Showing posts with label Gulf. Show all posts
Showing posts with label Gulf. Show all posts

Thursday, May 7, 2020

ಏರ್ ಇಂಡಿಯಾ ಮೂಲಕ ದುಬೈಯಿಂದ ೧೭೭ ಭಾರತೀಯರು ಭಾರತದತ್ತ

ಏರ್ ಇಂಡಿಯಾ ಮೂಲಕ ದುಬೈಯಿಂದ ೧೭೭ ಭಾರತೀಯರು  ಭಾರತದತ್ತ
ದುಬೈ: ಒಟ್ಟು ೧೭೭ ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  2020 ಮೇ 07ರ ಗುರುವಾರ ಭಾರತದತ್ತ  ಪಯಣ ಹೊರಟಿತು.

ವಿಮಾನವು ಕೇರಳದ ಕೋಯಿಕ್ಕೋಡಿನಲ್ಲಿ ಬಂದು ಇಳಿಯಲಿದೆ. ಕೊರೋನಾವೈರಸ್ ದಿಗ್ಬಂಧನದ ಪರಿಣಾಮವಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರುವ ಭಾರತ ಸರ್ಕಾರದ ಉಪಕ್ರಮದ ಅಡಿಯಲ್ಲಿ ಭಾರತಕ್ಕೆ ವಾಪಸಾಗುತ್ತಿರುವ ಮೊದಲ ತಂಡ ಇದಾಗಿದೆ.

Wednesday, April 29, 2020

ಕೊಲ್ಲಿ ರಾಷ್ಟ್ರಗಳಿಗೆ ಭಾರತದ ವೈದ್ಯರು, ದಾದಿಯರು: ಕೇಂದ್ರದ ಹಸಿರು ನಿಶಾನೆ

ಕೊಲ್ಲಿ ರಾಷ್ಟ್ರಗಳಿಗೆ  ಭಾರತದ ವೈದ್ಯರು, ದಾದಿಯರು: ಕೇಂದ್ರದ ಹಸಿರು ನಿಶಾನೆ
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಎರಡು ಕೊಲ್ಲಿ ರಾಷ್ಟ್ರಗಳಿಗೆ ನೆರವು ನೀಡುವುದಕ್ಕಾಗಿ ಭಾರತದಿಂದ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾಡಿರುವ ಮನವಿಗಳಿಗೆ ಭಾರತ  2020 ಏಪ್ರಿಲ್  29ರ ಬುಧವಾರ ತಾತ್ವಿಕ ಮನ್ನಣೆ ನೀಡಿತು.

ಕುವೈತ್ ಪ್ರಧಾನಿ ಶೇಖ್ ಸಬಾಹ್ ಅಲ್ ಖಾಲಿದ್ ಅಲ್ ಹಮದ್ ಅಲ್ ಸಭಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ ತಿಂಗಳ ಆದಿಯಲ್ಲಿ ಮೊತ್ತ ಮೊದಲಿಗರಾಗಿ ಭಾರತದ ವೈದ್ಯಕೀಯ ನೆರವು ಕೋರಿದ್ದರು. ಇದಕ್ಕೆ ಸ್ಪಂದನೆಯಾಗಿ ಭಾರತವು ೧೫ ಸದಸ್ಯರ ಸೇನಾ ಕ್ಷಿಪ್ರ ಸ್ಪಂದನಾ ತಂಡವನ್ನು ಭಾರತೀಯ ವಾಯುಪಡೆ ವಿಮಾನದ ಮೂಲಕ ರವಾನಿಸಿತ್ತು.

ತಂಡವು ಸೋಮವಾರ ಹಿಂತಿರುಗುತ್ತಿದ್ದಂತೆಯೇ ಕುವೈತ್ ಇನ್ನಷ್ಟು ವೈದ್ಯಕೀಯ ತಂಡಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿತು. ’ನಮ್ಮ ಕ್ಷಿಪ್ರ ಸ್ಪಂದನಾ ತಂಡದ ಸೇವೆಯಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ನುಡಿದರು.

