Showing posts with label Ram Nath Kovind. Show all posts
Showing posts with label Ram Nath Kovind. Show all posts

Friday, August 14, 2020

ಕೋವಿಡ್: ಮಾನವ ಕೇಂದ್ರಿತ ಸಹಯೋಗಕ್ಕೆ ರಾಷ್ಟ್ರಪತಿ ಕರೆ

 ಕೋವಿಡ್: ಮಾನವ ಕೇಂದ್ರಿತ ಸಹಯೋಗಕ್ಕೆ ರಾಷ್ಟ್ರಪತಿ ಕರೆ

ನವದೆಹಲಿ: ಜಗತ್ತನ್ನು ಬಾಧಿಸಿರುವ ಕೊರೋನಾ ಸಂಕಷ್ಟವನ್ನು ಎದುರಿಸಲು ಅರ್ಥ (ಹಣಕಾಸು) ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಅತ್ಯಂತ ಮುಖ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2020 ಆಗಸ್ಟ್ 14ರ ಶುಕ್ರವಾರ ಹೇಳಿದರು.

೭೪ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರಕೃತಿಯು ಮಾನವರಿಗೆ ಆಧೀನವಾಗಿದೆ ಎಂಬ ಮಿಥ್ಯೆಯನ್ನು ಕಣ್ಣಿಗೆ ಕಾಣದ ವೈರಸ್ ಒಡೆದಿದೆ. ಪ್ರಕೃತಿಯೊಂದಿಗೆ ಸೌಹಾರ್ದವನ್ನು ಆಧರಿಸಿದ ಬದುಕಿನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಸಮರ್ಪಕ ದಾರಿಯಲ್ಲಿ ಸಾಗಲು ಮನುಷ್ಯರಿಗೆ ಈಗಲೂ ಅವಕಾಶವಿದೆ ಎಂಬುದು ನನ್ನ ನಂಬಿಕೆ ಎಂದು ನುಡಿದರು.

೨೦೨೦ನೇ ವರ್ಷದಲ್ಲಿ ನಾವೆಲ್ಲರೂ ಅತ್ಯಂತ ಮಹತ್ವದ ಪಾಠಗಳನ್ನು ಕಲಿತಿದ್ದೇವೆ. ಹವಾಮಾನ ಬದಲಾವಣೆಯಂತೆಯೇ, ವಿಶ್ವ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಹಣೆಬರಹವೂ ಪರಸ್ಪರ ಜೋಡಿಕೊಂಡಿದೆ ಎಂಬ ಪ್ರಜ್ಞೆಯನ್ನು ಸಾಂಕ್ರಾಮಿಕವು ಮೂಡಿಸಿದೆ. ಆದ್ದರಿಂದ ಹಣಕಾಸು ಕೇಂದ್ರಿತ ಸಹಯೋಗಕ್ಕಿಂತ ಮಾನವ ಕೇಂದ್ರಿತ ಸಹಯೋಗ ಮುಖ್ಯ ಎಂದು ನನ್ನ ನಂಬಿಕೆ ಎಂದು ಅವರು ಹೇಳಿದರು.

ಕೊರೋನಾವೈರಸ್ ವಿರುದ್ಧದ ಹೋರಾಟದ ವೇಳೆಯಲ್ಲಿ ಜೀವ ಮತ್ತು ಜೀವನ ಎರಡನ್ನೂ ರಕ್ಷಿಸುವ ಅಗತ್ಯದ ಬಗ್ಗೆ ಗಮನ ಹರಿಸುವುದು ಮುಖ್ಯ. ಹಾಲಿ ಬಿಕ್ಕಟ್ಟು, ಪ್ರತಿಯೊಬ್ಬನ ಹಿತಾಸಕ್ತಿ, ಮುಖ್ಯವಾಗಿ ರೈತರು ಮತ್ತು ಸಣ್ಣ ಉದ್ಯಮಿಗಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್ಥಿಕತೆಗೆ ಪುನಶ್ಚೇತನ ನೀಡುವ ಸಮರ್ಪಕ ಸುಧಾರಣೆಗಳನ್ನು ತರುವ ಅವಕಾಶವನ್ನು ಒದಗಿಸಿದೆ ಎಂದು ಕೋವಿಂದ್ ನುಡಿದರು.

