ಮಹಾಕುಂಭ ಮುಗಿಯಿತು....
ಪೂರ್ತಿ ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ ಅಥವಾ ಮೇಲಿನ ಪುಟಗಳಿಗೆ ಹೋಗಿ ʼಮಹಾಕುಂಭ ಮುಗಿಯಿತುʼ ಕ್ಲಿಕ್ ಮಾಡಿರಿ.
Showing posts with label Naredra Modi. Show all posts
Showing posts with label Naredra Modi. Show all posts
Thursday, February 27, 2025
Friday, January 3, 2020
ತಾಕತ್ತಿದ್ದರೆ ಪಾಕಿಸ್ತಾನದ ದೌರ್ಜನ್ಯಗಳ ವಿರುದ್ಧ ದನಿ ಎತ್ತಿ
ತಾಕತ್ತಿದ್ದರೆ
ಪಾಕಿಸ್ತಾನದ ದೌರ್ಜನ್ಯಗಳ ವಿರುದ್ಧ ದನಿ ಎತ್ತಿ
ಪೌರತ್ವ
ಕಾಯ್ದೆ ವಿರೋಧಕ್ಕೆ ಪ್ರಧಾನಿ ಕಿಡಿ, ಕಾಂಗ್ರೆಸ್ಸಿಗೆ ತರಾಟೆ
ತುಮಕೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ 2020 ಜನವರಿ 02ರ ಗುರುವಾರ
ಇಲ್ಲಿ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಅವರು ’ಹಾಲಿ ಪ್ರತಿಭಟನೆಗಳು ಸಂಸತ್ತಿನ ವಿರುದ್ಧ’ ಎಂದು ಟೀಕಿಸಿ, ಕಳೆದ ೭೦ ವರ್ಷಗಳಿಂದ ತನ್ನ
ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳನ್ನು ಎಸಗುತ್ತಿರುವ ಪಾಕಿಸ್ತಾನದ ವಿರುದ್ಧ ದನಿ ಎತ್ತರಿಸಿ ಎಂದು ಕಾಂಗ್ರೆಸ್ ಮತ್ತು ಇತರ ಪ್ರತಿಭಟನಕಾರರಿಗೆ ಕರೆ ನೀಡಿದರು.
ಇಲ್ಲಿನ ಸಿದ್ದಗಂಗೆಯಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಯವರ ಗದ್ದುಗೆಗೆ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.
ಇಲ್ಲಿನ ಸಿದ್ದಗಂಗೆಯಲ್ಲಿ ಲಿಂಗೈಕ್ಯ ಸಿದ್ದಗಂಗಾ ಶಿವಕುಮಾರ ಸ್ವಾಮಿಯವರ ಗದ್ದುಗೆಗೆ ನಮನ ಸಲ್ಲಿಸಿದ ಪ್ರಧಾನಿ, ಬಳಿಕ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.
‘ಭಾರತದಲ್ಲಿ
ಆಶ್ರಯ ಕೋರಿ ಬಂದಿರುವ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ಮತ್ತು ಬೆಂಬಲ ನೀಡುವುದು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರೀಯ ಹೊಣೆಗಾರಿಕೆ’ ಎಂದು
ಪ್ರಧಾನಿ ನುಡಿದರು.
ಭಾರತದ ಸಂಸತ್ತಿನ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಪಾಕಿಸ್ತಾನದ ಕುಕೃತ್ಯಗಳನ್ನು ವಿಶ್ವಮಟ್ಟದಲ್ಲಿ ಬಯಲುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಲು ನಾನು ಬಯಸುತ್ತೇನೆ. ನೀವು ಪ್ರತಿಭಟಿಸಲು ಬಯಸುವಿರಾದರೆ ಕಳೆದ ೭೦ ವರ್ಷಗಳಲ್ಲಿ ಪಾಕಿಸ್ತಾನ ನಡೆಸಿರುವ ಕೃತ್ಯಗಳವಿರುದ್ಧ ದನಿಯೆತ್ತಬೇಕು ಮತ್ತು ಪ್ರತಿಭಟಿಸಬೇಕು ಎಂದು ನಾನು ಬಯಸುತ್ತೇನೆ, ನಿಮಗೆ ಅಂತಹ ಎದೆಗಾರಿಕೆ ಇರಬೇಕು’ ಎಂದು ಮೋದಿ ನುಡಿದರು.