ಇದೇ ವೇಳೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಭಾರತೀಯ ಆರೋಗ್ಯ ರಕ್ಷಣಾ ಸಿಬ್ಬಂದಿಗಾಗಿ ಮನವಿ ಬಂತು ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದರು. ಇಂತಹುದೇ ಮನವಿಗಳು ಮಾರಿಷಸ್, ಆಫ್ರಿಕಾದ ಪೂರ್ವ ಕರಾವಳಿಯಲ್ಲಿರುವ ಕೋಮ್ರೋಸ್ ದ್ವೀಪ ಸಮೂಹಗಳಿಂದಲೂ ಬಂದಿವೆ ಎಂದು ಅವರು ನುಡಿದರು.

ಇತರ ಕೊಲ್ಲಿ ರಾಷ್ಟ್ರಗಳು ಕೂಡಾ ತಮಗೆ ಭಾರತೀಯ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ತಿಳಿಸಿದ್ದು, ಇಷ್ಟರಲ್ಲೇ ಔಪಚಾರಿಕ ಮನವಿಗಳನ್ನು ಕಳುಹಿಸುವ ನಿರೀಕ್ಷೆಯಿದೆ.

ನಿವೃತ್ತ ಸೇನಾ ವೈದ್ಯರು, ದಾದಿಯರು ಮತ್ತು ತಂತ್ರಜ್ಞರನ್ನು ಯುಎಇ ಮತ್ತು ಕುವೈತ್ ಗಳಿಗೆ ಕಳುಹಿಸಿಕೊಡಲು ಭಾರತ ಸರ್ಕಾರವು ತಾತ್ವಿಕ ನಿರ್ಧಾರ ಕೈಗೊಂಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಕೋಮ್ರೋಸ್ ಮತ್ತು ಮತ್ತು ಮಾರಿಷಸ್‌ಗೆ ಸರ್ಕಾರವು ಅಲ್ಪಾವಧಿಗೆ ಸೇನಾ ಕ್ಷಿಪ್ರ ಸ್ಪಂದನಾ ತಂಡಗಳನ್ನು ನಿಯೋಜಿಸಲು ಒಪ್ಪಿಗೆ ಕೊಟ್ಟಿದೆ. ತಂಡಗಳು ಸೇನಾ ವೈದ್ಯರು, ದಾದಿಯರು ಮತ್ತು ಇತರ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿವೆ.

ಕುವೈತ್ ಮತ್ತು ಯುಎಇಗೆ ಯಾವ ರೀತಿಯಾಗಿ ವೈದ್ಯಕೀಯ ತಂಡಗಳನ್ನು ರಚಿಸಬೇಕು ಎಂಬ ಬಗ್ಗೆ ವಿದೇಶಾಂಗ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳು ಪರಿಶೀಲನೆ ನಡೆಸುತ್ತಿವೆ.

ನಿವೃತ್ತ ಆರೋಗ್ಯ ರಕ್ಷಣಾ ವೃತ್ತಿಪರರು- ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು- ಇತ್ಯಾದಿ ಯಾರು ಕಾರ್‍ಯ ವಹಿಸಿಕೊಳ್ಳಲು ಸಿದ್ಧರಿದ್ದಾರೋ ಅಂತಹವರನ್ನು ಕೊಲ್ಲಿ ರಾಷ್ಟ್ರಗಳಿಗೆ ನೆರವಾಗಲು ಆಯ್ಕೆ ಮಾಡಬಹುದು ಎಂದು ಅಧಿಕಾರಿಯೊಬ್ಬರು ನುಡಿದರು.

ಸರಾಸರಿ ೧೦೦ ವೈದ್ಯರು, ೩೦-೪೦ ದಾದಿಯರು ಮತ್ತು ಕೆಲವು ನೂರು ಅರೆ ವೈದ್ಯಕೀಯ ಸಿಬ್ಬಂದಿ ಸೇನಾ ವೈದ್ಯಕೀಯ ದಳದಿಂದ ಪ್ರತಿವರ್ಷ ನಿವೃತ್ತರಾಗುತ್ತಾರೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಸಂದರ್ಭದಲ್ಲಿ ಭಾರತದ ಜನರ ಆರೋಗ್ಯ ಅಗತ್ಯಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆಯೇ ಕೊಲ್ಲಿ ರಾಷ್ಟ್ರಗಳ ಅಗತ್ಯಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಯೋಚನೆ ನಡೆಸಿದೆ.

ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ನೆರವಿಗಾಗಿ ಕೊಲ್ಲಿ ರಾಷ್ಟ್ರಗಳಿಂದ ಅಸಂಖ್ಯಾತ ಮನವಿಗಳು ಬಂದಿದ್ದು, ಪ್ಯಾರಾಸಿಟಮೋಲ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಕಳುಹಿಸಿಕೊಡುವಂತೆ ಅವರು ಮಾಡಿದ್ದ ಮನವಿಗಳಿಗೆ ಆದ್ಯತೆ ನೀಡುವಂತೆ ಪ್ರಧಾನಿ ಸೂಚಿಸಿದ್ದರು.

ಈವರೆಗೆ ೪೫ ಮಿಲಿಯನ್ (೪೫೦ ಲಕ್ಷ) ಹೈಡ್ರಾಕ್ಸಿಕ್ಲೊರೋಕ್ವಿನ್ ಮಾತ್ರೆಗಳು ಮತ್ತು ೧೧ ಮೆಟ್ರಿಕ್ ಟನ್ ಎಚ್‌ಸಿಕ್ಯೂ ಆಕ್ಟಿವ್ ಫಾರ್ಮಾಸ್ಯೂಟಿಕಲ್ ಇನ್‌ಗ್ರೀಡಿಯಂಟ್ಸ್‌ನ್ನು ಬಹರೈನ್, ಜೋರ್ಡಾನ್, ಒಮನ್, ಖತರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆರು ಕೊಲ್ಲಿ ರಾಷ್ಟ್ರಗಳಿಗೆ ವಾಣಿಜ್ಯ ಆಧಾರದಲ್ಲಿ ಕಳುಹಿಸಿಕೊಡಲಾಗಿದೆ.

ಇದಲ್ಲದೆ, ೨೨. ಮಿಲಿಯನ್ (೨೨೭ ಲಕ್ಷ) ಪ್ಯಾರಾಸಿಟಮೋಲ್ ಮಾತ್ರೆಗಳನ್ನು ಕುವೈತ್ ಮತ್ತು ಯುಎಇಗೆ ಏಪ್ರಿಲ್  ೧೭ರಂದು ಸರ್ಕಾರವು ಔಷಧಗಳ ಮೇಲಿನ ರಫ್ತು ನಿಯಂತ್ರಣವನ್ನು ತೆರವುಗೊಳಿಸುವುದಕ್ಕೆ ಮೊದಲೇ ಕಳುಹಿಸಿತ್ತು..  ಪ್ಯಾರಾಸಿಟಮೋಲ್‌ನ ಇನ್ನಷ್ಟು ಸರಕನ್ನು ಬಳಿಕ ಇರಾಕ್ ಮತ್ತು ಯೆಮೆನ್ ಹಾಗೂ ಇನ್ನೆರಡು ರಾಷ್ಟ್ರಗಳಿಗೂ ಕಳುಹಿಸಲಾಗಿತ್ತು.