ವರ್ಷದ ಸ್ವಾತಂತ್ರ್ಯ ದಿನವು ಕೋವಿಡ್-೧೯ ಉಂಟುಮಾಡಿರುವ ಹಿಂದೆಂದೂ ಕಾಣದ ಬಿಕ್ಕಟ್ಟಿನ ಮಧ್ಯೆ ಬಂದಿದೆ. ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನಸಮೂಹ ಸೇರುವುದನ್ನು ನಿವಾರಿಸಲು ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಕಳೆದ ತಿಂಗಳು ಮಾರ್ಗಸೂಚಿ ಹೊರಡಿಸಿದೆ ಎಂದು ಅವರು ಹೇಳಿದರು.

೭೪ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ದೇಶದ ಒಳಗೆ ಮತ್ತು ಹೊರಗಿರುವ ಭಾರತದ ಎಲ್ಲ ಜನರನ್ನು ಅಭಿನಂದಿಸಲು ನನಗೆ ಅತ್ಯಂತ ಸಂತಸವಾಗುತ್ತದೆ. ಸ್ವತಂತ್ರ ರಾಷ್ಟ್ರದ ಪ್ರಜೆಗಳಾಗಿರುವುದಕ್ಕೆ ಯುವ ಭಾರತವು ವಿಶೇಷವಾಗಿ ಹೆಮ್ಮೆ ಪಡಬೇಕು ಎಂದು ಅವರು ನುಡಿದರು.

ಮಹಾತ್ಮ ಗಾಂಧಿಯವರು ನಮ್ಮ ಸ್ವಾತಂತ್ರ್ಯ ಚಳವಳಿಯ ಮಾರ್ಗದರ್ಶಿ ಬೆಳಕಾಗಿದ್ದರು ಎಂಬುದು ನಮ್ಮ ಅದೃಷ್ಟ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರಿಗೆ ಇದ್ದ ಆಸ್ಥೆ ನಮ್ಮ ಗಣರಾಜ್ಯದ ಮಂತ್ರವಾಗಿದೆ. ಗಾಂಧೀಜಿಯವರನ್ನು ಪುನಃ ಕಂಡುಕೊಳ್ಳುತ್ತಿರುವ ಯುವ ತಲೆಮಾರನ್ನು ನೋಡಲು ನನಗೆ ಸಂತಸವಾಗುತ್ತದೆ ಎಂದು ರಾಷ್ಟ್ರಪತಿ ಹೇಳಿದರು.

ಅತ್ಯಂತ ಜನ ನಿಬಿಡವಾಗಿರುವ ನಮ್ಮ ವಿಶಾಲವಾದ ದೇಶದಲ್ಲಿ ವಿವಿಧ ಸಂದರ್ಭಗಳ ನಡುವೆ ಸಾಂಕ್ರಾಮಿಕದ ಮುಂದಿಟ್ಟಿರುವ ಸವಾಲು ಎದುರಿಸಲು ಅಸಾಧಾರಣ ಯತ್ನಗಳು ನಮಗೆ ಬಲನೀಡಿವೆ. ರಾಜ್ಯ ಸರ್ಕಾರಗಳು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ ನಿರ್ವಹಿಸುತ್ತಿದ್ದರೆ, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಕೋವಿಂದ್ ನುಡಿದರು.

ಸಾಂಕ್ರಾಮಿಕದ ಬಲವಾದ ಪೆಟ್ಟು ಬಡವರು, ದಿನಗೂಲಿ ಕಾರ್ಮಿಕರ ಮೇಲೆ ಬಿದ್ದಿದೆ. ಬಿಕ್ಕಟ್ಟಿನ ಯುಗದಲ್ಲಿ ಸಾಂಕ್ರಾಮಿಕವನ್ನು ತಡೆಯುವ ಯತ್ನಗಳ ಜೊತೆಗೇ ಹಲವಾರು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನಾ ಜಾರಿಯ ಮೂಲಕ ಸಾಂಕ್ರಾಮಿಕದ ಪರಿಣಾಮವಾಗಿ ಉದ್ಯೋಗ ಕಳೆದುಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುತ್ತಿರುವ, ಬದುಕು ಅಸ್ತವ್ಯಸ್ತಗೊಂಡಿರುವವರ ನೋವು ತಗ್ಗಿಸಲು ಯತ್ನಿಸುವ ಮೂಲಕ ಕೋಟ್ಯಂತರ ಜನರಿಗೆ ಸರ್ಕಾರವು ಬದುಕು ಕಲ್ಪಿಸಿದೆ ಎಂದು ರಾಷ್ಟ್ರಪತಿ ನುಡಿದರು.