ಭಾರತದ ಸಂಸತ್ತಿನ ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಪಾಕಿಸ್ತಾನದ ಕುಕೃತ್ಯಗಳನ್ನು ವಿಶ್ವಮಟ್ಟದಲ್ಲಿ ಬಯಲುಗೊಳಿಸಬೇಕಾದ ಅಗತ್ಯವಿದೆ ಎಂದು ಹೇಳಲು ನಾನು ಬಯಸುತ್ತೇನೆ. ನೀವು ಪ್ರತಿಭಟಿಸಲು ಬಯಸುವಿರಾದರೆ ಕಳೆದ ೭೦ ವರ್ಷಗಳಲ್ಲಿ ಪಾಕಿಸ್ತಾನ ನಡೆಸಿರುವ ಕೃತ್ಯಗಳವಿರುದ್ಧ ದನಿಯೆತ್ತಬೇಕು ಮತ್ತು ಪ್ರತಿಭಟಿಸಬೇಕು ಎಂದು ನಾನು ಬಯಸುತ್ತೇನೆ, ನಿಮಗೆ ಅಂತಹ ಎದೆಗಾರಿಕೆ ಇರಬೇಕು’ ಎಂದು ಮೋದಿ ನುಡಿದರು.
‘ನೀವು
ಘೋಷಣೆಗಳನ್ನು ಕೂಗಲು ಬಯಸುವುದಾದರೆ ಅಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿರುವ ರೀತಿಯ ವಿರುದ್ಧ ಘೋಷಣೆ ಕೂಗಿ. ನೀವು ರ್ಯಾಲಿ ನಡೆಸಲು
ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದಿಂದ (ಭಾರತಕ್ಕೆ) ಬಂದಿರುವ ದಲಿತರು, ತುಳಿತಕ್ಕೆ ಒಳಗಾದವರ ಪರವಾಗಿ ಸಂಘಟಿಸಿ, ನೀವು ಧರಣಿ ನಡೆಸಲು ಬಯಸುತ್ತೀರಾದರೆ ಅದನ್ನು ಪಾಕಿಸ್ತಾನದ ಕೃತ್ಯಗಳ ವಿರುದ್ಧ ನಡೆಸಿ’ ಎಂದು ಪ್ರಧಾನಿ ಹೇಳಿದರು.
ಕೆಲವು
ವಾರಗಳ ಹಿಂದೆ ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಬೊಟ್ಟು ಮಾಡಿದ ಮೋದಿ, ’ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮತ್ತು ಅವರಿಂದ ಸೃಷ್ಟಿಯಾಗಿರುವ ಪರಿಸರವು ಭಾರತದ ಸಂಸತ್ತಿಗೆ ವಿರುದ್ಧವಾಗಿವೆ’ ಎಂದು
ಹೇಳಿದರು.
‘ಅವರಿಗೆ
ನಮ್ಮ (ಬಿಜೆಪಿ) ವಿರುದ್ಧ ಇರುವ ದ್ವೇಷ ಎಷ್ಟೆಂದರೆ ಇಂತಹುದೇ ದನಿಯನ್ನು ನೀವು ರಾಷ್ಟ್ರದ ಸಂಸತ್ತಿನ ವಿರುದ್ಧ ಕೂಡಾ ಈದಿನಗಳಲ್ಲಿ ಕೇಳಬಹುದು.
ಈ ಜನರು ಪಾಕಿಸ್ತಾನದಿಂದ ಇಲ್ಲಿ ಆಶ್ರಯ ಕೋರಿ ಬಂದಿರುವ ದಲಿತರು, ದಮನಿತರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ’ ಎಂದು
ಪ್ರಧಾನಿ ಹೇಳಿದರು.
ಪಾಕಿಸ್ತಾನ
ಹುಟ್ಟಿದ್ದೇ ಧರ್ಮದ ಆಧಾರದ ಮೇಲೆ ಎಂಬುದಾಗಿ ಬೊಟ್ಟು ಮಾಡಿದ ಮೋದಿ, ಭಾರತವನ್ನು ಕೂಡಾ ಧರ್ಮದ ಹೆಸರಿನಲ್ಲಿ ವಿಭಜಿಸಲಾಯಿತು, ವಿಭಜನೆಯ
ಕಾಲದಲ್ಲಿ ಪಾಕಿಸ್ತಾನದಲ್ಲಿನ ಇತರ ಧರ್ಮಗಳ ಜನರು ದೌರ್ಜನ್ಯಗಳನ್ನು ಎದುರಿಸಿದರು ಎಂದು ಹೇಳಿದರು.