Tuesday, April 28, 2020

ವಿದೇಶಗಳಲ್ಲಿನ ಭಾರತೀಯರ ಸ್ಥಳಾಂತರ: ಬಡ ಕಾರ್ಮಿಕರಿಗೆ ಪ್ರಧಾನಿ ಆದ್ಯತೆ

ವಿದೇಶಗಳಲ್ಲಿನ ಭಾರತೀಯರ ಸ್ಥಳಾಂತರ: ಬಡ ಕಾರ್ಮಿಕರಿಗೆ ಪ್ರಧಾನಿ ಆದ್ಯತೆ
ನವದೆಹಲಿ: ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಹಿಂದಕ್ಕೆ ಕರೆತರುವ ಯೋಜನೆಯ ಬಗ್ಗೆ ವಿದೇಶಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಕೆಲಸ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳಾಂತರಿಸುವ ಯೋಜನೆಯ ನಿಯಮಗಳನ್ನು ಸ್ಪಷ ಪಡಿಸಿದ್ದಾರೆ.
ವಿದೇಶದಲ್ಲಿ ಸಿಲುಕಿರುವ ಭಾರತದ ಬಡ ಬ್ಲೂ ಕಾಲರ್ ಕಾರ್ಮಿಕರು ವಿಶೇಷ ವಿಮಾನಗಳಲ್ಲಿ ಮೊದಲ ಸ್ಥಾನಗಳನ್ನು ಪಡೆಯಲಿದ್ದು, ಮೊದಲು ಅವರನ್ನು ತಾಯ್ನಾಡಿಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದೆ.

ಬ್ಲೂ ಕಾಲರ್ ಕಾರ್ಮಿಕರ ಬಳಿಕ, ವಿವಿಧ ದೇಶಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ನಂತರ ಕೆಲಸಕ್ಕಾಗಿ ಪ್ರಯಾಣಿಸಿದ್ದ ಭಾರತೀಯರು ಹಾಗೂ ಬಳಿಕ ಉಳಿದ ಎಲ್ಲರನ್ನೂ ಭಾರತಕ್ಕೆ ಕರೆತರುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ.

"ಪ್ರಧಾನ ಮಂತ್ರಿ ಬಹಳ ಸ್ಪಷ್ಟವಾಗಿದ್ದಾರೆ. ... ಭಾರತೀಯ ವಲಸಿಗ ಉದ್ಯೋಗಿಗಳಿಗೆ ಮರಳಲು ಮೊದಲ ಆಯ್ಕೆ ಸಿಗಬೇಕು ಎಂಬುದಾಗಿ ಅವರು ಹೇಳಿದ್ದಾರೆ" ಎಂದು ಸರ್ಕಾರಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

೧೯೯೮ರಲ್ಲಿ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ೧೯೯೮ರ ಮೇ ತಿಂಗಳಲ್ಲಿ ಐದು ಭೂಗತ ಪರಮಾಣು ಬಾಂಬ್ಗಳನ್ನು ಪೋಖಾನ್ನಲ್ಲಿ ಸ್ಫೋಟಿಸಿದ ನಂತರ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದಾಗ ಭಾರತದ ವಲಸೆ ಕಾರ್ಮಿಕರಲ್ಲಿ - ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವವರು - ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭಾರತಕ್ಕೆ ಹೇಗೆ ಸಹಾಯ ಮಾಡಿದ್ದಾರೆಂದು ಪ್ರಧಾನಿ ಮೋದಿಯವರು ಸಭೆಯೊಂದರಲ್ಲಿ ವಿವರಿಸಿದ್ದರು.

ಬಿಲಿಯನ್ (೨೦೦ ಕೋಟಿ) ಡಾಲರ್ ಸಂಗ್ರಹಿಸುವ ಸಲುವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುನರುತ್ಥಾನ ಭಾರತ ಬಾಂಡ್ ಹೊರಡಿಸಿತ್ತು. ಇದು ಬಿಲಿಯನ್ ಗಳಿಗಿಂತ ಹೆಚ್ಚು ಹಣವನ್ನು ಒದಗಿಸಿಕೊಟ್ಟಿತ್ತ್ತು ಎಂದು ಮೋದಿ ವಿವರಿಸಿದ್ದರು.

 ಎರಡು ದಶಕಗಳ ನಂತgವೂ, ಭಾರತದ ಬೃಹತ್ ಸಂಖ್ಯೆಯ ವಲಸೆಗಾರರು ಇನ್ನೂ ಹಣವನ್ನು ಸ್ವದೇಶಕ್ಕೆ ಕಳುಹಿಸುತ್ತಿದ್ದಾರೆ. ವಿಶ್ವಬ್ಯಾಂಕ್ ಪ್ರಕಾರ, ೨೦೧೯ ರಲ್ಲಿ ಕೂಡಾ ಭಾರತವು ಇನ್ನೂ ಹಣ ಪಡೆಯುವಲ್ಲಿ ವಿಶ್ವದಲ್ಲೇ  ಅಗ್ರಸ್ಥಾನದಲ್ಲಿತ್ತು. ವಲಸೆಗಾರರು ೮೨ ಬಿಲಿಯನ್ ಡಾಲರುಗಳನ್ನು ಕಳುಹಿಸಿದ್ದಾರೆ ಇದು ಪಶ್ಚಿಮ ಏಷ್ಯಾದ ವಲಸೆ ಕಾರ್ಮಿಕರು ಕಳುಹಿಸಿದ ಹಣದ ಸುಮಾರು ಅರ್ಧದಷ್ಟು ಆಗುತ್ತದೆ.