ಯಾವುದೇ ಕುಟುಂಬವೂ ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕಾಗಿ ಅಗತ್ಯವುಳ್ಳ ಜನರಿಗೆ ಉಚಿತ ಧಾನ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳೂ ಸುಮಾರು ೮೦ ಕೋಟಿ ಜನರಿಗೆ ಅಭಿಯಾನದ ಮೂಲಕ ಪಡಿತರ ಖಾತರಿ ನೀಡಲಾಗಿದೆ ಎಂದು ಕೋವಿಂದ್ ವಿವರಿಸಿದರು.

ಸಾಂಕ್ರಾಮಿಕದ ಪರಿಣಾಮವಾಗಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡ ಜಗತ್ತಿನ ಯಾವುದೇ ಮೂಲೆಯಲ್ಲಿರುವ ನಮ್ಮ ಜನರ ನೆರವಿಗಾಗಿ ಸರ್ಕಾರ ವಂದೇ ಭಾರತ ಮಿಷನ್ ಮೂಲಕ ನೆರವಾಗುತ್ತಿದ್ದು ಅಂತಹ ಲಕ್ಷಾಂತರ ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತರಲಾಗಿದೆ ಎಂದು ಅವರು ಹೇಳಿದರು.

ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ದಿಟ್ಟ ಯೋಧರು ಕಾರ್ಯದಲ್ಲಿ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಭಾರತ ಮಾತೆಯ ಮಕ್ಕಳು ರಾಷ್ಟ್ರದ ಗೌರವಕ್ಕಾಗಿ ಬದುಕುತ್ತಿದ್ದಾರೆ ಮತ್ತು ಹುತಾತ್ಮರಾಗುತ್ತಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಬಲಿದಾಕ್ಕಾಗಿ ಇಡೀ ರಾಷ್ಟ್ರವೇ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಅವರ ಕುಟುಂಬ ಸದಸ್ಯರ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಕೃತಜ್ಞತೆಯ ಭಾವನೆ ಹೊಂದಿದ್ದಾರೆ ಎಂದು ಕೋವಿಂದ್ ನುಡಿದರು.

ಭಾರತದ ಸ್ವಾವಲಂಬನೆ ಎಂದರೆ ಸ್ವಾವಲಂಬಿಯಾಗಲು ಸಮರ್ಥವಾಗುವುದು, ವಿಶ್ವದಿಂದ ಬೇರ್ಪಡುವುದು ಅಥವಾ ಅಂತರ ನಿರ್ಮಿಸುವುದು ಎಂದಲ್ಲ. ಜಾಗತಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭಾರತವು ಪಾಲ್ಗೊಳ್ಳುವುದು ಮತ್ತು ಅಲ್ಲಿ ತನ್ನ ವಿಶಿಷ್ಟ ಗುರುತನ್ನು ಉಳಿಸಿಕೊಳ್ಳುವುದು ಕೂಡಾ ಸ್ವಾವಲಂಬನೆಯ ಅರ್ಥವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

Thursday, May 14, 2020

ರಾಷ್ಟ್ರಪತಿ ಮಿತವ್ಯಯ: ಹೊಸ ಲಿಮೋಸಿನ್ ಕಾರಿಗೆ ಎಳ್ಳುನೀರು, ವೇತನ ಕಟ್

ರಾಷ್ಟ್ರಪತಿ ಮಿತವ್ಯಯ:  ಹೊಸ ಲಿಮೋಸಿನ್ ಕಾರಿಗೆ ಎಳ್ಳುನೀರು, ವೇತನ ಕಟ್
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಂದಿನ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ೧೦ಕೋಟಿ ರೂಪಾಯಿ ಮೌಲ್ಯದ ಹೊಚ್ಚ ಹೊಸ ಲಿಮೋಸಿನ್ ಕಾರಿನಲ್ಲಿ ಸಂಚರಿಸುವುದಿಲ್ಲ, ಅಲ್ಲದೆ ರಾಷ್ಟ್ರಪತಿ ಭವನವು ಸರ್ಕಾರಿ ಔತಣ ಕೂಟದ ಅದ್ದೂರಿ ವೆಚ್ಚಗಳಿಗೆ ಕತ್ತರಿ ಹಾಕಲಿದೆ. ಕೊರೋನಾವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಕ್ರಮಗಳನ್ನು 2020 ಮೇ 14ರ ಗುರುವಾರ ಕೈಗೊಂಡಿದ್ದಾರೆ.