ಹಿಂದುಗಳಿರಲಿ, ಸಿಕ್ಖರಿರಲಿ ಅಥವಾ ಜೈನರಿರಲಿ ಅವರ ವಿರುದ್ಧ ಪಾಕಿಸ್ತಾನದಲ್ಲಿ ಕಾಲಕಳೆದಂತೆ ದೌರ್ಜನ್ಯಗಳು ಹೆಚ್ಚುತ್ತಲೇ ಹೋದವು. ಸಹಸ್ರರು ಮಂದಿ ತಮ್ಮ ಮನೆಗಳನ್ನು ತೊರೆದು ಭಾರತಕ್ಕೆ ನಿರಾಶ್ರಿತರಾಗಿ ಬರಬೇಕಾಯಿತು’ ಎಂದು ಪ್ರಧಾನಿ ವಿವರಿಸಿದರು.
ಹಿಂದುಗಳಿರಲಿ, ಸಿಕ್ಖರಿರಲಿ ಅಥವಾ ಜೈನರಿರಲಿ ಅವರ ವಿರುದ್ಧ ಪಾಕಿಸ್ತಾನದಲ್ಲಿ ಕಾಲಕಳೆದಂತೆ ದೌರ್ಜನ್ಯಗಳು ಹೆಚ್ಚುತ್ತಲೇ ಹೋದವು. ಸಹಸ್ರರು ಮಂದಿ ತಮ್ಮ ಮನೆಗಳನ್ನು ತೊರೆದು ಭಾರತಕ್ಕೆ ನಿರಾಶ್ರಿತರಾಗಿ ಬರಬೇಕಾಯಿತು’ ಎಂದು ಪ್ರಧಾನಿ ವಿವರಿಸಿದರು.
‘ಪಾಕಿಸ್ತಾನವು
ಹಿಂದುಗಳು, ಸಿಕ್ಖರು, ಜೈನರ ವಿರುದ್ಧ ದೌರ್ಜನ್ಯಗಳನ್ನು ಎಸಗಿತು, ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪಾಕಿಸ್ತಾನದ ವಿರುದ್ಧ ಮಾತನಾಡುವುದಿಲ್ಲ, ಬದಲಿಗೆ ಅವರು ತಮ್ಮ ಜೀವ, ಸಹೋದರಿಯರು, ಪುತ್ರಿಯರ ಮಾನ, ತಮ್ಮ ಧರ್ಮ ಉಳಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವವರ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಮೋದಿ ನುಡಿದರು.
‘ಅವರಿಗೆ
(ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು) ತನ್ನ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳನ್ನು ಎಸಗಿರುವ ಪಾಕಿಸ್ತಾನದ ವಿರುದ್ಧ ಮಾತನಾಡಲು ಸಮಯ ಇಲ್ಲ, ಅವರ ಬಾಯಿಗೆ ಬೀಗ ಬೀಳಲು ಕಾರಣವಾದರೂ ಏನು?’ ಎಂದು ಪ್ರಧಾನಿ ಪ್ರಶ್ನಿಸಿದರು.
ಭಯೋತ್ಪಾದನೆ
ವಿರುದ್ಧದ ಭಾರತದ ನೀತಿಯಲ್ಲಿ ಬದಲಾವಣೆ ಆಗಿದೆ. ೩೭೦ನೇ ವಿಧಿ ರದ್ದತಿ ಮೂಲಕ, ಅಲ್ಲಿನ ಜನರ ಭೀತಿ ಮತ್ತು ಅನಿಶ್ಚಿತತೆಯನ್ನು ನಿವಾರಿಸಲು ಯತ್ನ ಮಾಡಲಾಗಿದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್ನಲಿ ಈಗ ಅಭಿವೃದ್ಧಿಯ ಹೊಸ
ಶಕೆ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು.
ರಾಮನ
ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶಾಂತಿ ಹಾಗೂ ಎಲ್ಲರ ಸಹಕಾರದೊಂದಿಗೆ ಭವ್ಯ ರಾಮಮಂದಿರ ನಿರ್ಮಾಣಕ್ಕೆ ದಾರಿ ಕೂಡಾ ಈಗ ಸುಗಮಗೊಂಡಿದೆ ಎಂದು
ಪ್ರಧಾನಿ ನುಡಿದರು.
ಕನ್ನಡದಲ್ಲಿ
ಭಾಷಣ ಆರಂಭ: ಕನ್ನಡದಲ್ಲಿ ತಮ್ಮ ಮಾತು ಆರಂಭಿಸಿದ ಪ್ರಧಾನಿ ಮೋದಿ ’ನಾನು ತುಮಕೂರಿಗೆ ಆಗಮಿಸಿದ್ದು ಸಂತಸವಾಯಿತು. ಮೊದಲಿಗೆ
ನಿಮಗೆಲ್ಲರಿಗೂ ಶುಭಾಶಯಗಳು’
ಎಂದು ಭಾಷಣ ಆರಂಭಿಸಿದರು. ಸಿದ್ದಗಂಗಾ ಶ್ರೀಗಳು ಇಲ್ಲವೆಂಬ ಶೂನ್ಯ ಕಾಡುತ್ತಿದೆ ಎಂದು ಹೇಳಿದ ಪ್ರಧಾನಿ ’ಶ್ರೀಗಳ ಬಗೆಗಿನ ವಸ್ತು ಸಂಗ್ರಹಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ನಾನು ಧನ್ಯನಾದೆ’
ಎಂದು ನುಡಿದರು.
