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನವೆಂಬರ್ ೩೦ ರಂದು ನಾನು ಪದಾಧಿಕಾರಿಗಳನ್ನು ಭೇಟಿಯಾದಾಗ, ಅವರೆಲ್ಲರೂ ನನ್ನ ನಿರ್ಧಾರವನ್ನು ಅನುಸರಿಸುವುದಾಗಿ ಹೇಳಿದ್ದರು. ನನ್ನ ಜೀವಿತಾವಧಿಯಲ್ಲಿ ಇದನ್ನು ಮರೆಯುವುದಿಲ್ಲ ಎಂದು ನಟ ಹೇಳಿದರು.

ರಜನಿಕಾಂತ್ ಅವರ ಅಣ್ಣ ೭೭ ವರ್ಷದ ಆರ್ ಸತ್ಯನಾರಾಯಣ ರಾವ್ ಅವರು ತಮಿಳು ಸೂಪರ್‌ಸ್ಟಾರ್ ನಡೆಯನ್ನು ಬೆಂಬಲಿಸಿದರು. ’ಇದು ನನ್ನ ಸಹೋದರನ ಆಸೆ ಮತ್ತು ಅವರ ಮನಸ್ಸನ್ನು ಬದಲಾಯಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸತ್ಯನಾರಾಯಣ ರಾವ್ ಹೇಳಿದರು.

ರಜನಿಕಾಂತ್ ಅವರ ಯೋಜಿತ ರಾಜಕೀಯ ಚೊಚ್ಚಲ ಪ್ರದರ್ಶನದಲ್ಲಿ ಜನರು ಹೊಂದಿದ್ದ "ನಿರೀಕ್ಷೆಗಳ ಬಗ್ಗೆ ಗಮನ ಸೆಳೆದಾಗನಾವೂ ಸಹ ನಂಬಿದ್ದೆವು. (ಅವರು ಪಕ್ಷವನ್ನು ಪ್ರಾರಂಭಿಸುತ್ತಾರೆ ಎಂದು)". (ಆದರೆ) ಅವರು (ರಜನಿಕಾಂತ್) ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ, ನಾವು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಇದು ಅವರ ಆಸೆ (ಪಕ್ಷವನ್ನು ಪ್ರಾರಂಭಿಸಬಾರದು). ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಖಂಡಿತವಾಗಿಯೂ ಸರಿ ಎಂದು ರಾವ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿತು.

ರಜನಿಕಾಂತ್ ಅವರ ಪೂರ್ಣ ಹೇಳಿಕೆ ಹೀಗಿದೆ:

ನನ್ನ ಪ್ರೀತಿಯ ಅಭಿಮಾನಿಗಳಿಗೆ, ನಾನುಅನ್ನಾಥೆ ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಹೋಗಿದ್ದೆ. ನಾವು ಸುಮಾರು ೧೨೦ ಸದಸ್ಯರನ್ನು ಒಳಗೊಂಡ ಸಿಬ್ಬಂದಿಯೊಂದಿಗೆ ಚಿತ್ರೀಕರಣ ಮಾಡುತ್ತಿದ್ದೇವೆ. ನಾವು ತುಂಬಾ ಜಾಗರೂಕರಾಗಿದ್ದರೂ, ಸಿಬ್ಬಂದಿಯ ನಾಲ್ಕು ಜನರಿಗೆ ಕೊರೋನವೈರಸ್ ಸೋಂಕು ತಗುಲಿದೆ. ಸಿಬ್ಬಂದಿಯಲ್ಲಿರುವ ಪ್ರತಿಯೊಬ್ಬರನ್ನೂ ಸೋಂಕಿಗಾಗಿ ಪರೀಕ್ಷಿಸಲಾಯಿತು. ಆದರೆ ನನಗೆ ರಕ್ತದೊತ್ತಡದಲ್ಲಿ ಹೆಚ್ಚಿನ ಏರಿಳಿತವಿತ್ತು. ಆದ್ದರಿಂದ, ನಾನು ವೈದ್ಯರ ಮೇಲ್ವಿಚಾರಣೆಯಲ್ಲಿದ್ದೆ ಮತ್ತು ಸತತವಾಗಿ ಮೂರು ದಿನಗಳವರೆಗೆ ವೈದ್ಯರು ಮೇಲ್ವಿಚಾರಣೆ ನಡೆಸಿದ್ದರು.

