Showing posts with label Fire tragedy. Show all posts
Showing posts with label Fire tragedy. Show all posts

Wednesday, June 12, 2024

ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

 ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

ವದೆಹಲಿ: ಕುವೈತ್‌ನಲ್ಲಿ ಡಜನ್‌ಗಟ್ಟಲೆ ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡಕ್ಕೆ 2024 ಜೂನ್‌ 12ರ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ ಪರಿಣಾಮವಾಗಿ ಕನಿಷ್ಠ 40 ಭಾರತೀಯರು ಸೇರಿದಂತೆ ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ನಿವಾಸಿಗಳು ಮಲಗಿದ್ದ ಕಾರಣ ಹೊಗೆಯಿಂದ ಉಸಿರುಗಟ್ಟಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನ ಮಂಗಾಫ್ ಪ್ರದೇಶದಲ್ಲಿ ಕಟ್ಟಡದ ಕೆಳ ಮಹಡಿಯಲ್ಲಿನ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಬ್ ಟೈಮ್ಸ್ ಪ್ರಕಾರ, ಮೃತರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದ ರಾಜ್ಯಗಳವರು, ಅವರ ವಯಸ್ಸು 20 ರಿಂದ 50 ವರ್ಷಗಳು.
ತಲಾ 2 ಲಕ್ಷ ರೂ ಪರಿಹಾರ: ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂಪಾಯಿಗಳ ಎಕ್ಸ್‌ ಗ್ರಾಷಿಯಾ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿಯವರ ಸೂಚನೆ ಮೇರೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರು ತುರ್ತಾಗಿ ಕುವೈತಿಗೆ ಪಯಣಿಸಿದ್ದಾರೆ.  
ಕುವೈತ್‌ನ ಉಪ ಪ್ರಧಾನ ಮಂತ್ರಿ ಹಾಗೂ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಅಗ್ನಿ ದುರಂತವು "ಕಂಪೆನಿ ಮತ್ತು ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.
ಕಟ್ಟಡವನ್ನು ಎನ್‌ಬಿಟಿಸಿ ಗ್ರೂಪ್ ಬಾಡಿಗೆಗೆ ಪಡೆದಿದ್ದು, ಮಲಯಾಳಿ ಉದ್ಯಮಿ ಕೆ.ಜಿ.ಅಬ್ರಹಾಂ ಒಡೆತನದಲ್ಲಿದೆ. ಗಲ್ಫ್‌ನಲ್ಲಿ ಕಡಿಮೆ ಸಂಬಳದ, ನೀಲಿ ಕಾಲರ್ ಕೆಲಸಗಾರರು ಹೆಚ್ಚಾಗಿ ಕಿಕ್ಕಿರಿದ ವಸತಿಗಳಲ್ಲಿ ವಾಸಿಸುತ್ತಾರೆ.
ಅಗ್ನಿ ದುರಂತ ಸಂಭವಿಸಿದ ಕಟ್ಟಡದ ಹೊರಗೆ ಕುವೈಟ್ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳು ಜಮಾಯಿಸಿವೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸಭೆಯ ನಂತರ ಶೀಘ್ರದಲ್ಲೇ ಕುವೈತ್‌ಗೆ ತೆರಳುವುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ಕೀರ್ತಿ ವರ್ಧನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

Thursday, January 21, 2021

ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಬೆಂಕಿ: ೫ ಸಾವು

 ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ನಲ್ಲಿ ಬೆಂಕಿ: ಸಾವು

ನವದೆಹಲಿ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಟ್ಟಡದಲ್ಲಿ 2021 ಜನವರಿ 21ರ ಗುರುವಾರ ಎರಡು ಬಾರಿ ಅಗ್ನಿಅನಾಹುತ ಸಂಭವಿಸಿದ್ದು, ಮೊದಲಿಗೆ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿಯಲ್ಲಿ ಐವರು ಸಾವನ್ನಪ್ಪಿದ್ದಾರೆ.

ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಐದು ಸುಟ್ಟ ಶವಗಳು ಪತ್ತೆಯಾಗಿವೆ ಎಂದು ಪುಣೆಯ ಮೇಯರ್ ಮುರಳೀಧರ್ ಮೊಹೋಲ್ ಹೇಳಿದರು.