ರಾಷ್ಟ್ರಪತಿ ಭವನದ ವಿಸ್ತಾರವಾದ ಆವರಣದಲ್ಲಿ ಹೂವಿನ ಅಲಂಕಾರಗಳನ್ನು ಸೀಮಿvಗೊಳಿಸಲೂ ರಾಷ್ಟ್ರಪತಿ ನಿರ್ಧರಿಸಿದ್ದಾರೆ. ಮುಂದಿನ ಒಂದು ವರ್ಷ, ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರಪತಿ ಎಸ್ಟೇಟಿನಲ್ಲಿ ಯಾವುದೇ ಹೊಸ ನಿರ್ಮಾಣ Zಟುವಟಿಕೆಗಳಿಗೂ ಅನುಮೋದನೆ ನೀಡಲಾಗುವುದಿಲ್ಲ.

ಲಕ್ಷಾಂತರ ಭಾರತೀಯರು, ವಿಶೇಷವಾಗಿ ವಲಸೆ ಕಾರ್ಮಿಕರು, ಬಡ ಕುಟುಂಬಗಳು ಮತ್ತು ದೈನಂದಿನ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು - ಕೊರೋನಾ ಹರಡುವಿಕೆ ತಡೆಯಲು ವಿಧಿಸಲಾಗಿರುವ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ  ಸಾಧ್ಯವಾದಷ್ಟೂ ವೆಚ್ಚ ಕಡಿತ ಮಾಡಿ ಉಳಿತಾಯ ಮಾಡಲು ಗಣರಾಜ್ಯದ ಉನ್ನತ ಕಚೇರಿಯಾಗಿರುವ ರಾಷ್ಟ್ರಪತಿ ಭವನ ನಿರ್ಧರಿಸಿದೆ.

ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ (ಎಸ್ ೬೦೦) ಪುಲ್ಮನ್ ಗಾರ್ಡ್ ಹಿಂದಿನ ಆವೃತ್ತಿಯನ್ನು ಬಳಸುತ್ತಿರುವ ರಾಷ್ಟ್ರಪತಿಯವರ ಬಳಕೆಗಾಗಿ ವರ್ಷ ಹೊಚ್ಚ ಹೊಸ ಲಿಮೋಸಿನ್ ಕಾರನ್ನು ಖರೀದಿಸಬೇಕಾಗಿತ್ತು. ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಕಾರನ್ನು ಮುಂದಿನ ಗಣರಾಜ್ಯೋತ್ಸವದ ಮೊದಲು ತರಿಸಲು ನಿರ್ಧರಿಸಲಾಗಿತ್ತು. ಸದರಿ ಯೋಜನೆಯನ್ನು ಈಗ ರದ್ದುಪಡಿಸಲಾಗಿದೆ.

ರಾಷ್ಟ್ರಪತಿ ಭವನವು ಔತಣಕೂಟಗಳ ವೆಚ್ಚಕ್ಕೂ ಕತ್ತರಿ ಹಾPಲು ತೀರ್ಮಾನಿಸಿದೆ. ಮುಂದಿನ ಎಲ್ಲಾ ಔತನ ಕೂಟಗಳ ಮೆನು ಮತ್ತು ಅತಿಥಿ ಪಟ್ಟಿಯನ್ನು ಟ್ರಿಮ್ ಮಾಡಲಾಗುತ್ತದೆ. ನಾವು ರಾಜ್ಯ ಅತಿಥಿಗೆ ಸಂಪೂರ್ಣ ಗೌರವವನ್ನು ಖಚಿತಪಡಿಸುತ್ತೇವೆ ಆದರೆ ದುಂದುವೆಚ್ಚ ಪ್ರದರ್ಶಿಸದಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಯಾವುದೇ ಅದ್ದೂರಿ ವ್ಯವಸ್ಥೆಗಳು ಇರುವುದಿಲ್ಲ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ವಾಸ್ತವವಾಗಿ ವಿಶ್ವಾದ್ಯಂತ ರಾಷ್ಟ್ರಗಳು ಕೋವಿಡ್ ಸಾಂಕ್ರಾಮಿಕ ರೋಗ ವಿರುದ್ಧದ ಸಮರದಲ್ಲಿ ಮಗ್ನವಾಗಿರುವುದರಿಂದ ತತ್ ಕ್ಷಣ ಭಾರತಕ್ಕೆ ಯಾರೇ ಗಣ್ಯರು ಭೇಟಿ ನೀಡುವ ಸಾಧ್ಯತೆಗಳಿಲ್ಲ.
ವೆಚ್ಚವನ್ನು ಶೇಕಡಾ ೨೦ರಷ್ಟು ಕಡಿಮೆ ಮಾಡುವುದರಿಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಬಹುದು ಎಂದು ಅಧಿಕಾರಿಯೊಬ್ಬರು ನುಡಿದರು.

