Showing posts with label RSS. Show all posts
Showing posts with label RSS. Show all posts

Wednesday, May 6, 2020

ಕೊರೋನಾ ಬಳಿಕದ ಯುಗದಲ್ಲಿ ಸ್ವದೇಶೀ ಆರ್ಥಿಕತೆಗೆ ಒತ್ತು: ಆರೆಸ್ಸೆಸ್ ಸಲಹೆ

ಕೊರೋನಾ ಬಳಿಕದ ಯುಗದಲ್ಲಿ ಸ್ವದೇಶೀ ಆರ್ಥಿಕತೆಗೆ ಒತ್ತು: ಆರೆಸ್ಸೆಸ್  ಸಲಹೆ
ನವದೆಹಲಿ: ಕೋವಿಡ್ -೧೯ ಯುಗದ ಬಳಿಕ ಸ್ವಾವಲಂಬನೆ ಅಥವಾಸ್ವದೇಶಿಪರ್ಯಾಯ ಆರ್ಥಿಕ ಮಾದರಿ ರೂಪಿಸುವ ಬಗ್ಗೆ ಒತ್ತು ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ ಎಸ್ ಎಸ್) ಜಾಗತಿಕ ಸಾಂಕ್ರಾಮಿಕ ರೋಗದಮೂಲವನ್ನು ಪತ್ತೆ ಹಚ್ಚಲುವಿಸ್ತೃತ ತನಿಖೆ ನಡೆಯಬೇಕು ಎಂದು  2020 ಮೇ  06ರ ಬುಧವಾರ ಹೇಳಿತು.

ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ  (ಸಹ ಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಮತ್ತು ವಿದೇಶಿ ಮಾಧ್ಯಮ ವ್ಯಕ್ತಿಗಳ ನಡುವಿನ ಸಂವಾದಕ್ಕೆ ಮುನ್ನ ಸಂಘವು ವಿತರಿಸಿರುವ ಹಿನ್ನೆಲೆ ಟಿಪ್ಪಣಿಯಲ್ಲಿ ಕೆಲವು ವಿಶಾಲ ನೀತಿ ಹಾಗೂ ಸಮಸ್ಯೆಗಳನ್ನು ವಿವರಿಸಲಾಗಿದೆ.

ಸಾಂಕ್ರಾಮಿಕ ರೋಗದ ಮೂಲ, ಕಾರಣ ಮತ್ತು ಪ್ರಭಾವದ ಬಗ್ಗೆ ತನಿಖೆ ನಡೆಸಲು ವಿಸ್ತೃತ ವಿಚಾರಣೆ ನಡೆಸಲಾಗುವುದು ಎಂದು ನಾವು ಆಶಿಸುತ್ತೇವೆ. ಭವಿಷ್ಯದಲ್ಲಿ ಇಂತಹ ವಿಷಮ ಪರಿಸ್ಥಿತಿಯನ್ನು ನಿವಾರಿಸುವ ನಿಟ್ಟಿನಲ್ಲಿ ವ್ಯವಹರಿಸಲು ಜವಾಬ್ದಾರಿಯುತ ವ್ಯಕ್ತಿಗಳು, ಸಂಸ್ಥೆಗಳು ಮತ್ತು ದೇಶಗಳನ್ನು ಒಳಗೊಂಡಂತೆ ಹೊಸ ಪ್ರಭುತ್ವಗಳನ್ನು ಸೃಷ್ಟಿಸಲು ಇಡೀ ಜಗತ್ತು ಒಗ್ಗೂಡಬೇಕುಎಂದು ಟಿಪ್ಪಣಿ ಹೇಳಿದೆ. ಆದರೆ ಎಲ್ಲೂ ಅದು ಚೀನಾ ಹೆಸರನ್ನು ಪ್ರಸ್ತಾಪಿಸಿಲ್ಲ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ಪ್ರಧಾನಿ ನರೇಂದ್ರ ಮೋದಿಯವರ ಮುಖಂಡತ್ವದಲ್ಲಿ ಕೇಂದ್ರದಲ್ಲಿ ರಚಿಸಲಾಗಿರುವ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೈದ್ಧಾಂತಿಕ ಚಿಲುಮೆಯಾಗಿದೆ ಎಂಬುದು ಗಮನಾರ್ಹ.