ಕಟ್ಟಡದಲ್ಲಿ ಸಿಕ್ಕಿಬಿದ್ದ ಇತರ ಕೆಲವರನ್ನು ರಕ್ಷಿಸಲಾಗಿದೆ. ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ವೆಲ್ಡಿಂಗ್ ಕೆಲಸವು ಬೆಂಕಿಗೆ ಕಾರಣವಾಗಿದೆ ಎಂದು ಊಹಿಸಲಾಗಿದೆ ಎಂದು ಅವರು ಹೇಳಿದರು.

ಕಂಪೆನಿಯ ಸಿಇಒ ಮೊದಲಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು, ಆದರೆ ಸಾವುಗಳು ದೃಢಪಟ್ಟ ನಂತರ ತಮ್ಮ ಹೇಳಿಕೆಯನ್ನು ಪರಿಷ್ಕರಿಸಿದರು.

ಬೆಂಕಿ ದುರಂತವು ಕೊರೋನಾವಿರೋಧಿ  ಲಸಿಕೆಗಳನ್ನು ತಯಾರಿಸುವ ಸೌಲಭ್ಯವಿರುವ ಸ್ಥಳದಿಂದ ದೂರದಲ್ಲಿ ಇರುವುದರಿಂದ ಕೋವಿಶೀಲ್ಡ್ ಲಸಿಕೆ ತಯಾರಿಕೆಯ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ ಎಂದು ಅವರು ಹೇಳಿದರು.

 ಸೀರಮ್ ಇನ್ಸ್ಟಿಟ್ಯೂಟ್ ಆವರಣದಲ್ಲಿರುವ ಎಸ್ ಝಡ್ 3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಮಧ್ಯಾಹ್ನ .೪೫ ಕ್ಕೆ ಮೊದಲ ಬೆಂಕಿ ಕಾಣಿಸಿಕೊಂಡಿತು ಎಂದು ಉಪ ಪೊಲೀಸ್ ಕಮೀಷನರ್ ನಮ್ರತಾ ಪಾಟೀಲ್ ತಿಳಿಸಿದರು.

Saturday, November 14, 2020

ಕೋಲ್ಕತದಲ್ಲಿ ಭಾರೀ ಅಗ್ನಿದುರಂತ: ಹಲವಾರು ಮನೆ ಭಸ್ಮ

 ಕೋಲ್ಕತದಲ್ಲಿ ಭಾರೀ ಅಗ್ನಿದುರಂತ: ಹಲವಾರು ಮನೆ ಭಸ್ಮ

ಕೋಲ್ಕತ: ಕೋಲ್ಕತ ನ್ಯೂ ಟೌನಿನ ನಿವೇದಿತ ಪಾಲಿ ಕೊಳಚೆಗೇರಿಯಲ್ಲಿ 2020 ನವೆಂಬರ್ 14ರ ಶನಿವಾರ ರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು ಹಲವಾರು ಮನೆಗಳು ಬೆಂಕಿಯಲ್ಲಿ ಭಸ್ಮವಾಗಿವೆ ಎಂದು ವರದಿಗಳು ತಿಳಿಸಿದವು.

ಕೋಲ್ಕತ ಹೊಸ ಪಟ್ಟಣದ ನಿವೇದಿತಾ ಪಾಲಿಯ ಕೊಳಚೆಗೇರಿ ಪ್ರದೇಶದಲ್ಲಿ ಶನಿವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪ್ರಕಾರ ಹಲವಾರು ಮನೆಗಳು ಅಗ್ನಿಗಾಹುತಿಯಾಗಿವೆ.

ಐದು ಅಗ್ನಿಶಾಮಕ ಯಂತ್ರಗಳು ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ಸೇವಾ ಅಧಿಕಾರಿ ಮತ್ತು ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. 

Friday, August 21, 2020

ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಬೆಂಕಿ, 9 ಸಾವು

 ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಬೆಂಕಿ, 9 ಸಾವು

ಹೈದರಾಬಾದ್: ತೆಲಂಗಾಣದ ಶ್ರೀಶೈಲಂನ ಜಲವಿದ್ಯುತ್ ಸ್ಥಾವರದಲ್ಲಿ 2020 ಆಗಸ್ಟ್ 20ರ ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಿಕ್ಕಿಹಾಕಿಕೊಂಡ ಎಲ್ಲ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು 2020 ಆಗಸ್ಟ್ 21ರ ಶುಕ್ರವಾರ ತಿಳಿಸಿದರು.