ರಾಷ್ಟಪತಿ ಭವನದ ಎಸ್ಟೇಟ್ ಎಲ್ಲಾ ಹೊಸ ನಿರ್ಮಾಣ ಕಾರ್ಯಗಳನ್ನು ಸಹ ನಿಲ್ಲಿಸಲಿದೆ, ದರೆ ನಡೆಯುತ್ತಿರುವ ಸೀಮಿತ ಕೆಲಸ ಮುಂದುರೆಯುತ್ತದೆ.

ಹಣವನ್ನು ಬಡ ಜನರಿಗಾಗಿ ಬಳಸಿಕೊಳ್ಳಲಾಗುವುದು. ಆದರೆ ಕೆಲಸ ಸ್ಥಗಿತ ಅಂದರೆ ಗುತ್ತಿಗೆ ಕಾರ್ಮಿಕರಿಗೆ ಹಣವನ್ನು ಕಡಿತಗೊಳಿಸುವುದು ಎಂದರ್ಥವಲ್ಲ. ರಾಷ್ಟ್ರಪತಿ ಭವನದಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಕಡಿಮೆ ಮಾಡುವುದು ಎಂದರ್ಥ.

ರಾಷ್ಟಪತಿ ರಾಮನಾಥ್ ಕೋವಿಂದ್ ಅವರು ತಮ್ಮ ವೇತನದಿಂದ ಲಕ್ಷ ರೂ.ಗಳನ್ನು ಪಿಎಂ ಕೇರ್ಸ್ ಫಂಡ್ಗೆ ನೀಡಿದ್ದಾರೆ. ರಾಷ್ಟ್ರಪತಿ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಾ ಪಿಎಂ ಕೇರ್ಸ್ ನಿಧಿಗೆ ಹೆಚ್ಚುವರಿ ೧೮ ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

ರಾಷ್ಟ್ರಪತಿ ವೇತನ ಶೇಕಡಾ ೩೦ರಷ್ಟು ಕಡಿತ:
ಕೋವಿಡ್ -೧೯ ಸಾಂಕ್ರಾಮಿಕ ವಿರುದ್ಧದ ಹೋರಾಟದ ನಿಟ್ಟಿನಲ್ಲಿ ಸರ್ಕಾರಕ್ಕೆ ನೆರವು ನೀಡುವ ಸಲುವಾಗಿ ತಮ್ಮ ವೇತನದಲ್ಲಿ ಶೇಕಡಾ ೩೦ರಷ್ಟನ್ನು ಕಡಿತಗೊಳಿಸಲು ಮತ್ತು ಇತರ ಮಿತವ್ಯಯ ಕ್ರಮಗಳನ್ನು ಅನುಸರಿಸಲು ರಾಷ್ಟಪತಿ ರಾಮನಾಥ್ ಕೋವಿಂದ್ ಅವರು ನಿರ್ಧರಿಸಿದ್ದಾರೆ.

ಸಾಮಾಜಿಕ ಅಂತರ ಪಾಲನೆ ಮತ್ತು ವೆಚ್ಚ ಕನಿಷ್ಠಗೊಳಿಸುವ ಸಲುವಾಗಿ ರಾಷ್ಟ್ರಪತಿಯವರ ದೇಶೀ ಪ್ರವಾಸಗಳನ್ನೂ ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

Advertisement