‘ಕರ್ನಾಟಕದ
ಮಹಾನ್ ಸಂತ ಪೇಜಾವರ ಶ್ರೀಗಳು ಬೌತಿಕವಾಗಿ ಇಲ್ಲವಾಗಿರುವುದೂ ನೋವಿನ ಸಂಗತಿ’ ಎಂದು ಹೇಳುವ ಮೂಲಕ ಪ್ರಧಾನಿಯವರು ಪೇಜಾವರ ಶ್ರೀಗಳನ್ನೂ ಸ್ಮರಿಸಿದರು.
ದೇಶದ ಜನರಿಗೆ ಸೌಲಭ್ಯ ಒದಗಿಸಲು ನಾವು ಹಗಲಿರುಳೂ ಶ್ರಮಿಸುತ್ತಿದ್ದೇವೆ. ಜನರಿಗೆ ಮನೆ ಬೇಕು, ಎಲ್ ಪಿಜಿ ಗ್ಯಾಸ್ ಬೇಕು, ವಿದ್ಯುತ್ ಬೇಕು, ನೀರು ಬೇಕು, ಬ್ರಾಡ್ ಬ್ಯಾಂಡ್ ಬೇಕು, ಇವೆಲ್ಲ ವ್ಯವಸ್ಥೆ ಕಲ್ಪಿಸಲು ನಾವು ಶ್ರಮಿಸುತ್ತಿದ್ದೇವೆ ಎಂದು ಮೋದಿ ನುಡಿದರು.
ದೇಶದ ಜನರಿಗೆ ಸೌಲಭ್ಯ ಒದಗಿಸಲು ನಾವು ಹಗಲಿರುಳೂ ಶ್ರಮಿಸುತ್ತಿದ್ದೇವೆ. ಜನರಿಗೆ ಮನೆ ಬೇಕು, ಎಲ್ ಪಿಜಿ ಗ್ಯಾಸ್ ಬೇಕು, ವಿದ್ಯುತ್ ಬೇಕು, ನೀರು ಬೇಕು, ಬ್ರಾಡ್ ಬ್ಯಾಂಡ್ ಬೇಕು, ಇವೆಲ್ಲ ವ್ಯವಸ್ಥೆ ಕಲ್ಪಿಸಲು ನಾವು ಶ್ರಮಿಸುತ್ತಿದ್ದೇವೆ ಎಂದು ಮೋದಿ ನುಡಿದರು.
೨೧ನೇ
ಶತಮಾನದಲ್ಲಿ ಬಲವಾದ ಅಡಿಪಾಯ ಹಾಕಿದ್ದೇವೆ. ನವಭಾರತ ನಿರ್ಮಾಣದ ಕನಸು ಹೊತ್ತಿದ್ದೇವೆ. ಯುವ ಸಮೂಹ ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡಿದೆ. ದೊಡ್ಡ ಬದಲಾವಣೆಗಾಗಿ ಜನರು ಆಶೀರ್ವಾದ ಮಾಡಿದ್ದಾರೆ. ದೇಶವನ್ನು ಬಡತನದ ಸಂಕೋಲೆಯಿಂದ ಮುಕ್ತಗೊಳಿಸೋಣ ಎಂದು ಪ್ರಧಾನಿ ಕರೆ ನೀಡಿದರು.
ಇದೇ ವೇಳೆಯಲ್ಲಿ ನಾವು ಮೂರು ಸಂಕಲ್ಪಗಳನ್ನು ಮಾಡೋಣ. ಪ್ರಕೃತಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಜಲಸಂರಕ್ಷಣೆ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಹೇಳಿದರು.
ಸಿದ್ದಗಂಗಾ ಮಠzಲ್ಲಿ ವಿಭೂತಿ, ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡ ಪ್ರಧಾನಿಯವರು ದಿವಂಗತ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ಶ್ರೀಮಠದಲ್ಲಿ ಸುತ್ತಾಟ ನಡೆಸಿದರು. ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಪ್ರಧಾನಿಯವರನ್ನು ಈ ಸಂದರ್ಭದಲ್ಲಿ ಶಿವಕುಮಾರ ಶ್ರೀಗಳ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಲಾಯಿತು.