ಮೃತರಾಗಿರುವ ಒಂಬತ್ತು ಮಂದಿಯ ಪೈಕಿ ಮೂವರನ್ನು ಸಹಾಯಕ ಎಂಜಿನಿಯರುಗಳಾದ ಸುಂದರ ನಾಯಕ್, ಮೋನ ಕುಮಾರ್ ಮತ್ತು ಫಾತಿಮಾ ಎಂಬುದಾಗಿ ಗುರುತಿಸಲಾಗಿದೆ.

ಬೆಂಕಿ ದುರಂತದ ಕಾರಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಆದೇಶಿಸಿದ್ದಾರೆ. ಸಿಐಡಿಯ ಹೆಚ್ಚುವರಿ ಪೊಲೀಸ್ ನಿರ್ದೇಶಕರಾದ ಗೋವಿಂದ ಸಿಂಗ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಶೀಘ್ರವಾಗಿ ವರದಿ ಸಲ್ಲಿಸುವಂತೆ ಗೋವಿಂದ ಸಿಂಗ್ ಅವರಿಗೆ ಸೂಚಿಸಲಾಗಿದೆ.

ಶ್ರೀಶೈಲಂ ವಿದ್ಯುತ್ ಕೇಂದ್ರದ ಬೆಂಕಿಯಲ್ಲಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ಮುಖ್ಯಮಂತ್ರಿ ದುಃಖ ವ್ಯಕ್ತಪಡಿಸಿದರು. ಇದು ದುರದೃಷ್ಟಕರ ಎಂದು ಬಣ್ಣಿಸಿದ ಕೆಸಿಆರ್, ಸಿಕ್ಕಿಬಿದ್ದ ಎಂಜಿನಿಯರುಗಳನ್ನು ರಕ್ಷಿಸಲು ಮತ್ತು ಅವರನ್ನು ಜೀವಂತವಾಗಿ ಹೊರಗೆ ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ, ಆದರೆ ವ್ಯರ್ಥವಾಯಿತು ಎಂದು ಹೇಳಿದರು. ದುಃಖಿತ ಕುಟುಂಬಗಳಿಗೆ ಅವರು ತಮ್ಮ ಸಂತಾಪವನ್ನು ಸೂಚಿಸಿದರು.

ಟಿಎಸ್ ಜೆಂಕೊ ಉನ್ನತ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ ತೆಲಂಗಾಣ ವಿದ್ಯುತ್ ಸಚಿವ ಜಿ.ಜಗದೀಶ್ವರ್ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಿದ್ಯುತ್ ಘಟಕದ ವಿದ್ಯುತ್ ಫಲಕಗಳಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಮತ್ತು ಅದು ವಿದ್ಯುತ್ ಘಟಕದ ಇತರ ಭಾಗಗಳಿಗೆ ಹರಡಿತು ಎಂದು ಶಂಕಿಸಲಾಗಿದೆ ಎಂದು ಹೇಳಿದರು.

ಗುರುವಾರ ತಡರಾತ್ರಿ ಅಪಘಾತ ಸಂಭವಿಸಿದಾಗ ಪವರ್‌ಹೌಸ್‌ನೊಳಗೆ ಟಿಎಸ್‌ಜೆಂಕೊದ ೩೦ ಉದ್ಯೋಗಿಗಳು ಇದ್ದರು. ಆರು ಉದ್ಯೋಗಿಗಳನ್ನು ರಕ್ಷಿಸಿ ಸುರಂಗದಿಂದ ಹೊರಗೆ ಕರೆತಂದರೆ, ಇನ್ನೂ ೧೫ ಮಂದಿ ಯೋಜನೆಯ ತುರ್ತು ನಿರ್ಗಮನ ಮಾರ್ಗದ ಮೂಲಕ ಹೊರಬರಲು ಸಾಧ್ಯವಾಯಿತು.

ಆದರೆ, ಸುರಂಗದೊಳಗೆ ದಟ್ಟ ಹೊಗೆ ಆವರಿಸಿದ್ದರಿಂದ ಇತರ ಒಂಬತ್ತು ಮಂದಿ ಸಿಕ್ಕಿಬಿದ್ದರು. ರಕ್ಷಣಾ ತಂಡಗಳಿಗೆ ಸ್ಥಳ ತಲುಪುವುದು ಕಷ್ಟವಾಯಿತು ಎಂದು ರೆಡ್ಡಿ ಹೇಳಿದರು.