ಸಾಂಕ್ರಾಮಿಕ ರೋಗದ ನಂತರ ಸರ್ಕಾರದ ಕಾರ್ಯ ಮತ್ತು ಉದ್ದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ದೇಶೀಯ ಮತ್ತು ಅಂತರಾಷ್ಟೀಯ ನೀತಿಗಳ ಬಗ್ಗೆ ಆರ್ಎಸ್ಎಸ್ ಟಿಪ್ಪಣಿ ಒತ್ತು ನೀಡಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತವು ಕೊರೊನಾವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚೀನಾದ ನಿರ್ವಹಣೆಯನ್ನು ಕಟುವಾಗಿ ಟೀಕಿಸುತ್ತಿದೆ. ಏಷ್ಯಾದ ದೈತ್ಯ ರಾಷ್ಟ್ರವು (ಚೀನಾ) ಅಲ್ಲಿನ ವುಹಾನ್ ನಗರದಲ್ಲಿ ಮೊತ್ತ ಮೊದಲಿಗೆ ವ್ಯಾಪಕವಾಗಿ ಹರಡಿದ ರೋಗದ ತೀವ್ರತೆ ಮತ್ತು ಪ್ರಮಾಣವನ್ನು ವಿಶ್ವಕ್ಕೆ ಸಂವಹನ ಮಾಡುವಲ್ಲಿ ಪಾರದರ್ಶಕವಾಗಿಲ್ಲ ಎಂದು ಅಮೆರಿಕ ಆಪಾದಿಸಿದೆ.

ವೈರಸ್ನಿಂದ ,೦೦,೦೦೦ಕ್ಕೂ ಹೆಚ್ಚು ಜೀವಗಳನ್ನು ಬಲಿಪಡೆದಿರುವ ವೈರಸ್ಸು ಭೂಮಿಯ ಮೂರನೇ ಒಂದು ಭಾಗzಲ್ಲಿ ಆರ್ಥಿಕ ಚಟುವಟಿಕೆಗಳನ್ನೇ ದಿಗ್ಬಂಧನಕ್ಕೆ ಒಳಗಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ವಿನಾಶವನ್ನು ಎದುರಿಸುವಲ್ಲಿ ’‘ಬಂಡವಾಳಶಾಹಿ ಮತ್ತು ಕಮ್ಯುನಿಸಂಸಿದ್ದಾಂತಗಳ ಮಿತಿಗಳನ್ನು ಒತ್ತಿಹೇಳಲು ಆರ್ಎಸ್ಎಸ್ ವಿತರಿಸಿರುವ ಟಿಪ್ಪಣಿಯು ಪ್ರಯತ್ನಿಸಿದೆ.

"ಇಡೀ ಪ್ರಪಂಚದ ಮೇಲೆ ಹೇರಿದ ಭೌತವಾದಿ ಪ್ರಪಂಚದ ದೃಷ್ಟಿಕೋನವು ಆರ್ಥಿಕ ಕುಸಿತ ಮತ್ತು ಪರಿಸರ ನಾಶದ ಹೊಸ ಚಕ್ರಗಳಿಗೆ ನಮ್ಮನ್ನು ತಳ್ಳುತ್ತದೆ. ಇಂತಹ ಸನ್ನಿವೇಶದಲ್ಲಿ, ನಾವು ಸ್ವಾವಲಂಬನೆ ಮತ್ತುಸ್ವದೇಶಿಆಧಾರಿತ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸುವುದು ವಿವೇಕಯುತವಾಗಿದೆ. ಸ್ಥಳೀಯ ಮಾದರಿಯಲ್ಲಿ, ಸ್ಥಳೀಯ ಸಂಪನ್ಮೂಲಗಳು, ಕಾರ್ಯಪಡೆ ಮತ್ತು ಅಗತ್ಯಗಳನ್ನು ಆರ್ಥಿಕ ಚಟುವಟಿಕೆಯಲ್ಲಿ ಸಂಯೋಜಿಸಲಾಗುವುದು, ಪರಿಸರವನ್ನು ಅದು ಗಣನೆಗೆ ತೆಗೆದುಕೊಳ್ಳುತ್ತದೆ" ಎಂದು ಟಿಪ್ಪಣಿ ಹೇಳಿದೆ.

ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತಂದ ನಂತರ ಜಗತ್ತು ಮತ್ತು ಅದರ ಆರ್ಥಿಕತೆಯು ಹೇಗೆ ಮರು ಮಾಪನಾಂಕ ನಿರ್ಣಯಿಸುತ್ತದೆ ಎಂಬ  ಉದ್ವಿಗ್ನ ಚರ್ಚೆಯ ಹಿನ್ನೆಲೆಯಲ್ಲಿ ಆರ್ಎಸ್ಎಸ್  ದೃಷ್ಟಿಕೋನವು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ.

ಕೆಲವು ಅಂತಾರಾಷ್ಟ್ರೀಯ ಕಂಪೆನಿಗಳು ಉತ್ಪಾದನೆಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿದರೆ, ಭಾರತ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಇದರ ಫಲಾನುಭವಿಗಳಾಗುತ್ತವೆ ಎಂದು  ಹೇಳಲಾಗುತ್ತಿದೆ.

‘ಕೋವಿಡ್-೧೯ ಬಿಕ್ಕಟ್ಟಿನ ನಂತರ, ಸ್ಥಳೀಯ ಸ್ವಾವಲಂಬನೆಗೆ ಹಾನಿಯಾಗದಂತೆ, ನಮ್ಮ ನೈಸರ್ಗಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ, ಇನ್ನೊಂದು ಸಮಸ್ಯೆಗೆ ಸಿಲುಕದಂತೆ  ಇತರ ದೇಶಗಳಿಂದ ಹೂಡಿಕೆಯನ್ನು ಹೇಗೆ ಆಕರ್ಷಿಸಬಹುದು ಎಂದು ಭಾರತ ಸರ್ಕಾರ ಮತ್ತು ಇತರ ರಾಜ್ಯ ಆಡಳಿತಗಳು ಯೋಚಿಸಬೇಕು" ಎಂದು ಸಾಂಕ್ರಾಮಿಕ ನಂತರದ ಹೂಡಿಕೆಗಳನ್ನು ಭಾರತ ಹೇಗೆ ಆಕರ್ಷಿಸಬಹುದು ಎಂಬ ಪ್ರಶ್ನೆಗೆ ಹೊಸಬಾಳೆ  ಉತ್ತರಿಸಿದ್ದಾರೆ.

Friday, February 21, 2020

ಮೋದಿ-ಶಾ ಜೋಡಿಯಿಂದ ಮಾತ್ರವೇ ಗೆಲುವು ಅಸಾಧ್ಯ: ಆರ್‌ಎಸ್‌ಎಸ್

ಮೋದಿ-ಶಾ ಜೋಡಿಯಿಂದ ಮಾತ್ರವೇ  ಗೆಲುವು ಅಸಾಧ್ಯ
ದೆಹಲಿಯಲ್ಲಿ ಬಿಜೆಪಿಯನ್ನು ಬಲಪಡಿಸಿ: ಆರ್ಎಸ್ಎಸ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಂದ ಮಾತ್ರವೇ ಎಲ್ಲ ರಾಜ್ಯ ಚುನಾವಣೆಗಳಲ್ಲೂ ಗೆಲುವು ಸಾಧಿಸಲು ಸಾಧ್ಯವಿಲ್ಲ, ಆದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಕ್ಷವನ್ನು ಬುಡಮಟ್ಟದಿಂದಲೇ ಬಲಪಡಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) 2020 ಫೆಬ್ರುವರಿ 20ರ ಗುರುವಾರ ಸಲಹೆ ಮಾಡಿತು.