ಇದರಿಂದಾಗಿ ನಿರ್ಮಾಪಕ ಕಲಾನಿಧಿ ಮಾರನ್ ಚಿತ್ರೀಕರಣವನ್ನು ನಿಲ್ಲಿಸಿದರು ಮತ್ತು ಅನೇಕರು ಉದ್ಯೋಗ ಕಳೆದುಕೊಂಡರು. ನಾನು ಅದನ್ನು ಸರ್ವಶಕ್ತನ ಎಚ್ಚರಿಕೆಯಂತೆ ತೆಗೆದುಕೊಳ್ಳುತ್ತಿದ್ದೇನೆ. ನಾನು ರಾಜಕೀಯ ಪಕ್ಷವನ್ನು ಪ್ರಾರಂಭಿಸಿದರೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದರೆ, ಚುನಾವಣೆಯಲ್ಲಿ ನಾನು ವಿಜಯಶಾಲಿಯಾಗಲು ಸಾಧ್ಯವಿಲ್ಲ. ನಾನು ಜನರನ್ನು ನೇರವಾಗಿ ಭೇಟಿಯಾಗದಿದ್ದರೆ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಮತ್ತು ಕೊರೋನವೈರಸ್ಸಿನ ಎರಡನೇ ಅಲೆಯು ಮತ್ತೊಂದು ದೊಡ್ಡ ಬೆದರಿಕೆಯಾಗಿದೆ. ನಾನು ಇಮ್ಯುನೊ ಸಪ್ರೆಸೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೇನೆ, ಲಸಿಕೆಗಳು ಲಭ್ಯವಿದ್ದರೂ ಸಹ, ಯಾವುದೇ ಭರವಸೆ ಇರುವುದಿಲ್ಲ. ನನ್ನನ್ನು ನಂಬುವ ಜನರನ್ನು ಆರ್ಥಿಕ ನಷ್ಟ ಮತ್ತು ಮಾನಸಿಕ ಆಘಾತಕ್ಕೆ ಒಳಪಡಿಸಲು ನಾನು ಸಿದ್ಧನಿಲ್ಲ. ನಾನು ರಾಜಕೀಯ ಪಕ್ಷವನ್ನು ಪ್ರಾರಂಭಿಸುತ್ತಿಲ್ಲ ಎಂದು ಘೋಷಿಸಲು ನನಗೆ ತುಂಬಾ ನೋವಾಗಿದೆ, ಇದು ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ದೊಡ್ಡ ನಿರಾಶೆಯಾಗಿದೆ. ದಯವಿಟ್ಟು ನಿರ್ಧಾರಕ್ಕಾಗಿ ನನ್ನನ್ನು ಕ್ಷಮಿಸಿ.

ಮಕ್ಕಲ್ ಮಂದಿರಂ ಸದಸ್ಯರು ನನ್ನ ಮಾತುಗಳನ್ನು ಪಾಲಿಸುವ ಮೂಲಕ ತಮ್ಮ ಅತ್ಯಂತ ವಿಧೇಯತೆ ಮತ್ತು ಉತ್ತಮ ನಡವಳಿಕೆಯನ್ನು ಉಳಿಸಿಕೊಂಡಿದ್ದರು. ನೀವು ಜನರಿಗೆ ಸೇವೆ ಸಲ್ಲಿಸಿದ್ದೀರಿ. ಮಾನವೀಯತೆಗೆ ನೀವು ಮಾಡಿದ ಸೇವೆಯು ವ್ಯರ್ಥವಾಗುವುದಿಲ್ಲ. ಮಕ್ಕಲ್ ಮಂದಿರಂ ಕಾರ್ಯಕರ್ತರು ನನ್ನ ಮೇಲೆ ಆಳವಾದ ನಂಬಿಕೆಯನ್ನು ಹೊಂದಿದ್ದಾರೆ ಮತ್ತು ನನ್ನ ಯಾವುದೇ ನಿರ್ಧಾರಗಳನ್ನು ಒಪ್ಪಿಕೊಳ್ಳಲು ಅವರು ಸಿದ್ಧರಾಗಿರುವುದಾಗಿ ಹೇಳಿದರು. ಅವರ ಪ್ರೀತಿಯ ಮುಂದೆ ನಾನು ಶಿರಬಾಗುತ್ತೇನೆ.

ಯಾವುದೇ ಟೀಕೆ ಬಂದರೂ ಅದನ್ನು ಸಹಿಸಿಕೊಂಡಿದ್ದೇನೆ. ಅದಕ್ಕಾಗಿ ನಾನು ತಮ್ಮಿಯಾರೂವಿ ಉನ್ಮಾದನ್ ಅಯ್ಯ ಅವರ ಬೆಂಬಲಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅರ್ಜುನ ಮೂರ್ತಿ ಅವರ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತಿದ್ದೇನೆ, ಏಕೆಂದರೆ ನನ್ನ ಕೋರಿಕೆಯ ಸಲುವಾಗಿ ಅವರು ದೊಡ್ಡ ಪಕ್ಷದಲ್ಲಿ ತಮ್ಮ ಸ್ಥಾನವನ್ನು ತೊರೆದು ನನ್ನೊಂದಿಗೆ ಸೇರಿಕೊಂಡರು,. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸದೆಯೇ ನಾನು ಇನ್ನೂ ಜನರ ಸೇವೆ ಮಾಡುತ್ತೇನೆ. ನನ್ನನ್ನು ಬೇಷರತ್ತಾಗಿ ಪ್ರೀತಿಸುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ.

ತಮಿಳು ಜನರು ದೀರ್ಘಕಾಲ ಬಾಳಲಿ, ಜೈಹಿಂದ್.

Advertisement