ಡೆಪ್ಯೂಟಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪವನ್ ಕುಮಾರ್, ಪ್ಲಾಂಟ್ ಜೂನಿಯರ್ ಅಸಿಸ್ಟೆಂಟ್ ರಾಮಕೃಷ್ಣ, ಜೂನಿಯರ್ ಎಂಜಿನಿಯರುಗಳಾದ ಮಾಥ್ರು, ಕೃಷ್ಣ ರೆಡ್ಡಿ ಮತ್ತು ವೆಂಕಟಯ್ಯ ಮತ್ತು ಚಾಲಕ ಪಾಲಂಕಯ್ಯ ಸೇರಿದಂತೆ ರಕ್ಷಿಸಲ್ಪಟ್ಟ ನೌಕರರನ್ನು ಪವರ್ ಹೌಸ್ ಸಮೀಪದ ಈಗಲಾ ಪೆಂಟಾದ ಟಿಎಸ್‌ಜೆಂಕೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ.

ಎಸ್‌ಎಲ್‌ಬಿಪಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ನೀರಾವರಿ ಯೋಜನೆಯಾದ ಕೃಷ್ಣ ನದಿಯ ಶ್ರೀಶೈಲಂ ಜಲಾಶಯದ ತೆಲಂಗಾಣ ಭಾಗದಲ್ಲಿದೆ. ಜಲಾಶಯದ ಪಕ್ಕದಲ್ಲಿರುವ ನಲ್ಲಮಾಲಾ ಕಾಡುಗಳ ಕೆಳಗಿರುವ ಬೃಹತ್ ಸುರಂಗದಲ್ಲಿ ವಿದ್ಯುತ್‌ಮನೆ ನಿರ್ಮಿಸಲಾಗಿದ್ದು, ಪ್ರಸ್ತುತ ನದಿಗೆ ಭಾರೀ ಒಳಹರಿವು ಬರುತ್ತಿದೆ. ನೀರು ಹೊರಹಾಕಲು ಎಲ್ಲಾ ಗೇಟ್‌ಗಳನ್ನು ಎತ್ತುವಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ಐದು ಅಗ್ನಿಶಾಮಕ ಯಂತ್ರಗಳು ಹೊಗೆಯನ್ನು ನಂದಿಸುವಲ್ಲಿ ತೊಡಗಿವೆ. ಬೆಂಕಿಯನ್ನು ನಂದಿಸಿದರೂ, ಹೊಗೆ ಇನ್ನೂ ಸವಾಲನ್ನು ಒಡ್ಡುತ್ತಿದೆ.

ಬೆಳಿಗ್ಗೆ ಮೂರು ಬಾರಿಯಾದರೂ ರಕ್ಷಣಾ ಸಿಬ್ಬಂದಿ ವಿದ್ಯುತ್ ಕೇಂದ್ರ ಘಟಕಗಳಿಗೆ ಪ್ರವೇಶಿಸಲು ಪ್ರಯತ್ನಿಸಿದರೂ ದಟ್ಟ ಹೊಗೆಯಿಂದಾಗಿ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿವೆ.

ಕರ್ನೂಲ್ ಜಿಲ್ಲೆಯ ಕೋಥಕೋಟಾ, ಮಹಾಬಬೂಬ್‌ನಗರ, ಅಮರಾಬಾದ್, ಅಚಂಪೆಟ್ಟಾ ಮತ್ತು ಆತ್ಮಕೂರ್‌ಗಳಿಂದ ಹಲವಾರು ತಂಡಗಳನ್ನು ಸೇವೆಗೆ ಕಳುಹಿಸುವಂತೆ ಕೋರಲಾಗಿದೆ ಎಂದು  ನಾಗಾರ್ಕರ್ನೂಲ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀದಾಸ್ ತಿಳಿಸಿದರು.

ಜಲವಿದ್ಯುತ್ ಸ್ಥಾವರಗಳಲ್ಲಿ ರೀತಿಯ ಅಪಘಾತಗಳು ಬಹಳ ವಿರಳವಾಗಿರುವುದರಿಂದ ಇದು ದುರದೃಷ್ಟಕರ ಘಟನೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸಚಿವ ರೆಡ್ಡಿ ಹೇಳಿದರು.