ಆರ್ಎಸ್ಎಸ್ ಮುಖವಾಣಿಯಾಗಿರುವಆರ್ಗನೈಜರ್ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವಂತೆ ಬಿಜೆಪಿಗೆ ಸೂಚಿಸಿತು..

ದೆಹಲಿಯ ವಿಭಿನ್ನ ಆದೇಶಶೀರ್ಷಿಕೆಯ ಸಂಪಾದಕೀಯದಲ್ಲಿ ಸಂಪಾದಕ ಪ್ರಫುಲ್ಲ ಕೇತ್ಕರ್ ಅವರು ವಿಧಾನಸಭಾ ಚುನಾವಣೆಗಳಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಎಲ್ಲಾ ಸಂದರ್ಭಗಳಲ್ಲೂ ಸಹಾಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ದೆಹಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ, ಮತದಾರರು ಕುರಿತು ಸ್ಪಷ್ಟ ತೀರ್ಪು ನೀಡಿದ್ದಾರೆಎಂದು ಬರೆದರು.

ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಸರ್ಕಾರದ ವಿರುದ್ಧ ಯಾವುದೇ ಅಧಿಕಾರ ವಿರೋಧಿ ಅಲೆ ಗೋಚರಿಸಲಿಲ್ಲ. ನಗರವಾಸಿಗಳಿಗೆ ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಕಡಿತಗೊಳಿಸಿದ್ದ ಕ್ರಮ ಆಮ್ ಆದ್ಮಿ ಪಕ್ಷಕ್ಕೆ ನೆರವಾಯಿತು. ೨೦೧೫ ನಂತರ ಸಾಂಸ್ಥಿಕ ರಚನೆಯನ್ನು ತಳಮಟ್ಟದಲ್ಲಿ ಪುನರುಜ್ಜೀವನಗೊಳಿಸುವಲ್ಲಿ ಬಿಜೆಪಿ ವಿಫಲವಾಗಿದೆ, ಇದು ಚುನಾವಣಾ ಸೋಲಿಗೆ ಪ್ರಮುಖ ಕಾರಣವಾಗಿದೆಎಂದು ಪತ್ರಿಕೆಯ ಸಂಪಾದಕೀಯ ಅಭಿಪ್ರಾಯಪಟ್ಟಿತು.

ಫೆಬ್ರುವರಿ ರಂದು ದೆಹಲಿಯಲ್ಲಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು (ಎಎಪಿ-ಆಪ್) ೭೦ ಸ್ಥಾನಗಳಲ್ಲಿ ೬೨ ಸ್ಥಾನಗಳನ್ನು ಗಳಿಸುವ ಮೂಲಕ ಮತ್ತೊಂದು ಅವಧಿಗೆ ದೆಹಲಿ ಗದ್ದುಗೆಗೆ ಏರಿತ್ತು.  ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿ ಕೇವಲ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು.

Monday, August 29, 2016

RSS says good bye to 'knickers', starts sale of its new uniform

RSS says good bye to 'knickers',
starts sale of its new uniform

 Nagpur: BJP's ideological mentor the Rastriya Swayamsevak Sangh (RSS) on Monday, 29th August 2016 put its newly introduced uniform on sale at its national headquarters here.
This came several months after the right-wing outfit announced its decision to change its `ganvesh' (dropping the trademark knicker for full pant).
The Sangh sympathisers say that it is no big deal and in no way marks a shift in the RSS 'Hindutva' ideology.

However, the move is seen by many as an attempt by the RSS to increase its outreach to help its political wing - BJP - retain power at the Centre in 2019.

For the last three decades, the RSS workers have attended Vjiayadashami rallies in 'purna ganvesh' of half-pants, white short, black topi, brown belt, black shoes and lathi.

Advertisement