ಇದೇ ವೇಳೆಯಲ್ಲಿ ನಾವು ಮೂರು ಸಂಕಲ್ಪಗಳನ್ನು ಮಾಡೋಣ. ಪ್ರಕೃತಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಜಲಸಂರಕ್ಷಣೆ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಹೇಳಿದರು.
ಸಿದ್ದಗಂಗಾ ಮಠzಲ್ಲಿ ವಿಭೂತಿ, ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡ ಪ್ರಧಾನಿಯವರು ದಿವಂಗತ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು, ಶ್ರೀಮಠದಲ್ಲಿ ಸುತ್ತಾಟ ನಡೆಸಿದರು. ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಪ್ರಧಾನಿಯವರನ್ನು ಈ ಸಂದರ್ಭದಲ್ಲಿ ಶಿವಕುಮಾರ ಶ್ರೀಗಳ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಲಾಯಿತು.
ಸಿದ್ಧಗಂಗಾ
ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,
ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ ಜೋಶಿ, ರಾಜ್ಯ ಸರ್ಕಾರದ ಸಚಿವರಾದ ವಿ ಸೋಮಣ್ಣ, ಆರ್
ಅಶೋಕ್ ಹಾಗೂ ಮಾಧುಸ್ವಾಮಿ ಪಾಲ್ಗೊಂಡಿದ್ದರು.
Wednesday, December 18, 2019
ಪ್ರತಿಯೊಬ್ಬ ಪಾಕಿಸ್ತಾನಿ ನಾಗರಿಕನಿಗೆ ಪೌರತ್ವ, ೩೭೦ನೇ ವಿಧಿ ವಾಪಸ್: ವಿಪಕ್ಷಗಳಿಗೆ ಪ್ರಧಾನಿ ಮೋದಿ ಸವಾಲು
ಪ್ರತಿಯೊಬ್ಬ
ಪಾಕಿಸ್ತಾನಿ ನಾಗರಿಕನಿಗೆ ಪೌರತ್ವ, ೩೭೦ನೇ ವಿಧಿ ವಾಪಸ್: ವಿಪಕ್ಷಗಳಿಗೆ
ಪ್ರಧಾನಿ ಮೋದಿ
ಸವಾಲು
ನವದೆಹಲಿ: ಪೌರತ್ವ ಕಾಯ್ದೆ ಬಗ್ಗೆ ಕಾಂಗ್ರೆಸ್ ಪಕ್ಷವು ’ಸುಳ್ಳುಗಳನ್ನು ಹರಡುತ್ತಿದೆ’ ಮತ್ತು
ರಾಷ್ಟ್ರದ ಮುಸ್ಲಿಮರಲ್ಲಿ ಭಯದ ವಾತಾವರಣವನ್ನುಸೃಷ್ಟಿ ಮಾಡುತ್ತಿದೆ ಎಂಬುದಾಗಿ 2019 ಡಿಸೆಂಬರ್ 17ರ ಮಂಗಳವಾರ ಆಪಾದಿಸಿದ
ಪ್ರಧಾನಿ ನರೇಂದ್ರ ಮೋದಿ ಅವರು ’ಧೈರ್ಯ ಇದ್ದರೆ, ಪ್ರತಿಯೊಬ್ಬ ಪಾಕಿಸ್ತಾನಿ ಪ್ರಜೆಗೆ ಭಾರತೀಯ ಪೌರತ್ವ ನೀಡುವುದಾಗಿಯೂ, ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ೩೭೦ನೇ ವಿಧಿಯನ್ನು ವಾಪಸ್ ತರುವುದಾಗಿಯೂ ಘೋಷಿಸಿ ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಸವಾಲೆಸೆದರು.
ಜಾರ್ಖಂಡ್ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ
ಮಾತನಾಡುತ್ತಿದ್ದ ಪ್ರಧಾನಿ, ’ಪೌರತ್ವ ಕಾಯ್ದೆಯು ಭಾರತದ ಯಾವುದೇ ನಾಗರಿಕನ ಯಾವುದೇ ಹಕ್ಕನ್ನೂ ಕಿತ್ತು ಕೊಳ್ಳುವುದಿಲ್ಲ’ ಎಂಬುದಾಗಿ
ಹೇಳಿ, ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಭೀತಿಗಳನ್ನು ನಿವಾರಿಸಲು ಯತ್ನಿಸಿದರು.
‘ಕಾಯ್ದೆಯಿಂದ
ಈ ರಾಷ್ಟ್ರದ ಯಾವ ನಾಗರಿಕನ ಮೇಲೂ ದುಷ್ಪರಿಣಾಮ ಆಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ರಾಜಕೀಯ ಉದ್ದೇಶಕ್ಕಾಗಿ ಮುಸ್ಲಿಮರನ್ನು ಪ್ರಚೋದಿಸುತ್ತಿವೆ’ ಎಂದು
ಅವರು ಆಪಾದಿಸಿದರು.