ಪ್ರಧಾನಿ ಮೋದಿ ಸಂತಾಪ

ಶ್ರೀಶೈಲಂ ಜಲವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ದುಃಖ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರುಇದು ಅತ್ಯಂತ ದುರದೃಷ್ಟಕರ. ನಾನು ದುಃಖಿತ ಕುಟುಂಬಗಳ ಜೊತೆಗಿದ್ದೇನೆ ಎಂದು ಹೇಳಿದರು.

Wednesday, June 3, 2020

ಗುಜರಾತ್ ಕಾರ್ಖಾನೆಯಲ್ಲಿ ಸ್ಫೋಟ, ೫ ಕಾರ್ಮಿಕರ ಸಾವು, ೫೭ ಮಂದಿಗೆ ಗಾಯ

ಗುಜರಾತ್ ಕಾರ್ಖಾನೆಯಲ್ಲಿ ಸ್ಫೋಟ, ೫ ಕಾರ್ಮಿಕರ ಸಾವು, ೫೭ ಮಂದಿಗೆ ಗಾಯ

ಭರೂಚ್: ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್ನಲ್ಲಿ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ನಲ್ಲಿ 2020 ಜೂನ್ 03ರ ಬುಧವಾರ ಸಂಭವಿಸಿದ ಭಾರಿ ಸ್ಫೋಟ ಹಾಗೂ ಬೆಂಕಿಯಲ್ಲಿ  ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ೫೭ ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ಘಟನೆ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿತು.

ಇಲ್ಲಿಯವರೆಗೆ ನಾವು ಐವರು ಉದ್ಯೋಗಿಗಳ ಸಾವನ್ನು ದೃಢ ಪಡಿಸಿದ್ದೇವೆ. ಕೆಲವು ಶವಗಳನ್ನು ಕಾರ್ಖಾನೆಯಿಂದ ಹೊರತರಲಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆಎಂದು ಭರೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ.ಚುದಾಸಮಾ ತಿಳಿಸಿದರು.

ಬುಧವಾರ ಮಧ್ಯಾಹ್ನ ಭರೂಚ್ ದಹೇಜ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಯಶಶ್ವಿ ರಸಾಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಟ್ಯಾಂಕ್ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಬೆಂಕಿಯಲ್ಲಿ ಸಿಲುಕಿ ಐವರು ಜನರು ಪ್ರಾಣ ಕಳೆದುಕೊಂಡರು ಮತ್ತು ೫೭ ಜನರು ಗಾಯಗೊಂಡಿದ್ದಾರೆಎಂದು ಭರೂಚ್ ಜಿಲ್ಲಾಧಿಕಾರಿ ಡಾ ಎಂಡಿ ಮೋಡಿಯಾ ತಿಳಿಸಿದರು.

ಗಾಯಗೊಂಡ ಒಟ್ಟು ೫೭ ಕಾರ್ಮಿಕರನ್ನು ಭರೂಚ್ ಮತ್ತು ವಡೋದರಾ ನಗರದ ಸಮೀಪದ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎಸ್ಪಿ ಹೇಳಿದರು, ರಕ್ಷಣಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಸಾವಿನ ಸಂಖ್ಯೆ ಹೆಚಾಗುವ ಸಾದ್ಯತೆ ಇದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ಸ್ಫೋಟ ಸಂಭವಿಸಿದ ಕಾರ್ಖಾನೆಯ ಬಳಿ ಇರುವ ಲಖಿ ಮತ್ತು ಲುವಾರಾ ಗ್ರಾಮಗಳ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಭರೂಚ್ ಜಿಲ್ಲಾಧಿಕಾರಿ ಹೇಳಿದರು.

 ಸಮೀಪದ ಗ್ರಾಮಗಳಿಂದ ,೮೦೦ ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ವಿಶಾಖಪಟ್ಟಣ ಸಮೀಪದ ಎಲ್.ಜಿ.ಪಾಲಿಮರ್ಸ್ ರಾಸಾಯನಿಕ ಘಟಕದಲ್ಲಿ ಇತ್ತೀಚೆಗೆ ಸ್ಟೈರೀನ್ ಮೊನೊಮರ್ ಅನಿಲ ಸೋರಿಕೆಯಾಗಿ ೧೧ ಮಂದಿ ಮೃತಪಟ್ಟು, ನೂರಾರು ಮಂದಿ ಅಸ್ವಸ್ಥಗೊಂಡಿದ್ದರು.

Advertisement