ಆದರೆ ಕೋವಿಡ್ -೧೯ ಸಾಂಕ್ರಾಮಿಕ ರೋಗವು ಪಶ್ಚಿಮ ಏಷ್ಯಾದ ಭಾರತೀಯ ಕಾರ್ಮಿಕರನ್ನು ತೀವ್ರವಾಗಿ ಬಾದಿಸಿದೆ. ಯೋಜನೆಗಳು ಸ್ಥಗಿತಗೊಂಡಿರುವುದರಿಂದ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ರಾಜ್ಯಗಳಿಗೆ ಇಲ್ಲದಿರುವುದರಿಂದ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾರತೀಯರನ್ನು ನೋಡಿಕೊಳ್ಳುವಂತೆ ಕೇಳಲು ಗಲ್ಫ್ ರಾಷ್ಟ್ರಗಳಿಗೆ ಫೋನ್ಗಳನ್ನು ಮಾಡಿದ್ದರು.

ಆರು ಕೊಲ್ಲಿ ರಾಷ್ಟ್ರಗಳಲ್ಲಿ ಇರುವ  ಭಾರತೀಯ ಕಾರ್ಮಿಕರ ಸಂಖ್ಯೆ ವಿದೇಶದಲ್ಲಿರುವ ೧೨. ಮಿಲಿಯನ್ (೧೨೬ ಲಕ್ಷ) ಭಾರತೀಯರಲ್ಲಿ ಶೇಕಡಾ ೭೦ರಷ್ಟಿದೆ, ಯುನೈಟೆಡ್ ಅರಬ್ ಎಮಿರೇಟ್ಸ್ . ಮಿಲಿಯನ್ (೩೪ ಲಕ್ಷ) ಭಾರತೀಯರಿಗೆ ನೆಲೆಯಾಗಿದ್ದರೆ, . ಮಿಲಿಯನ್ (೨೬ ಲಕ್ಷ) ಜನರು ಸೌದಿ ಅರೇಬಿಯಾದಲ್ಲಿದ್ದಾರೆ. ಕುವೈತ್, ಒಮಾನ್, ಕತಾರ್ ಮತ್ತು ಬಹ್ರೇನ್ನಲ್ಲಿ . ಮಿಲಿಯನ್ (೨೯ ಲಕ್ಷ) ಎನ್ಆರ್ಐಗಳು ಇದ್ದಾರೆ.

ಕೊಲ್ಲಿ ರಾಷ್ಟ್ರಗಳ ಹೊರತಾಗಿ ಇಂಗ್ಲೆಂಡ್, ಕೆನಡಾ, ಅಮೆರಿಕ, ರಶ್ಯಾ, ಸಿಂಗಾಪುರ, ಫಿಲಿಪ್ಪೈನ್ಸ್  ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸಹಸ್ರಾರು ಮಂದಿ ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳುವ ಸಲುವಾಗಿ ಭಾರತೀಯ ರಾಜತಾಂತ್ರಿಕ ಕಚೇರಿಗಳನ್ನು ಸಂಪರ್ಕಿಸಿದ್ದಾರೆ. ರಶ್ಯಾ ಒಂದರಲ್ಲೇ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ೧೫,೦೦೦ ದಷ್ಟು ಇದೆ. ಎಲ್ಲರನ್ನೂ ಭಾರತಕ್ಕೆ ಮರಳಿ ಕರೆತರುವುದು ಅತ್ಯಂತ ಕ್ಲಿಷ್ಟ ಕೆಲಸವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಕ್ವಾರಂಟೈನ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ.

Advertisement