‘ಕಾಂಗ್ರೆಸ್
ಮತ್ತು ಮಿತ್ರ ಪಕ್ಷಗಳು ಧೈರ್ಯ ಇದ್ದಲ್ಲಿ ಪ್ರತಿಯೊಬ್ಬ
ಪಾಕಿಸ್ತಾನಿ ಪ್ರಜೆಗೂ ಭಾರತೀಯ ಪೌರತ್ವ ನೀಡುವುದಾಗಿಯೂ, ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ೩೭೦ನೇ ವಿಧಿಯನ್ನು ಮತ್ತೆ ತರುವುದಾಗಿಯೂ ಬಹಿರಂಗ ಘೋಷಣೆ ಮಾಡಲಿ ಎಂದು ನಾನು ಸವಾಲು ಹಾಕುವೆ’ ಎಂದು ಪ್ರಧಾನಿ ನುಡಿದರು.
ಪೌರತ್ವ
ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಿವಿಮಾತು ಹೇಳಿದ ಪ್ರಧಾನಿ ನರೇಂದ್ರ ಮೋದಿ ’ಈ ಗೆರಿಲ್ಲಾ ರಾಜಕೀಯ
ನಿಲ್ಲಿಸಿ. ಭಾರತೀಯ ಸಂವಿಧಾನ ನಮ್ಮ ಪವಿತ್ರ ಗ್ರಂಥ. ಕಾಲೇಜುಗಳಲ್ಲಿನ ಯುವ ಜನತೆಗೆ ನಾನು ನಮ್ಮ ನೀತಿಗಳ ಬಗ್ಗೆ ಚರ್ಚೆ ನಡೆಸುವಂತೆ ಮತ್ತು ಪ್ರಜಾತಾಂತ್ರಿಕವಾಗಿ ಪ್ರತಿಭಟಿಸುವಂತೆ ಮನವಿ ಮಾಡುತ್ತೇನೆ. ನಾವು ನಿಮ್ಮನ್ನು ಆಲಿಸುತ್ತೇವೆ. ಆದರೆ ಕೆಲವು ಪಕ್ಷಗಳು, ನಗರ ನಕ್ಸಲರು ನಿಮ್ಮ ಭುಜಗಳಿಗೆ ಕಿಚ್ಚಿಡುತ್ತಿದ್ದಾರೆ’ ಎಂದು
ಹೇಳಿದರು.
ಪಾಕಿಸ್ತಾನ,
ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದ ಆರು ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯು ಭಾನುವಾರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಹಿಂಸೆಗೆ ತಿರುಗಿದ್ದು ಪೊಲೀಸರು ಹಲವಾರು ವಿದ್ಯಾರ್ಥಿಗಳ ಮೇಲೆ ಬೆತ್ತ ಪ್ರಹಾರ ನಡೆಸಿದ್ದರು.
ಪ್ರತಿಭಟನಾ
ಮೆರವಣಿಗೆಯ ಬಳಿಕ ಪೊಲೀಸರು ಜಾಮೀಯ ವಿಶ್ವವಿದ್ಯಾಲಯ ಆವರಣದ ಒಳಕ್ಕೆ ಬಂದರು ಎಂದು ಆಪಾದಿಸಲಾಗಿದ್ದು ಅದಕ್ಕಾಗಿ ಪೊಲೀಸರನ್ನು ಖಂಡಿಸಲಾಗಿದೆ.
ಪೊಲೀಸ್
ಕಾರ್ಯಾಚರಣೆಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಜಾಮೀಯಾದ ಮುಖ್ಯ ಪ್ರಾಕ್ಟರ್ ವಸೀಮ್ ಅಹ್ಮದ್ ಖಾನ್ ಅವರು ’ಪೊಲೀಸ್ ಸಿಬ್ಬಂದಿ ಬಲವಂತವಾಗಿ ವಿಶ್ವವಿದ್ಯಾಲಯವನ್ನು ಪ್ರವೇಶಿಸಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಥಳಿಸಿದರು’
ಎಂದು ಆಪಾದಿಸಿದರು. ಪೊಲೀಸರು ಗ್ರಂಥಾಲಯಕ್ಕೂ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಕ್ಕೆ ಎಳೆದು ಥಳಿಸಿದರು ಎಂದು ವಿದ್ಯಾರ್ಥಿಗಳೂ ದೂರಿದರು.
ಭಾರತದ
ಸಂಸತ್ತು ಪೌರತ್ವ (ತಿದ್ದುಪಡಿ) ಕಾಯ್ದೆ, ೨೦೧೯ಕ್ಕೆ ಕಳೆದ ವಾರ ತನ್ನ ಅನುಮೋದನೆ ನೀಡಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತದೊಂದಿಗೆ ಅದು ಕಾಯ್ದೆಯಾಗಿ ಜಾರಿಗೆ ಬಂದಿದೆ.
ಕಾಯ್ದೆ
ಜಾರಿಯಾದಂದಿನಿಂದ ದೇಶದ ವಿವಿಧ ಭಾಗಗಳಲ್ಲಿ ಪೌರತ್ವ ಕಾಯ್ದೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ವರದಿಯಾಗುತ್ತಿದ್ದು, ಭಾನುವಾರ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡ ಬಳಿಕ ಹಲವಾರು ವಿಶ್ವ ವಿದ್ಯಾಲಯ ಆವರಣಗಳಲ್ಲೂ ಜಾಮಿಯಾ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತ ಪಡಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಪಾಕಿಸ್ತಾನ,
ಆಫ್ಘಾನಿಸ್ಥಾನ ಮತು ಬಾಂಗ್ಲಾದೇಶಗಳ ಹಿಂದು, ಕ್ರೈಸ್ತ, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ ಸಮುದಾಯಗಳ ನಿರಾಶ್ರಿತರಿಗೆ ಅವರು ೨೦೧೪ರ ಡಿಸೆಂಬರ್ ೩೧ರ ಒಳಗಾಗಿ ಧಾರ್ಮಿಕ ಕಿರುಕುಳದ ಕಾರಣಕ್ಕಾಗಿ ತಮ್ಮ ದೇಶ ಬಿಟ್ಟು ಭಾರತಕ್ಕೆ ಬಂದಿದ್ದರೆ ಭಾರತದ ಪೌರತ್ವವನ್ನು ಕಾಯ್ದೆಯು ನೀಡುತ್ತದೆ.
ತಾನು
ಸಂವಿಧಾನದ ರಕ್ಷಣೆಗಾಗಿ ಹೋರಾಡುತ್ತಿರುವುದಾಗಿ ಪ್ರತಿಪಾದಿಸಿರುವ ಕಾಂಗ್ರೆಸ್ ಪಕ್ಷವು ಬಿಜೆಪಿಯು ತನ್ನು ವಿಭಜಕ ರಾಜಕಾರಣದ ಮೂಲಕ ಸಂವಿಧಾನವನ್ನು ಉಲ್ಲಂಘಿಸಿ, ಬೆದರಿಕೆ ಹಾಕಿದೆ’ ಎಂದು ಆಪಾದಿಸಿದೆ.
ಅಧ್ಯಕ್ಷೆ
ಸೋನಿಯಾ ಗಾಂಧಿ, ಸಂಸತ್ ಸದಸ್ಯ ರಾಹುಲ್ ಗಾಂಧಿ, ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪೌರತ್ವ ಕಾಯ್ದೆಯನ್ನು ಹಿಡಿದುಕೊಂಡು ಸರ್ಕಾರದ ವಿರುದ್ಧ ದಾಳಿ ನಡೆಸಲು ಮುಗಿಬಿದ್ದಿದಾರೆ.
ಸೋಮವಾರ
ಟ್ವೀಟ್ ಮಾಡಿದ ರಾಹುಲ್ ಗಾಂಧಿ ಅವರು ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಭಾರತದಲ್ಲಿ ಫ್ಯಾಸಿಸ್ಟರು ಹೂಡಿರುವ ಸಾಮೂಹಿಕ ಧ್ರುವೀಕರಣದ ಅಸ್ತ್ರಗಳಾಗಿವೆ ಎಂದು ಟೀಕಿಸಿ, ಪಕ್ಷವು ಇವುಗಳ ವಿರುದ್ಧದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿ ಇರುತ್ತದೆ’
ತಿಳಿಸಿದ್ದರು.
‘ಇಡೀ
ಸಮಾಜವನ್ನು ಒಡೆಯುವುದು, ಹಿಂಸೆಗೆ ಪ್ರಚೋದನೆ ನೀಡುವುದು, ಯುವಕರ ಹಕ್ಕುಗಳನ್ನು ಕಿತ್ತುಕೊಳ್ಳವುದು, ಕೋಮು ಅಸಾಮರಸ್ಯದ ವಾತಾವರಣ ಹುಟ್ಟು ಹಾಕುವುದು ಮತ್ತು ಇವೆಲ್ಲವನ್ನೂ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುವುದು ಮೋದಿ ಸರ್ಕಾರದ ಉದ್ದೇಶ ಎಂಬುದು ಸ್ಪಷ್ಟವಾಗಿದೆ. ಈ ಸಂಚಿನ ಶಿಲ್ಪಿಗಳು
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಲ್ಲದೆ ಬೇರೆ
ಯಾರೂ ಅಲ್ಲ’ ಎಂದು ಸೋನಿಯಾ ಗಾಂಧಿ ದೂರಿದ್ದಾರೆ.
ವಿದ್ಯಾರ್ಥಿಗಳಿಗೆ
ಬೆಂಬಲ ವ್ಯಕ್ತ ಪಡಿಸಿಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಹಿರಿಯ ನಾಯಕರು ಸೋಮವಾರ ಇಂಡಿಯಾ ಗೇಟ್ ಎದುರು ಸೋಮವಾರ ಪ್ರತಿಭಟನೆ ನಡೆಸಿ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮತ್ತು
ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯ ವಿದಾರ್ಥಿಗಳ ಮೇಲಣ ’ದೌರ್ಜನ್ಯವನ್ನು’ ಪ್ರತಿಭಟಿಸಿದ್ದರು.
ತೃಣಮೂಲ
ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ಎಡ ಪಕ್ಷಗಳು, ತೆಲಂಗಾಣ
ರಾಷ್ಟ್ರೀಯ ಸಮಿತಿ, ಅಸಾಮ್ ಆದ್ಮಿ ಪಾರ್ಟಿ ಮತ್ತು ಜನತಾದಳ (ಜಾತ್ಯತೀತ) ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿವೆ.
ಜಾರ್ಖಂಡ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ’ಜಾರ್ಖಂಡಿನ ಜನತೆ ಹಾಲಿ ವಿಧಾನಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳಲ್ಲಿ ನಿರ್ಭೀತಿಯಿಂದ ಮತದಾನ ಮಾಡಿದ್ದಾರೆ’ ಎಂದು
ಹೇಳಿದರು.
‘ರಾಜ್ಯದಲ್ಲಿ
ಒಂದೇ ದನಿ ಇದೆ- ’ಜಾರ್ಖಂಡ್ ಪುಕಾರ, ಬಿಜೆಪಿ ದುಬಾರ’ ಅಥವಾ ಭಾರತೀಯ ಜನತಾ ಪಕ್ಷಕ್ಕೆ ಎರಡನೇ ಅವಧಿ ನೀಡಲು ಜಾರ್ಖಂಡ್ ಕರೆ ಕೊಟ್ಟಿದೆ ಎಂದು ಮೋದಿ ನುಡಿದರು.
ರಾಜ್ಯದಲ್ಲಿ
ಅಭಿವೃದ್ಧಿಯ ಖಾತರಿನನ್ನು ಕಮಲ ನೀಡಿದ್ದರಿಂದ ಈ ದನಿ ಪ್ರಬಲಗೊಂಡಿದೆ.
’ಕಮಲ’ ಅರಳಿದಾಗ,
ಯುವಕರು, ಮಹಿಳೆಯರು, ಮುದುಕರು, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳಿಗೆ ಅನುಕೂಲವಾಗುತ್ತದೆ’ ಎಂದು
ಪ್ರಧಾನಿ ಹೇಳಿದರು.
‘ಬಿಜೆಪಿಗೆ
ನಿಮ್ಮ ಆಶೀರ್ವಾದ ಕಾಂಗ್ರೆಸ್, ಜೆಎಂಎಂ, ಆರ್ ಜೆಡಿ ಮತ್ತು ಎಡ ಪಕ್ಷಗಳಿಗೆ ನಿದ್ದೆ
ರಹಿತ ರಾತ್ರಿಗಳನ್ನು ಉಂಟು ಮಾಡಿದೆ’ ಎಂದು ಮೋದಿ ಹೇಳಿದರು.
ಜಾರ್ಖಂಡ್
ವಿಧಾನಸಭೆಗೆ ಐದು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಚುನಾವಣೆ ನವೆಂಬರ್ ೩೦ರಂದು ನಡೆದಿತ್ತು. ಐದನೆಯ ಹಾಗೂ ಕೊನೆಯ ಹಂತದ ಚುನಾವಣೆ ಡಿಸೆಂಬರ್ ೨೦ರಂದು ನಡೆಯಲಿದೆ. ಡಿಸೆಂಬರ್ ೨೩ರಂದು ಮತಗಳ ಎಣಿಕೆ ನಡೆಯಲಿದೆ.
Labels:
Citizenship,
Flash News,
Jarkhand,
Naredra Modi,
Nation,
News,
Politics,
ರಾಜಕೀಯ,
ರಾಷ್ಟ್ರೀಯ,
ಸುದ್ದಿ
Subscribe to:
Posts (Atom)